ಲಿಂಗಾಯಿತ ಮಹಾರ್ಯಾಲಿ ಯಶಸ್ಸಿಗೆ ಸಿದ್ಧತೆ
Team Udayavani, Sep 23, 2017, 9:52 AM IST
ಕಲಬುರಗಿ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಆಗ್ರಹಿಸಿ ಸೆ. 24ರಂದು ನಗರದ ನೂತನ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿರುವ ಲಿಂಗಾಯತ ಮಹಾರ್ಯಾಲಿ ಮಹಾಸಭೆಗೆ ವ್ಯಾಪಕ ಸಿದ್ಧತೆ ಹಾಗೂ ಪ್ರಚಾರದ ಕಾರ್ಯ ಜೋರಾಗಿ ನಡೆಯುತ್ತಿದ್ದು, ಸಾವಿರಾರು ಸಮಾಜದ ಮುಖಂಡರು-ಯುವಕರು ಸಕ್ರಿಯವಾಗಿ ಪಾಲ್ಗೊಂಡಿದ್ದು, ಮಹಾರ್ಯಾಲಿ ಯಶಸ್ವಿಯ ಲಕ್ಷಣಗಳು ಕಂಡು ಬರುತ್ತಿವೆ.
ಕಳೆದ ಸೆ. 10ರಂದು ನಿಗದಿಯಾಗಿದ್ದ ಮಹಾರ್ಯಾಲಿ ಅಗತ್ಯ ಸಿದ್ಧತೆ ಆಗಿಲ್ಲವೆಂದು ಸೆ. 24ಕ್ಕೆ ಮುಂದೂಡಲಾಗಿತ್ತು. ಈ ನಡುವೆ ವೀರಶೈವ-ಲಿಂಗಾಯತ ನಡುವೆ ಭಿನ್ನಮತ ಉಂಟಾಗಿ ಆರೋಪ-ಪ್ರತ್ಯಾರೋಪ ನಡೆದ ಪರಿಣಾಮ ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಬೆಂಗಳೂರಿನ ಮನೆಯಲ್ಲಿ ಸಭೆ ನಡೆದು ಸಮನ್ವಯ ಸಮಿತಿ ರಚನೆ ಕುರಿತಾಗಿ ನಿರ್ಣಯ ಕೈಗೊಂಡ ನಂತರ ಮಹಾರ್ಯಾಲಿ ಕಾವು ಸ್ವಲ್ಪ ಕುಸಿತವಾಗಿತ್ತು.
ಕಳೆದ ನಾಲ್ಕು ದಿನಗಳಿಂದ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಪದಾಧಿಕಾರಿಗಳು, ಸಚಿವರಾದ ಎಂ.ಬಿ.ಪಾಟೀಲ, ಡಾ| ಶರಣಪ್ರಕಾಶ ಪಾಟೀಲ, ಶಾಸಕ ಬಿ.ಆರ್. ಪಾಟೀಲ ಸೇರಿದಂತೆ ಇತರರು ಹಗಲಿರಳು ಸಮಾಜ ಸಂಘಟಕರ ನಿರಂತರ ಸಭೆಗಳನ್ನು ನಡೆಸುವುದರ ಮುಖಾಂತರ ಸಮಾವೇಶದ ಯಶಸ್ವಿಗೆ ಹುರಿದುಂಬಿಸಿದ್ದರಿಂದ, ಜತೆಗೆ ನಾಡಿನ ವಿವಿಧ ಮಠಾಧೀಶರು, ಶ್ರೀ ಶೈಲ ಸಾರಂಗಧರೇಶ್ವರ ಮಹಾಸ್ವಾಮಿಗಳು ಸೇರಿದಂತೆ ಇತರರು ಸಮಾವೇಶ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ