ಅವನತಿ ಆಹ್ವಾನಿಸುತ್ತಿರುವ ಮನುಷ್ಯ
Team Udayavani, Apr 23, 2017, 1:22 PM IST
ದಾವಣಗೆರೆ: ತಂತ್ರಜ್ಞಾನದ ಹೆಸರಲ್ಲಿ ಮನುಷ್ಯ ತನ್ನ ಕೆಡುಕನ್ನೇ ತಾನೇ ತಂದು ಕೊಳ್ಳುತ್ತಿದ್ದಾನೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಶ್ರೀದೇವಿ ಅಭಿಪ್ರಾಯಪಟ್ಟರು. ನಗರದ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಕಾಲೇಜಿನಲ್ಲಿ ಶನಿವಾರ ಕಾನೂನು ಸೇವಾ ಪ್ರಾಧಿಕಾರ, ಮಾನವ ಹಕ್ಕು ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆ ಉದ್ಘಾಟಿಸಿ, ಮಾತನಾಡಿದರು.
ತಂತ್ರಜ್ಞಾನದ ಅಭಿವೃದ್ಧಿಗೆ ಮಾರು ಹೋಗುತ್ತಿರುವ ನಾವು ನಮ್ಮ ಅವನತಿಗೆ ನಾವೇ ದಾರಿ ಮಾಡಿಕೊಡುತ್ತಿದ್ದೇವೆ. ಇದರಿಂದ ಪರಿಸರವನ್ನು ಅಧಃಪತನಕ್ಕೆ ಕೊಂಡೊಯ್ಯುತ್ತಿದ್ದೇವೆ ಎಂದರು. ನಮ್ಮ ಪೂರ್ವಜರು ನೀರು, ಭೂಮಿ, ಸುಂದರ ಪರಿಸರ ನಮಗೆ ಉಳಿಸಿಕೊಟ್ಟು ಹೋದರು.
ಆದರೆ, ನಾವು ಅದನ್ನು ಉಳಿಸಿಕೊಳ್ಳುವ ಬದಲು ಅಳಿಸುವ ಕೆಲಸ ಮಾಡುತ್ತಿದ್ದೇವೆ. ಪೂರ್ವಜರು ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ಬಗೆ ಕಲಿತಿದ್ದರು. ಆದರೆ, ನಮ್ಮ ತಪ್ಪಿನಿಂದ ಇಂದು ತಾಪಮಾನ ಏರುತ್ತಿದೆ. ಮೂರು ತಿಂಗಳಿಗೊಮ್ಮೆ ವಾತಾವರಣದಲ್ಲಿ ವೈಪರೀತ್ಯ ಕಾಣುತ್ತಿದೆ. ದಾವಣಗೆರೆಯಂತಹ ನಗರದಲ್ಲಿ ಇಂದು ತಾಪಮಾನ 40 ಡಿಗ್ರಿ ಸೆಲಿಯಸ್ ತಲುಪಿದೆ.
ಇದೆಲ್ಲಕ್ಕೂ ನಾವೇ ಕಾರಣ ಎಂದು ಅವರು ಹೇಳಿದರು. ಈಗೀಗ ನುಷ್ಯ ತನ್ನ ಬೆಳವಣಿಗೆಗಾಗಿ ಇತರೆ ಜೀವಿಗಳ ಜೀವಕ್ಕೆ ಸಂಚಕಾರಿ ಆಗುತ್ತಿದ್ದಾನೆ. ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಕ್ಕಿ, ಪಕ್ಷಿಗಳು ನಾಶವಾಗುತ್ತಿವೆ. ಮೊಬೈಲ್ ವಿಷ ವಸ್ತುವಾಗಿ ಪರಿಣಮಿಸುತ್ತಿದೆ.
ಅಪಾಯಕಾರಿಯಾಗಿರುವ ಮೊಬೈಲ್ ಫೋನ್ ಮಿತಿಯಾಗಿ ಬಳಸುವುದು ಸೂಕ್ತ ಎಂದು ಸಲಹೆ ನೀಡಿದರು. ಮನೆಯಲ್ಲಿ ನೋಡುವ ಟಿವಿಯೂ ಸಹ ಮನುಷ್ಯನ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಪರಿಸರ ಮತ್ತು ಭೂಮಿಯಲ್ಲಿ ನಶಿಸುವುದಿಲ್ಲ. ಇದರ ವಿಲೇವಾರಿಗೆ ಸರ್ಕಾರ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ.
ಅದಷ್ಟು ತ್ಯಾಜ್ಯ ವಸ್ತುಗಳ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿ ಎಂದು ಕಿವಿಮಾತು ಹೇಳಿದರು. ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧಿ ಲಯದ ನ್ಯಾಯಾಧೀಶರಾದ ಎ.ಎಸ್. ಸದಲಗಿ ಮಾತನಾಡಿ, ನಾವು ವಿಷಾನಿಲ ಹೊರಸೂಸುವ ವಾಹನ ಬಳಕೆ ಕಡಮೆ ಮಾಡಬೇಕು. ಸೈಕಲ್ ಬಳಸುವುದು ಪರಿಸರ ಸ್ನೇಹಿ ಆಗಿದೆ.
ಇದರಿಂದ ನಮ್ಮ ಆರೋಗ್ಯ ಸಹ ಸುಧಾರಣೆ ಆಗುತ್ತದೆ. ಐಶಾರಾಮಿ ಜೀವನಕ್ಕೆ ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಉಪನ್ಯಾಸ ನೀಡಿದ ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಎಚ್. ಅರುಣ್ ಕುಮಾರ್, ನಮ್ಮ ದೇಶದಲ್ಲಿ ಶೇ.47ರಷ್ಟು ಮಕ್ಕಳು ಇದ್ದಾರೆ.
ಅವರಿಗೆ ಬಾಲ್ಯದಲ್ಲಿಯೇ ಭೂಮಿ ವಾತಾವಾರಣದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಪರಿಸರದಲ್ಲಿ ಇಂಧನ, ವಿದ್ಯುತ್ ಮಿತ ಬಳಕೆ ಮಾಡಿ ಪ್ರಕೃತಿಯ ಸಂಪನ್ಮೂಲ ವೃದ್ಧಿಸಬೇಕಿದೆ ಎಂದರು. ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು, ಜಿಲ್ಲಾ ಕಾನೂನು ಸೇವಾ ಪ್ರಾಧಿಧಿಕಾರದ ಸದಸ್ಯ ಕಾರ್ಯದರ್ಶಿ ಸುವರ್ಣ ಕೆ. ಮಿರ್ಜಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಚ್. ಸಿದ್ದಪ್ಪ ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
ಉಡುಪಿಯಲ್ಲಿ ಕೋಮು ಪ್ರಚೋದನೆಯ ಭಾಷಣ; ಕಾಜಲ್ ಹಿಂದುಸ್ತಾನಿ ವಿರುದ್ಧದ FIRಗೆ ಮಧ್ಯಂತರ ತಡೆ
Vote; ಬೇರೆಲ್ಲ ಬದಿಗಿಡಿ ಇಂದು ತಪ್ಪದೆ ಮತ ಚಲಾಯಿಸಿ! :ನೀವು ಗಮನಿಸಬೇಕಾದದ್ದು..
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ