ಮುಂಗಾರು ಮಳೆಗೆ ದೇಹ ಬೆಚ್ಚಗಾಗಿಸುವ ‘ಗ್ರೀನ್ ಚಿಕನ್ ಚಾಪ್ಸ್’
ಶ್ರೀರಾಮ್ ನಾಯಕ್, Jul 2, 2020, 8:17 PM IST
ಚಿಕನ್ ಎಂದರೇನೇ ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರೂರತ್ತದೆ. ಇನ್ನು ಈ ಚಿಕನ್ ನಿಂದ ತರತರಹದ ರೆಸಿಪಿಗಳನ್ನು ತಯಾರಿಸಿದರೆ ಹೇಗಿರಬೇಡ ಹೇಳಿ?ಚಿಕನ್ ಮಸಾಲ, ಟಿಕಾ ಮುರ್ಗ್, ಮುರ್ಗ್ ಮಲಾಯ್ ವಾಲಾ, ಕೇರಳ ಚಿಕನ್ ರೋಸ್ಟ್, ಚಿಕನ್ ಚೆಟ್ಟಿನಾಡ್, ಚಿಕನ್ ಲಾಲಿಪಾಪ್, ಬಟರ್ ಚಿಕನ್, ಚಿಕನ್ ದಮ್ ಬಿರಿಯಾನಿ, ಚಿಕನ್ ಸುಕ್ಕ, ರೋಸ್ಟೆಡ್ ಚಿಕನ್ ಮಸಾಲ, ಚಿಕನ್ 65, ಚಿಕನ್ ಬಾದಾಮ್ ರೋಲ್, ಪಂಜಾಬಿ ಲೆಮನ್ ಚಿಕನ್, ದಹಿ ಚಿಕನ್, ಆಂಧ್ರ ಶೈಲಿಯ ಚಿಕನ್ ಕರಿ.. ಹೀಗೆ ಚಿಕನ್ ನ ತರಹೇವಾರಿ ಅಡುಗೆಗಳು ನಮ್ಮಲ್ಲಿ ಜನಪ್ರಿಯವಾಗಿವೆ.
ಇನ್ನು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಾಂಪ್ರದಾಯಿಕ ಶೈಲಿಯ ಹಲವು ಚಿಕನ್ ಡಿಶಸ್ ಗಳು ಜನಪ್ರಿಯಗೊಂಡಿವೆ. ಇದೇ ಸಾಲಿನಲ್ಲಿ ಬರುವ ಗ್ರೀನ್ ಚಿಕನ್ ಚಾಪ್ಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಗ್ರೀನ್ ಚಿಕನ್ ಚಾಪ್ಸ್
ಬೇಕಾಗುವ ಸಾಮಗ್ರಿಗಳು: ಚಿಕನ್ 1 ಕೆ.ಜಿ., ಹಸಿಮೆಣಸು 10, ಚಕ್ಕೆ 2, ಲವಂಗ 7, ಗೋಡಂಬಿ 5, ಬೆಣ್ಣೆ 2 ಚಮಚ ,ಕೊತ್ತಂಬರಿ ಸೊಪ್ಪು 1ಕಟ್ಟು, ಪುದೀನಾ ಸೊಪ್ಪು 1 ಕಟ್ಟು , ಮೊಸರು 1 ಕಪ್, ಎಣ್ಣೆ 2 ಚಮಚ, ಈರುಳ್ಳಿ 4 , ಶುಂಠಿ-ಬೆಳ್ಳುಳ್ಳಿ ಪೇಸ್ಟ್ 3 ಚಮಚ, ಅರಿಶಿನ ಪುಡಿ 2 ಚಮಚ, ಧನಿಯಾ ಪುಡಿ 2 ಚಮಚ, ತುಪ್ಪ 3 ಚಮಚ, ಗರಂ ಮಸಾಲ ಪುಡಿ 1 ಚಮಚ, ಪೆಪ್ಪರ್ ಪುಡಿ 1ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಚಿಕನ್ ಚಾಪ್ಸ್ ಗೆ ಮೊದಲು ಮಸಾಲವನ್ನು ತಯಾರಿಸಬೇಕು. ಮಿಕ್ಸಿ ಜಾರಿಗೆ ಹಸಿಮೆಣಸು, ಚಕ್ಕೆ, ಲವಂಗ, ಗೋಡಂಬಿ , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ನುಣ್ಣಗೆ ಆಗುವವರೆಗೆ ರುಬ್ಬಿಕೊಳ್ಳಿ. ನಂತರ ಚಿಕನ್ನ್ನು ನೀರಿನಲ್ಲಿ ತೊಳೆದು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್ ಮಾಡಿಕೊಳ್ಳಿ. ತದನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವ ತನಕ ಫ್ರೈ ಮಾಡಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಚಿಕನ್,ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 5 ರಿಂದ 10 ನಿಮಿಷ ಹಾಗೇ ಬಿಡಿ. ಆಮೇಲೆ ರುಬ್ಬಿಟ್ಟ ಮಸಾಲೆ ಮತ್ತು ಧನಿಯಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 15 ರಿಂದ 20 ನಿಮಿಷಗಳವರೆಗೆ ಬೇಯಿಸಿರಿ. ನಂತರ ಬೆಣ್ಣೆ ಅಥವಾ ತುಪ್ಪ ,ಗರಂ ಮಸಾಲ,ಪೆಪ್ಪರ್ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಹಾಗೇ ಬಿಡಿ .ರುಚಿಕರವಾದ ಗ್ರೀನ್ ಚಿಕನ್ ಚಾಪ್ಸ್ ಚಪಾತಿ,ನಾನ್ ಹಾಗೂ ಅನ್ನ ಜೊತೆಗೂ ಸಹ ಸವಿಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!