ಸ್ವಚ್ಛತಾ ಯಂತ್ರಗಳಿಗೆ ಸಿಎಂ ಚಾಲನೆ
Team Udayavani, May 23, 2017, 12:34 PM IST
ಬೆಂಗಳೂರು: ಉದ್ಯಾನನಗರಿ ಬೆಂಗಳೂರನ್ನು ಆರೋಗ್ಯಕರ ಹಾಗೂ ಸ್ವಚ್ಛ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಬಿಬಿಎಂಪಿ ಖರೀದಿಸಿರುವ ಎಂಟು ಬೃಹತ್ ಯಾಂತ್ರೀಕೃತ ಸ್ವಚ್ಛತಾ ವಾಹನಗಳು ಹಾಗೂ ಸಣ್ಣ ಸ್ವಚ್ಛತಾ ಯಂತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಚಾಲನೆ ನೀಡಿದರು.
ವಿಧಾನಸೌಧದ ಮುಂಭಾಗ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಛತಾ ವಾಹನಗಳಿಗೆ ಸಿ ಎಂ ಚಾಲನೆ ನೀಡಿದರು. ನಂತರ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, “ಅತಿ ದಟ್ಟಣೆಯ ಕಾರಿಡಾರ್ಗಳು, ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ವಿಭಜಕ ಹಾಗೂ ಪಾದಚಾರಿ ಮಾರ್ಗದ ಬಳಿಯ ಮಣ್ಣು, ದೂಳಿನ ಕಣಧಿಗಳನ್ನು ಈ ಯಂತ್ರಗಳು ಸ್ವಚ್ಛಗೊಳಿಸಲಿವೆ. ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ಉಂಟಾಧಿಗುವ ಕಿರಿಕಿರಿ ತಪ್ಪಿಸಬಹುದು. ಜನರ ಆರೋಗ್ಯ ಸಂರಕ್ಷಿಸುವ ಜತೆಗೆ ರಸ್ತೆಗಳ ಸ್ವಚ್ಛತೆ ಕಾಪಾಡಲು ಯಂತ್ರಗಳನ್ನು ಬಳಸಲಾಗುತ್ತಿದೆ,’ಎಂದರು.
ವರ್ಷಕ್ಕೆ 46 ಕೋಟಿ ರೂ. ಉಳಿತಾಯ: ಮೇಯರ್ ಜಿ.ಪದ್ಮಾಪತಿ ಮಾತನಾಡಿ, “ಪ್ರತಿ ಯಾಂತ್ರೀಕೃತ ಸ್ವಚ್ಛತಾ ಯಂತ್ರಕ್ಕೂ ಜಿ.ಪಿ.ಎಸ್. ಸಾಧನ ಅಳವಡಿಸಲಾಗುಧಿವುದು. ಈ ಮೂಲಕ ಅವುಗಳ ಕಾರ್ಯಾಚರಣೆ ಮೇಲೆ ನಿಗಾ ಇಡಲಾಗುವುದು. ಅದರ ಮೇಲ್ವಿಧಿಚಾರಣೆಗೆ ನಿಯಂತ್ರಣ ಕೊಠಡಿ ಸ್ಥಾಪಿಸಲಾಗುವುದು. ಈ ಯಂತ್ರಗಳ ಬಳಕೆಯಿಂದ ಸ್ವಚ್ಛತಾ ಕಾರ್ಯಕ್ಕೆ ತಗಲುವ ವೆಚ್ಚದಲ್ಲಿ ವಾರ್ಷಿಕ ಕನಿಷ್ಠ 46 ಕೋಟಿ ರೂ. ಉಳಿತಾಯವಾಗಲಿದೆ. ಐದು ವರ್ಷಗಳಲ್ಲಿ ಪಾಲಿಕೆಗೆ 230 ಕೋಟಿ ರೂ. ಉಳಿತಾಯವಾಗಲಿದೆ,’ ಎಂದು ಹೇಳಿದರು.
ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾತನಾಡಿ, “ಬೃಹತ್ ಯಾಂತ್ರೀಕೃತ ಸ್ವಚ್ಛತಾ ಯಂತ್ರವು ನಿತ್ಯ ರಾತ್ರಿ 10 ಗಂಟೆಯಿಂದ ನಸುಕಿನ 4 ಗಂಟೆವರೆಗೆ 50 ಕಿ.ಮೀ. ಹಾಗೂ ಸಣ್ಣ ಯಂತ್ರವು ನಿತ್ಯ 30 ಕಿ.ಮೀ. ಮಾರ್ಗ ಸ್ವಚ್ಛಗೊಳಿಸುವ ಸಾಮರ್ಥಯ ಹೊಂದಿದೆ. ಒಂಬತ್ತು ಯಂತ್ರಗಳಿಂದ ನಿತ್ಯ 430 ಕಿ.ಮೀ. ಉದ್ದದ ಮಾರ್ಗ ಸ್ವಚ್ಛಗೊಳಿಸುವ ಉದ್ದೇಶವಿದೆ. ಅದರಂತೆ 200 ಕಿ.ಮೀ. ಉದ್ದದ ವಿಭಜಕ ಮಾರ್ಗ ಹಾಗೂ ಪ್ರಮುಖ ರಸ್ತೆಗಳನ್ನು ಎರಡು ದಿನಕ್ಕೊಮ್ಮೆ ಸ್ವಚ್ಛಗೊಳಿಸುವ ವ್ಯವಸ್ಥೆ ಕಲ್ಪಿಸುವ ಚಿಂತನೆ ಇದೆ,’ ಎಂದು ಹೇಳಿದರು. ಉಪಮೇಯರ್ ಎಂ.ಆನಂದ್ ಇತರರು ಉಪಸ್ಥಿತರಿದ್ದರು.
ಸ್ವಚ್ಛತಾ ಯಂತ್ರದ ವಿವರ: ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 32 ಬೃಹತ್ ಹಾಗೂ ಸಣ್ಣ ಯಾಂತ್ರೀಕೃತ ಸ್ವಚ್ಛತಾ ಯಂತ್ರ ಖರೀದಿಗೆ 38.40 ಕೋಟಿ ರೂ. ಹಾಗೂ 14.72 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿತ್ತು. ಅದರಂತೆ ತಲಾ 1.09 ಕೋಟಿ ರೂ. ದರದಂತೆ 8.68 ಕೋಟಿ ರೂ. ವೆಚ್ಚದಲ್ಲಿ ಎಂಟು ಯಂತ್ರ ಖರೀದಿಸಲಾಗಿದೆ. ಐದು ವರ್ಷಗಳ ನಿರ್ವಹಣೆಗೆ ಪ್ರತಿ ವಾಹನಕ್ಕೆ 2.48 ಕೋಟಿ ರೂ.ನಂತೆ 19.86 ಕೋಟಿ ರೂ. ವೆಚ್ಚವಾಗಲಿದೆ. ಇನ್ನು 48 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ಯಂತ್ರ ಖರೀದಿಸಲಾಗಿದ್ದು, ಐದು ವರ್ಷದ ನಿರ್ವಹಣೆಗೆ 1.51 ಕೋಟಿ ರೂ. ಭರಿಸಬೇಕಾಗುತ್ತದೆ.
ನಿರ್ವಹಣೆ ಮೊತ್ತ ಬಿಡುಗಡೆ ಹೇಗೆ?: ಬೃಹತ್ ಯಂತ್ರಗಳೂ ನಿತ್ಯ ಕನಿಷ್ಠ 50 ಕಿ.ಮೀ. ಉದ್ದದ ಮಾರ್ಗ ಸ್ವಚ್ಛಗೊಳಿಸಬೇಕು. ಯಂತ್ರಗಳು ಸ್ವಚ್ಛಗೊಳಿಸಿದ ಕಾರ್ಯದ ವಿಡಿಯೋ ಚಿತ್ರೀಕರಣ ನಡೆಸಿ ಪಾಲಿಕೆಗೆ ಸಲ್ಲಿಸಬೇಕು. ಜತೆಗೆ ಸಂಬಂಧಪಟ್ಟ ಎಂಜಿನಿಯರ್ ಖಾತರಿಪಡಿಸಿ ವರದಿ ಸಲ್ಲಿಸಿದರಷ್ಟೇ ನಿರ್ವಹಣೆ ಮೊತ್ತ ಬಿಡುಗಡೆಯಾಗಲಿದೆ. ಹಾಗೆಯೇ ಪ್ರತಿ ಯಂತ್ರಕ್ಕೂ ಜಿಪಿಎಸ್ ಸಾಧನ ಅಳವಡಿಸಬೇಕು. ಜಿಪಿಎಸ್ ನಿಯಂತ್ರಣ ವ್ಯವಸ್ಥೆಯನ್ನು ಎಲ್ಲ ಎಂಟು ವಲಯಗಳಲ್ಲಿ ಕಲ್ಪಿಸಿ, ನಿಯಂತ್ರಣ ಕೊಠಡಿಯನ್ನು ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಬೇಕು.
ಮಂಜುಳಾ ಮೇಲಿನ ಹಲ್ಲೆಗೆ ಪದ್ಮಾವತಿಗೆ ತರಾಟೆ
ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಇತ್ತೀಚೆಗೆ ಮಳೆ ನೀರು ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನಡೆದ ಕಾರ್ಪೊರೇಟರ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಮೇಯರ್ ಜಿ.ಪದ್ಮಾವತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ವಿಧಾನಸೌಧದ ಮುಂಭಾಗ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಧಿಮಂತ್ರಿಗಳು, ಮೇಯರ್ ಎದುರಾಗುತ್ತಿದ್ದಂತೆ ಶಾಸಕ ಮುನಿರತ್ನ ಬೆಂಬಲಿಗರು ಹಾಗೂ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ನಡುವಿನ ಗಲಾಟೆಗೆ ಕಾರಣವೇನು ಎಂದು ಪ್ರಶ್ನಿಸಿದರು. ತಾವು ಭಾಗವಹಿಸಿದ್ದ ಕಾರ್ಯಕ್ರಮದ ವೇಳೆ ಈ ರೀತಿಯ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕಿತ್ತಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
ಬಿಬಿಎಂಪಿಯಲ್ಲಿ ಮೈತ್ರಿ ಆಡಳಿತವಿದ್ದು, ಈ ರೀತಿಯ ಘಟನೆಗಳು ನಡೆದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಪಾಲಿಕೆಯಿಂದ ಆಯೋಜಿಸುವ ಕಾರ್ಯಕ್ರಮಗಳಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎಲ್ಲರ ವಿಶ್ವಾಸ ಪಡೆಯದಿದ್ದರೆ ಪಕ್ಷದ ವರ್ಚಸ್ಸಿಗೂ ಹಾನಿಯಾಗುತ್ತದೆ ಎಂದು ಹೇಳಿದರು ಎನ್ನಲಾಗಿದೆ. ಇದರಿಂದ ಕೆಲಕಾಲ ತಬ್ಬಿಬ್ಟಾದ ಮೇಯರ್, ಬಳಿಕ ಅಂದಿನ ಘಟನೆ ಹಿಂದಿನ ಕಾರಣ ಹಾಗೂ ರಾಜಕೀಯ ಕಾರಣಗಳನ್ನು ವಿವರಿಸಿ ಸಮಾಧಾನಪಡಿಸಿದರು ಎಂದು ತಿಳಿದುಬಂದಿದೆ.
ಹುತಾತ್ಮ ಯೋಧ ನಿರಂಜನ್ ಅವರ ಹೆಸರನ್ನು ವಿವಾದಿತ ಸ್ಥಳಕ್ಕೆ ಬದಲಾಗಿ ನಗರದ ಮತ್ತೂಂದು ಪ್ರಮುಖ ರಸ್ತೆಗೆ ನಾಮಕರಣ ಮಾಡಲಾಗುವುದು.
-ಕೆ.ಜೆ.ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
MUST WATCH
ಹೊಸ ಸೇರ್ಪಡೆ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು