ತಲೆಗೆ ಏಟಾದರೂ ಪದ್ಮಾವತಿ ಶೂಟಿಂಗ್‌ ಮುಗಿಸಿ ಲಂಡನ್‌ಗೆ ಹಾರಿದ ರಣವೀರ್‌


Team Udayavani, May 27, 2017, 12:27 PM IST

Ranveer-Singh-600.jpg

ಮುಂಬಯಿ : ಬಾಲಿವುಡ್‌ನ‌ ಖ್ಯಾತ ಚಿತ್ರ ನಿರ್ದೇಶಕ ಸಂಜಯ್‌ ಲೀಲಾ ಭನ್ಸಾಲಿ ಅವರ “ಪದ್ಮಾವತಿ’ ಐತಿಹಾಸಿಕ ಕಥಾ ಚಿತ್ರದಲ್ಲಿ ಅಲ್ಲಾವುದ್ದೀನ್‌ ಖೀಲ್‌ಜಿಯಾಗಿ ಮುಖ್ಯ ಪಾತ್ರವಹಿಸುತ್ತಿರುವ ರಣವೀರ್‌ ಸಿಂಗ್‌ಗೆ ಚಿತ್ರದ ಕ್ಲೈಮಾಕ್ಸ್‌ ದೃಶ್ಯದಲ್ಲಿ ತಲೆಗೆ ಗಂಭೀರ ಏಟು ಬಿದ್ದರೂ ತತ್‌ಕ್ಷಣ ಚಿಕಿತ್ಸೆ ಪಡೆದು ಚಿತ್ರದಲ್ಲಿನ ತನ್ನ ಪಾಲಿನ ಶೂಟಿಂಗ್‌ ಮುಗಿಸಿದ ಬಳಿಕ ಲಂಡನ್‌ಗೆ ಹಾರಿದ್ದಾರೆ. 

ರಣವೀರ್‌ ಜತೆಗೆ ದೀಪಿಕಾ ಪಡುಕೋಣೆ ಕೂಡ ಲಂಡನ್‌ಗೆ ಹಾರಿರುವುದಾಗಿ ಬಾಲಿವುಡ್‌ ಗಾಸಿಪ್‌ ಗಳು ಹೇಳುತ್ತಿವೆ. ಬನ್ಸಾಲಿ ಅವರ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ರಾಣಿ ಪದ್ಮಾವತಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.  ಪದ್ಮಾವತಿ ಚಿತ್ರೀಕರಣದ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ, ಮುಂಬಯಿಯಿ ದಹೀಸರ್‌ನಲ್ಲಿರುವ ರಣವೀರ್‌ ಫ್ಲ್ಯಾಟಿಗೆ ಶಿಫ್ಟ್ ಆಗಿದ್ದರು ಎಂಬ ಸುದ್ದಿ ಕೂಡ ಜೋರಾಗಿ ಗುಲ್ಲೆಬ್ಬಿಸಿರುವದು ಸತ್ಯ. 

ಪದ್ಮಾವತಿ ಚಿತ್ರದಲ್ಲಿನ ತನ್ನ ಪ್ರಮುಖ ಪಾತ್ರವಾಗಿ ಅಲ್ಲಾವುದ್ದೀನ್‌ ಖೀಲ್‌ಜಿ ಆಗಿ ಅತ್ಯಂತ ತನ್ಮಯತೆ ಮತ್ತು ಬದ್ಧತೆಯೊಂದಿಗೆ ನಟಿಸುತ್ತಿರುವ 31ರ ಹರೆಯದ ರಣವೀರ್‌ಗೆ, ಮುಂಬಯಿ ಹೊರವಲಯದಲ್ಲಿ ನಡೆಯುತ್ತಿದ್ದ ಚಿತ್ರದ ಕ್ಲೈಮಾಕ್ಸ್‌ ಶೂಟಿಂಗ್‌ ವೇಳೆ ತಲೆಗೆ ಏಟಾಗಿತ್ತು.

ಒಡನೆಯೇ ಪ್ರಥಮ ಚಿಕಿತ್ಸೆ ಪಡೆದು ಮತ್ತೆ ಶೂಟಿಂಗ್‌ ಮುಂದುವರಿಸಿದ ರಣವೀರ್‌ಗೆ, ತಲೆಗಾದ ಗಾಯದಿಂದ ರಕ್ತ ಜೋರಾಗಿ ಸುರಿಯುತ್ತಿರುವುದು ಗಮನಕ್ಕೆ ಬಂತು. ಇದರ ಗಂಭೀರತೆಯನ್ನು ಮನಗಂಡ ರಣವೀರ್‌ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ತುರ್ತು ಚಿಕಿತ್ಸೆಯನ್ನು ಪಡೆದುಕೊಂಡರು. ಅವರ ತಲೆಗಾದ ಆಳವಾದ ಗಾಯಕ್ಕೆ ಹಲವಾರು ಸ್ಟಿಚ್‌ಗಳನ್ನು ಹಾಕಲಾಯಿತು. 

ಆ ಬಳಿಕ ಮತ್ತೆ ಶೂಟಿಂಗ್‌ಗೆ ಹಾಜರಾದ ರಣವೀರ್‌ ತನ್ನ ಪಾಲಿನ ಚಿತ್ರೀಕರಣವನ್ನು ದೃಢಸಂಕಲ್ಪದಿಂದ ಮುಗಿಸಿಯೇ ಬಿಟ್ಟರು. 

ಅದಾಗಿ ರಣವೀರ್‌ ತನ್ನ ಪೂರ್ವ ಯೋಜಿತ ರಜಾ ಕಾಲದ ಪ್ರವಾಸಾರ್ಥವಾಗಿ ಲಂಡನ್‌ಗೆ ಹಾರಿದರು. ಅಲ್ಲಿ ಅವರು ತನ್ನ ಅಚ್ಚುಮೆಚ್ಚಿನ ಫ‌ುಟ್ಬಾಲ್‌ ಲೀಗ್‌ ಮ್ಯಾಚಿನ ಫೈನಲ್‌ ಪಂದ್ಯ (ಜೂನ್‌ 3), ಮರುದಿನ ಬರ್ಮಿಂಗಂ ನಲ್ಲಿ ನಡೆಯಲಿರುವ ಭಾರತ – ಪಾಕ್‌ ಚ್ಯಾಂಪ್ಯನ್ಸ್‌ ಟ್ರೋಫಿ ಪಂದ್ಯವನ್ನು ವೀಕ್ಷಿಸುವರು. ಅಂದ ಹಾಗೆ ರಣವೀರ್‌ಗೆ ಮೊದಲನಿಂದಲೂ ಕ್ರೀಡೆಯಲ್ಲಿ ವಿಪರೀತವಾದ ಆಸಕ್ತಿ ಇದೆ.

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-eqewwqe

Deepfake video ವಿರುದ್ಧ ನಟ ರಣ್‌ವೀರ್‌ ಸಿಂಗ್‌ ದೂರು

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

Ranveer Singh: ಮತಯಾಚನೆಯ ಡೀಪ್‌ ಫೇಕ್‌ ವಿಡಿಯೋ ವೈರಲ್; FIR ದಾಖಲಿಸಿದ‌ ನಟ ರಣ್‌ವೀರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.