ಮುಂಗಾರು ಮಳೆಗೆ ದೇಹ ಬೆಚ್ಚಗಾಗಿಸುವ ‘ಗ್ರೀನ್ ಚಿಕನ್ ಚಾಪ್ಸ್’
ಶ್ರೀರಾಮ್ ನಾಯಕ್, Jul 2, 2020, 8:17 PM IST
ಚಿಕನ್ ಎಂದರೇನೇ ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರೂರತ್ತದೆ. ಇನ್ನು ಈ ಚಿಕನ್ ನಿಂದ ತರತರಹದ ರೆಸಿಪಿಗಳನ್ನು ತಯಾರಿಸಿದರೆ ಹೇಗಿರಬೇಡ ಹೇಳಿ?ಚಿಕನ್ ಮಸಾಲ, ಟಿಕಾ ಮುರ್ಗ್, ಮುರ್ಗ್ ಮಲಾಯ್ ವಾಲಾ, ಕೇರಳ ಚಿಕನ್ ರೋಸ್ಟ್, ಚಿಕನ್ ಚೆಟ್ಟಿನಾಡ್, ಚಿಕನ್ ಲಾಲಿಪಾಪ್, ಬಟರ್ ಚಿಕನ್, ಚಿಕನ್ ದಮ್ ಬಿರಿಯಾನಿ, ಚಿಕನ್ ಸುಕ್ಕ, ರೋಸ್ಟೆಡ್ ಚಿಕನ್ ಮಸಾಲ, ಚಿಕನ್ 65, ಚಿಕನ್ ಬಾದಾಮ್ ರೋಲ್, ಪಂಜಾಬಿ ಲೆಮನ್ ಚಿಕನ್, ದಹಿ ಚಿಕನ್, ಆಂಧ್ರ ಶೈಲಿಯ ಚಿಕನ್ ಕರಿ.. ಹೀಗೆ ಚಿಕನ್ ನ ತರಹೇವಾರಿ ಅಡುಗೆಗಳು ನಮ್ಮಲ್ಲಿ ಜನಪ್ರಿಯವಾಗಿವೆ.
ಇನ್ನು ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಸಾಂಪ್ರದಾಯಿಕ ಶೈಲಿಯ ಹಲವು ಚಿಕನ್ ಡಿಶಸ್ ಗಳು ಜನಪ್ರಿಯಗೊಂಡಿವೆ. ಇದೇ ಸಾಲಿನಲ್ಲಿ ಬರುವ ಗ್ರೀನ್ ಚಿಕನ್ ಚಾಪ್ಸ್ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ.
ಗ್ರೀನ್ ಚಿಕನ್ ಚಾಪ್ಸ್
ಬೇಕಾಗುವ ಸಾಮಗ್ರಿಗಳು: ಚಿಕನ್ 1 ಕೆ.ಜಿ., ಹಸಿಮೆಣಸು 10, ಚಕ್ಕೆ 2, ಲವಂಗ 7, ಗೋಡಂಬಿ 5, ಬೆಣ್ಣೆ 2 ಚಮಚ ,ಕೊತ್ತಂಬರಿ ಸೊಪ್ಪು 1ಕಟ್ಟು, ಪುದೀನಾ ಸೊಪ್ಪು 1 ಕಟ್ಟು , ಮೊಸರು 1 ಕಪ್, ಎಣ್ಣೆ 2 ಚಮಚ, ಈರುಳ್ಳಿ 4 , ಶುಂಠಿ-ಬೆಳ್ಳುಳ್ಳಿ ಪೇಸ್ಟ್ 3 ಚಮಚ, ಅರಿಶಿನ ಪುಡಿ 2 ಚಮಚ, ಧನಿಯಾ ಪುಡಿ 2 ಚಮಚ, ತುಪ್ಪ 3 ಚಮಚ, ಗರಂ ಮಸಾಲ ಪುಡಿ 1 ಚಮಚ, ಪೆಪ್ಪರ್ ಪುಡಿ 1ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಚಿಕನ್ ಚಾಪ್ಸ್ ಗೆ ಮೊದಲು ಮಸಾಲವನ್ನು ತಯಾರಿಸಬೇಕು. ಮಿಕ್ಸಿ ಜಾರಿಗೆ ಹಸಿಮೆಣಸು, ಚಕ್ಕೆ, ಲವಂಗ, ಗೋಡಂಬಿ , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಮೊಸರನ್ನು ಹಾಕಿ ಚೆನ್ನಾಗಿ ನುಣ್ಣಗೆ ಆಗುವವರೆಗೆ ರುಬ್ಬಿಕೊಳ್ಳಿ. ನಂತರ ಚಿಕನ್ನ್ನು ನೀರಿನಲ್ಲಿ ತೊಳೆದು ನಿಮಗೆ ಬೇಕಾಗುವ ರೀತಿಯಲ್ಲಿ ಕಟ್ ಮಾಡಿಕೊಳ್ಳಿ. ತದನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿಯನ್ನು ಹಾಕಿ ಕಂದು ಬಣ್ಣ ಬರುವ ತನಕ ಫ್ರೈ ಮಾಡಿ. ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ನಂತರ ಚಿಕನ್,ಅರಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 5 ರಿಂದ 10 ನಿಮಿಷ ಹಾಗೇ ಬಿಡಿ. ಆಮೇಲೆ ರುಬ್ಬಿಟ್ಟ ಮಸಾಲೆ ಮತ್ತು ಧನಿಯಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 15 ರಿಂದ 20 ನಿಮಿಷಗಳವರೆಗೆ ಬೇಯಿಸಿರಿ. ನಂತರ ಬೆಣ್ಣೆ ಅಥವಾ ತುಪ್ಪ ,ಗರಂ ಮಸಾಲ,ಪೆಪ್ಪರ್ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಹಾಗೇ ಬಿಡಿ .ರುಚಿಕರವಾದ ಗ್ರೀನ್ ಚಿಕನ್ ಚಾಪ್ಸ್ ಚಪಾತಿ,ನಾನ್ ಹಾಗೂ ಅನ್ನ ಜೊತೆಗೂ ಸಹ ಸವಿಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu Kashmir: ಗುಲ್ ಮಾರ್ಗ್, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…
ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?
Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ
Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?
Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು
MUST WATCH
ಹೊಸ ಸೇರ್ಪಡೆ
Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!