ರಾಜಕೀಯಕ್ಕೆ ವೆಂಕಟ್‌ ಎಂಟ್ರಿ!


Team Udayavani, Mar 28, 2017, 11:16 AM IST

Venkat-(22).jpg

ನಟ, ನಿರ್ದೇಶಕ, ನಿರ್ಮಾಪಕ ವೆಂಕಟ್‌ ಈಗ ಇನ್ನೊಂದು ಸುದ್ದಿಯಲ್ಲಿದ್ದಾರೆ! ಅರೆ, ಮತ್ಯಾರ ಮೇಲೆ ಕೈ ಮಾಡಿ ಸುದ್ದಿಯಾಗಿದ್ದಾರೆ ಅಂತೆಲ್ಲಾ ಕಲ್ಪನೆ ಬೇಡ. ವಿಷಯವಿಷ್ಟೇ. ವೆಂಕಟ್‌ ಈಗ ಹೊಸದೊಂದು ರಾಜಕೀಯ ಪಕ್ಷ ಕಟ್ಟುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಆ ಪಕ್ಷದ ಕಾರ್ಯಕರ್ತರನ್ನೇ ಸ್ಪರ್ಧಿಗಳನ್ನಾಗಿಸಲು ತಯಾರಿ ನಡೆಸುತ್ತಿದ್ದಾರೆ. ಹೌದು, ಈ ಮಾತು ಸುಳ್ಳಲ್ಲ. ದೇವರಾಣೆಗೂ ವೆಂಕಟ್‌ ಅವರ ಬಾಯಲ್ಲೇ ಬಂದ ಸತ್ಯವಿದು.

ಹುಚ್ಚ ವೆಂಕಟ್‌ ಸೇನೆಗೆ ನಾಲ್ಕು ವರ್ಷ ಪೂರ್ಣಗೊಂಡಿದೆ. ಆ ಖುಷಿಯಲ್ಲಿ ವೆಂಕಟ್‌ ಈಗ ಸೇನೆ ಹುಡುಗರನ್ನೊಳಗೊಂಡ “ಹುಚ್ಚ ವೆಂಕಟ್‌ ಪಾರ್ಟಿ’ ಎಂದು ನಾಮಕರಣ ಮಾಡಿ ಇಷ್ಟರಲ್ಲೇ ಚುನಾವಣೆಗೂ ಸ್ಪರ್ಧಿಸಲು ರೆಡಿಯಾಗಿದ್ದಾರೆ. 2018 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅವರ ಪಾರ್ಟಿಯೂ ಸ್ಪರ್ಧಿಸಲಿದೆ. ವೆಂಕಟ್‌ ಪರ ಕೆಲಸ ಮಾಡುವ ಹುಡುಗರನ್ನೇ ಆಯ್ಕೆ ಮಾಡಿ, ಪ್ರತಿ ಕ್ಷೇತ್ರದಲ್ಲೂ ಸ್ಪರ್ಧಿಯನ್ನಾಗಿಸಲಿದ್ದಾರೆ.

ಅವರನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿರುವ ವೆಂಕಟ್‌, ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಸಂಘಟನೆ ಮಾಡಲಿದ್ದಾರಂತೆ. ಆದರೆ, ಅವರು ಮಾತ್ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದು ಸ್ಪಷ್ಟ. ಅವರ ಸೇನೆ ಹುಡುಗರು ಸ್ಪರ್ಧಿಗಳಾಗಲಿದ್ದು, ಯಾರು ಸ್ಪರ್ಧೆಗೆ ನಿಲ್ಲುತ್ತಾರೋ ಅವರೇ ತಮ್ಮ ಚುನಾವಣೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕು ಎಂಬುದು ವೆಂಕಟ್‌ ಮಾತು. ಆದರೆ, ಅವರ ಪಾಲಿಸಿಯನ್ನೇ ಎಲ್ಲರೂ ಫಾಲೋ ಮಾಡಬೇಕೆಂಬುದು ಅವರ ಉದ್ದೇಶ.

ಅವರಿಗೆ ಒಂದೇ ಒಂದು ಸ್ಥಾನ ಗೆದ್ದರೂ ಪಕ್ಷ ಕಟ್ಟಿದ್ದಕ್ಕೂ ಸಾರ್ಥಕವಂತೆ. ಹಾಗೊಂದು ವೇಳೆ ಚುನಾವಣೆಯಲ್ಲಿ ಸೋತರೆ, ಅದು ಬದಲಾವಣೆ ಮಾಡಿಕೊಳ್ಳಲು ಸಿಕ್ಕ ಅವಕಾಶ ಎಂದು ಭಾವಿಸಲಿದ್ದಾರಂತೆ. ಮುಂದಿನ ಒಂದು ತಿಂಗಳಲ್ಲಿ “ಹುಚ್ಚ ವೆಂಕಟ್‌ ಪಾರ್ಟಿ’ ಎಂದು ನಾಮಕರಣ ಮಾಡಿ ಮುಂದಿನ ಚುನಾವಣೆಗೆ ತಯಾರು ಮಾಡಿಕೊಳ್ಳಲಿದ್ದಾರಂತೆ. ಅಂತೂ ರಾಜಕೀಯಕ್ಕೂ ಎಂಟ್ರಿ ಕೊಡುವ ಮನಸ್ಸು ಮಾಡಿರುವ ಹುಚ್ಚವೆಂಕಟ್‌, ತಮ್ಮ ಮದುವೆ ಬಗ್ಗೆಯೂ ಮನಸ್ಸು ಮಾಡಿದ್ದಾರೆ.

ಅವರು ಮದುವೆ ಆಗುವುದು ಪಕ್ಕಾ ಅಂತ ಸ್ಪಷ್ಟಪಡಿಸಿದ್ದು, ಈಗಾಗಲೇ ಒಂದು ಹುಡುಗಿಯನ್ನು ನೋಡಿದ್ದು, ಅವರನ್ನೇ ಮದುವೆ ಮಾಡಿಕೊಳ್ಳಲಿದ್ದಾರಂತೆ. ಇನ್ನೂ ಒಂದೂವರೆ ವರ್ಷದವರೆಗೆ ಮದುವೆ ಸುದ್ದಿ ಇಲ್ಲ. ಅಲ್ಲಿಯವರೆಗೆ ಪ್ರೀತಿ ಮಾಡಿಕಂಡಿದ್ದು, ಆ ಬಳಿಕ ಮದುವೆ ಬಗ್ಗೆ ಯೋಚನೆ ಮಾಡಲಿದ್ದಾರಂತೆ. ಇನ್ನು, ಅವರ “ಪೊರ್ಕಿ ಹುಚ್ಚ ವೆಂಕಟ್‌’ಗೆ ಯು/ಎ ಸಟಿಫಿಕೆಟ್‌ ಸಿಕ್ಕಿದ್ದು, ಶೀಘ್ರವೇ ಬಿಡುಗಡೆ ಮಾಡಲಿದ್ದಾರಂತೆ.

ಸಿನಿಮಾದಲ್ಲಿ ಪ್ರೀತಿ, ತಾಯಿ ಸೆಂಟಿಮೆಂಟ್‌, ವಿಷ್ಣುವರ್ಧನ್‌ ಅವರ ತತ್ವಾದರ್ಶಗಳು, ರೈತಪರ ಕಾಳಜಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಬೇಕು, ಐಟಂ ಸಾಂಗ್‌ ಬ್ಯಾನ್‌ ಮಾಡಬೇಕು ಎಂಬ ವಿಷಯಗಳಿವೆಯಂತೆ. ಇಷ್ಟು ದಿನ ಅವರು “ನನ್‌ ಮಗಂದ್‌’, “ನನ್‌ ಎಕ್ಕಡ’ ಅಂತ ಯಾಕೆ ಹೇಳುತ್ತಿದ್ದರು ಎಂಬುದಕ್ಕೆ ಈ ಚಿತ್ರದಲ್ಲಿ ಉತ್ತರ ಕೊಟ್ಟಿದ್ದಾರಂತೆ. ಅಂದಹಾಗೆ, ವೆಂಕಟ್‌ಗೆ ಈ ಚಿತ್ರದಲ್ಲಿ  ಸೌಮ್ಯ ಮತ್ತು ರಚನಾ ಎಂಬ ನಾಯಕಿಯರಿದ್ದಾರೆ.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.