ಎಟಿಎಂನಲ್ಲೇ 15 ಲಕ್ಷ ವೈಯಕ್ತಿಕ ಸಾಲ: ಐಸಿಐಸಿಐ ಬ್ಯಾಂಕ್ ಕೊಡುಗೆ
Team Udayavani, Jul 20, 2017, 3:45 PM IST
ಮುಂಬಯಿ : ಖಾಸಗಿ ರಂಗದ ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್ ತನ ಆಯ್ದ ಮಾಸಿಕ ವೇತನದ ಗ್ರಾಹಕರಿಗೆ 15 ಲಕ್ಷ ರೂ. ವರೆಗಿನ ವೈಯಕ್ತಿಕ ಸಾಲವನ್ನು ಎಟಿಎಂ ಮೂಲಕ ಒದಗಿಸಲು ಮುಂದಾಗಿದೆ. ಈ ವರ್ಗದ ಗ್ರಾಹಕರು ಈ ಮೊದಲು ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಹಾಕಿರದಿದ್ದರೂ ಅವರಿಗೆ ಎಟಿಎಂ ಮೂಲಕ ಸಾಲ ಪಡೆಯುವ ಅವಕಾಶ ಇರುತ್ತದೆ.
ಖಾಸಗಿ ಸಾಲ ಪಡೆಯಬಯಸುವವರು ಸಾಲ ಮಾಹಿತಿ ಕಂಪೆನಿಗಳ ಅಂಕಿ ಅಂಶಗಳನ್ನು ಬಳಸಿಕೊಂಡು “ಆಯ್ದ ಗ್ರಾಹಕರ’ ಅರ್ಹತೆಯನ್ನು ಪಡೆಯಬಹುದಾಗಿದೆ. ಅಂತಹ ಗ್ರಾಹಕರು ವ್ಯವಹಾರವೊಂದನ್ನು ಪೂರ್ಣಗೊಳಿಸಿದಾಗ ಅವರಿಗೆ ಎಟಿಎಂ ಪರದೆಯಲ್ಲಿ “ನೀವು ಖಾಸಗಿ ಸಾಲದ ಅರ್ಹತೆಯನ್ನು ಪಡೆದವರಾಗಿರುತ್ತೀರಿ’ ಎಂಬ ಸಂದೇಶವೊಂದು ಕಾಣಿಸಿಕೊಳ್ಳುತ್ತದೆ.
ಒಂದೊಮ್ಮೆ ಆ ಗ್ರಾಹಕನು ಆಗ ಸಾಲ ಪಡೆಯಲು ಬಯಸಿದಲ್ಲಿ ಐದು ವರ್ಷಗಳ ಅವಧಿಗೆ 15 ಲಕ್ಷ ರೂ.ಗಳ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ ಮತ್ತು ತತ್ಕ್ಷಣವೇ ಆ ಮೊತ್ತ ಆ ಗ್ರಾಹಕನ ಉಳಿತಾಯ ಖಾತೆಗೆ ಜಮೆಯಾಗುತ್ತದೆ ಎಂದು ಬ್ಯಾಂಕ್ ಪ್ರಕಟನೆ ತಿಳಿಸಿದೆ. ಈ ಸಾಲ ಸೌಲಭ್ಯದ ಸೇವೆಯು ಈಗಾಗಲೇ ಆಯ್ದ ಮಾಸಿಕ ವೇತನ ಪಡೆಯುತ್ತಿರುವ ಗ್ರಾಹಕರಿಗೆ ಸಿಗುವಂತೆ ಮಾಡಲಾಗಿದೆ.
ಸಾಲ ಮೊತ್ತ ಗ್ರಾಹಕನ ಖಾತೆಗೆ ಜಮೆಯಾಗುವ ಮುನ್ನ ಗ್ರಾಹಕನಿಗೆ ಆತನಿಗೆ ವಿವಿಧ ಸಾಲ ಮೊತ್ತಗಳ ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ ಮತ್ತು ಆತನಿಗೆ ಸಾಲದ ಬಡ್ಡಿ ದರ, ಸಂಸ್ಕರಣ ಶುಲ್ಕ ಮತ್ತು ತಿಂಗಳ ಕಂತು ಇತ್ಯಾದಿ ವಿವರಗಳನ್ನು ತಿಳಿಸಲಾಗುತ್ತದೆ.
ಗ್ರಾಹಕರು ವೈಯಕ್ತಿಕ ಸಾಲವನ್ನು ಆಯ್ಕೆಮಾಡಿದಾಗ ಸುಲಭದಲ್ಲಿ ಅವರಿಗೆ ಹಣ ಸಿಗುವುದಕ್ಕೆ ಅವಕಾಶ ಉಂಟಾಗುತ್ತದೆ ಎಂದು ಐಸಿಐಸಿಐ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಅನೂಪ್ ಬಾಗ್ಚಿ ಹೇಳಿದರು.
ಎಟಿಎಂ ಮೂಲಕ 15 ಲಕ್ಷ ರೂ. ಸಾಲ ಪಡೆಯುವ ಈ ಪ್ರಕ್ರಿಯೆ ಸಂಪೂರ್ಣವಾಗಿ ಕಾಗದ ರಹಿತವಾಗಿದ್ದು ತತ್ಕ್ಷಣದ ಸೌಕರ್ಯವಾಗಿರುತ್ತದೆ ಮತ್ತು ಇದರಿಂದ ಗ್ರಾಹಕರಿಗೆ ಬಹಳ ಸುಲಭದಲ್ಲಿ ಸಾಲ ಸೌಲಭ್ಯ ಸಿಗುವಂತಾಗುತ್ತದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ