Yakshagana; ಚರ್ಚೆಗೆ ಗುರಿಯಾಗಿದ್ದ ಹಾರಾಡಿ ರಾಮಗಾಣಿಗರ ನಾಟಕೀಯ ಹಿರಣ್ಯಕಶಿಪು

ಮರೆಯಲಾಗದ ಮಹಾನುಭಾವರು...ನೆನಪುಗಳು ಸಾವಿರಾರು...

ವಿಷ್ಣುದಾಸ್ ಪಾಟೀಲ್, Sep 14, 2023, 5:33 PM IST

1-ssad

ಆ ಕಾಲ ಸಂಪೂರ್ಣ ಸಾಂಪ್ರದಾಯಿಕ ಯಕ್ಷಗಾನಕ್ಕೆ ಮೀಸಲಾಗಿದ್ದು, ಹೊಸತನದ ಪ್ರಭಾವ ಇನ್ನೂ ನಡು ಬಡಗುತಿಟ್ಟಿನ ಯಕ್ಷಗಾನಕ್ಕೆ ಬೀರದ ಕಾಲ. ಪ್ರೇಕ್ಷಕರೆಲ್ಲರೂ ಸಿನಿಮಾ, ಇನ್ನಿತರ ಕಲೆಗಳ ಪ್ರಭಾವಕ್ಕೆ ಒಳಗಾಗದೇ ಇದ್ದ ಕಾಲ. ರಾಮಾಯಣ, ಮಹಾಭಾರತ ಮತ್ತು ಭಾಗವತದ ಕಥೆಗಳು ಮಾತ್ರ ಬಯಲಾಟದಲ್ಲಿ  ಮೇಳೈಸುತ್ತಿದ್ದವು. 1930 ರಿಂದ 1960 ರ ವರೆಗೆ ಹಾರಾಡಿ ರಾಮಗಾಣಿಗರು ವಿಜೃಂಭಿಸಿದ ಕಾಲ. ಆ ವೇಳೆ ಅವರ ಪ್ರಧಾನ ಪಾತ್ರಗಳೆಲ್ಲವೂ ಜನಮಾನಸದಲ್ಲಿ ನೆಲೆಯಾಗಿದ್ದವು. ಅದರಲ್ಲೂ ಅವರು ನಿರ್ವಹಿಸುತ್ತಿದ್ದ ನಾಟಕೀಯ ವೇಷಭೂಷಣದ ಹಿರಣ್ಯಕಶಿಪು ಪಾತ್ರ ಬಹುವಾಗಿ ಚರ್ಚೆಗೆ ಗುರಿಯಾಗಿತ್ತು.

ಇದನ್ನೂ ಓದಿ : Yakshagana; ಮರೆಯಲಾಗದ ಮಹಾನುಭಾವರು: ಗತ್ತು ಗೈರತ್ತಿನ ರಾಮ ಗಾಣಿಗರು

ಕಲಾ ಪ್ರೇಮಿಗಳು, ವಿಮರ್ಶಕರು ಪ್ರಶ್ನಿಸುವ ಅವಕಾಶವಿದ್ದ ಆ ಕಾಲದಲ್ಲಿ ಶುದ್ಧ ಯಕ್ಷಗಾನದ ಮೇರು ಕಲಾವಿದರೊಬ್ಬರು ಈ ರೀತಿ ಹೊಸ ತನವನ್ನು ತೋರಿ ಯಕ್ಷಗಾನೇತರ ಆಹಾರ್ಯವನ್ನು ರಂಗಕ್ಕೆ ತಂದುದು ಸಾಮಾನ್ಯ ಪ್ರೇಕ್ಷಕರಾದಿ ಹಲವರ ವಿರೋಧಕ್ಕೂ ಕಾರಣವಾಗಿತ್ತು.

ಖಳ ರಾಕ್ಷಸ ಹಿರಣ್ಯಕಶಿಪು ಪಾತ್ರವನ್ನು ಎರಡನೇ ವೇಷಧಾರಿ ನಿರ್ವಹಿಸುವುದು ಹಿಂದಿನಿಂದಲೂ ನಡೆದು ಬಂದ ಕ್ರಮ. ಆ ವೇಷವನ್ನೂ ಇಂದಿಗೂ ನಾಟಕೀಯ(ಯಕ್ಷಗಾನ ಭಾಷೆಯ ಪಾರ್ಟ್ ವೇಷ) ಆಹಾರ್ಯದಲ್ಲಿ ರಂಗಕ್ಕೆ ತರಲಾಗುತ್ತಿದೆ. ಕೆಲ ಯುವ ಕಲಾವಿದರು ಖಳ ರಾಜವೇಷದಲ್ಲೂ ಮಾಡಿ ಬದಲಾವಣೆ ತಂದಿದ್ದಾರೆ.

ರಾಮಗಾಣಿಗರ ಎಲ್ಲಾ ಪಾತ್ರಗಳನ್ನು ಬಹುವಾಗಿ ಮೆಚ್ಚಿಕೊಂಡ ಕಲಾಪ್ರೇಮಿಗಳು ನಾಟಕೀಯ ಶೈಲಿಯ ಪಾತ್ರವನ್ನು ತೆಗಳುತ್ತಿದ್ದರು. ಈ ವಿಚಾರವನ್ನು ಯಕ್ಷದೇಗುಲ ಸಂಸ್ಥೆ ಹೊರತಂದ ಡಿ.ರಾಮಗಾಣಿಗರ ಜನ್ಮ ಶತಾಬ್ದಿ ವಿಶೇಷ ಸಂಕಲನ ”ಯಕ್ಷರಂಗದ ಕೋಲ್ಮಿಂಚು” ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಸಹಕಲಾವಿದರೂ ಇದೊಂದು ಹೊಸತನ ಬೇಕಿತ್ತಾ ಎನ್ನುವ ಪ್ರಶ್ನೆಯನ್ನು ತಮ್ಮಲ್ಲೇ ಕೇಳಿಕೊಳ್ಳುತ್ತಿದ್ದರು ಹೊರತು ಬಹಿರಂಗವಾಗಿ ವಿರೋಧಿಸಲು ಸಾಧ್ಯವಾಗಲಿಲ್ಲವಂತೆ.

ಕೃಷಿ ಧನಿಕರ ‘ವೀಳ್ಯ’ (ಹಣ)ದಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟಗಳಲ್ಲಿ ಅಂದಿನ ಜನಪ್ರಿಯ ಪ್ರಸಂಗಗಳಲ್ಲಿ ಒಂದಾದ ಪ್ರಹ್ಲಾದ ಚರಿತ್ರೆಯಲ್ಲಿ ‘ ಹಾರಾಡಿ ರಾಮ ಗಾಣಿಗರ ಪಾರ್ಟಿನ ವೇಷ ಕಾಣ್ಕ್ (ಕುಂದ ಗನ್ನಡದಲ್ಲಿ ನೋಡಬೇಕು)..ಅನ್ನುವವರ ಸಂಖ್ಯೆಯೂ ಇತ್ತು. ಅದೊಂದು ಹೊಸತನವಾಗಿ ಕಾಣುತ್ತಿದ್ದರು ಎಂದು ”ವಿಲೋಕನ” ಪುಸ್ತಕದಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಕೆ.ಎಂ.ರಾಘವ ನಂಬಿಯಾರ್ ಉಲ್ಲೇಖಿಸಿದ್ದಾರೆ.

ವಿಶೇಷವೆಂದರೆ ಹಿರಣ್ಯಕಶಿಪು ವೇಷಭೂಷಣವೊಂದು ನಾಟಕೀಯ ಹೊರತುಪಡಿಸಿ ಅವರ ಪ್ರವೇಶ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಿತ್ತು. ಪ್ರಹ್ಲಾದನಲ್ಲಿ”ಎಲ್ಲಿ ನಿನ್ನ ಹರಿ….”ಎಂದು ರಾಮ ಗಾಣಿಗರು ಪಾತ್ರದಲ್ಲಿ ಪರಕಾಯ ಪ್ರವೇಶಗೈದು ಘರ್ಜಿಸಿದಾಗ ಪುಟ್ಟ ಮಕ್ಕಳಂತೂ ಬೆಚ್ಚಿ ಬೀಳುತ್ತಿದ್ದರಂತೆ.

ಮುಂಬಯಿ ಮಹಾನಗರಿಗೆ ಪ್ರದರ್ಶನವೊಂದಕ್ಕೆ ತೆರಳಿದ್ದ ರಾಮಗಾಣಿಗರು ಕೆಲವರ ಒತ್ತಾಯಕ್ಕೆ ಮಣಿದು ಕಿರೀಟವಿಲ್ಲದೆ ತಲೆಬಿಟ್ಟ ಹಿರಣ್ಯಕಶಿಪು ಪಾತ್ರ ಮಾಡಿ ಮಾನಸಿಕ ಸಂಕಟಕ್ಕೆ ಗುರಿಯಾಗಿದ್ದರಂತೆ, ಆ ಬಳಿಕ ಕೆಲವು ವರ್ಷ ಮುಂಬಯಿಯಲ್ಲಿ ಪ್ರದರ್ಶನಗಳನ್ನೇ ನೀಡಿರಲಿಲ್ಲವಂತೆ.

* ರಾಮಗಾಣಿಗರು ನಿರ್ವಹಿಸಿದ ಇತರ ಕೆಲ ಪಾತ್ರಗಳ ಕೆಲ ಫೋಟೋಗಳು ಕೆಮರಾದಲ್ಲಿ ಸೆರೆಯಾಗಿದ್ದರೂ ಹಿರಣ್ಯ ಕಶಿಪುವಿನ ಪಾತ್ರ ಮಾತ್ರ ಲಭ್ಯವಾಗಿಲ್ಲ. ಇಲ್ಲಿ ಸಾಂದರ್ಭಿಕವಾದ ಭಾವಚಿತ್ರವನ್ನು ರಾಮಗಾಣಿಗರ ಫೋಟೋದೊಂದಿಗೆ ಪ್ರಕಟಿಸಲಾಗಿದೆ.

(ಈ ಸರಣಿ ಮುಂದುವರಿಯಲಿದೆ)

ಟಾಪ್ ನ್ಯೂಸ್

Congress ಜಗದೀಶ್‌ ಶೆಟ್ಟರ್‌ಗೆ ಆಪರೇಷನ್‌ ಹಸ್ತದ ಹೊಣೆ

Congress ಜಗದೀಶ್‌ ಶೆಟ್ಟರ್‌ಗೆ ಆಪರೇಷನ್‌ ಹಸ್ತದ ಹೊಣೆ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

1-wsadasd

Asian Games ಇಂದಿನಿಂದ ಆ್ಯತ್ಲೆಟಿಕ್ಸ್‌ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ

Green revolution ಆಹಾರ ಭದ್ರತೆಯ ಹರಿಕಾರ ಸ್ವಾಮಿನಾಥನ್‌ ಚಿರಸ್ಥಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

MOSSAD 4

ಪುಟ್ಟ ದೇಶದ ಈ ಇಂಟೆಲಿಜೆನ್ಸ್‌ ಏಜೆನ್ಸಿ ಭಾರತದ ʻರಾʼ ಗಿಂತಲೂ ಪವರ್‌ಫುಲ್‌..!

14–black-pepper

Black Pepper; ಮನೆಮದ್ದು … ಹಲವು ಆರೋಗ್ಯ ಸಮಸ್ಯೆಗಳಿಗೆ ಕಾಳುಮೆಣಸು ರಾಮಬಾಣ

those-2-runs-africas-unforgettable-world-cup-hero-lance-klusener

Cricket Stories; ಆ 2 ರನ್…ದ.ಆಫ್ರಿಕಾ ಮರೆಯಲಾಗದ ವಿಶ್ವಕಪ್ ಹೀರೋ ಲ್ಯಾನ್ಸ್ ಕ್ಲೂಸನರ್

Explained: ಸಾವಿರಾರು ಜನರ ಸಾವು…ಈಗ ಕದನ ವಿರಾಮ: ಏನಿದು ಅಜರ್‌ ಬೈಜಾನ್‌-ಅರ್ಮೇನಿಯಾ ಸಂಘರ್ಷ

Explained:ಸಾವಿರಾರು ಜನರ ಸಾವು…ಈಗ ಕದನ ವಿರಾಮ: ಏನಿದು ಅಜರ್‌ ಬೈಜಾನ್‌-ಅರ್ಮೇನಿಯಾ ಸಂಘರ್ಷ

MUST WATCH

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

ಹೊಸ ಸೇರ್ಪಡೆ

Congress ಜಗದೀಶ್‌ ಶೆಟ್ಟರ್‌ಗೆ ಆಪರೇಷನ್‌ ಹಸ್ತದ ಹೊಣೆ

Congress ಜಗದೀಶ್‌ ಶೆಟ್ಟರ್‌ಗೆ ಆಪರೇಷನ್‌ ಹಸ್ತದ ಹೊಣೆ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

Today World Heart Day ; ನಮ್ಮ ಹೃದಯ ನಾವೇ ಕಾಳಜಿ ವಹಿಸೋಣ

1-wsadasd

Asian Games ಇಂದಿನಿಂದ ಆ್ಯತ್ಲೆಟಿಕ್ಸ್‌ ಸ್ಪರ್ಧೆ; ಭಾರತಕ್ಕೆ ಗರಿಷ್ಠ ಪದಕಗಳ ನಿರೀಕ್ಷೆ

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Today ಆರ್ಟ್‌ ಆಫ್ ಲಿವಿಂಗ್‌ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

Tomorrow ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ದಿಲ್ಲಿಗೆ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.