ಕೋರ್ಟ್ ವಿರುದ್ಧವೇ ಸಿಡಿದ ತಮಿಳರು
Team Udayavani, Jan 19, 2017, 7:54 AM IST
ಚೆನ್ನೈ/ಮದುರೈ/ಕೊಯಮತ್ತೂರು: ಜಲ್ಲಿಕಟ್ಟು ನಿಷೇಧದ ತೆರವಿಗೆ ಯುವಕರ ಒಂದು ಸಣ್ಣ ಗುಂಪು ಆರಂಭಿಸಿದ್ದ ಪ್ರತಿಭಟನೆಯು ಇದೀಗ ಕಂಡು ಕೇಳರಿಯದ ರೀತಿ ಬೃಹತ್ ರೂಪ ತಳೆದಿದ್ದು ತಮಿಳುನಾಡಿನಾದ್ಯಂತ ಲಕ್ಷಾಂತರ ಜನರು ಇದನ್ನು ಸೇರಿಕೊಂಡಿ¨ªಾರೆ.
ಚೆನ್ನೈನ ಮರೀನಾ ಬೀಚ್, ಕೊಯಮತ್ತೂರು, ಮದುರೈ ಸೇರಿದಂತೆ ರಾಜ್ಯದೆಲ್ಲೆಡೆ ವ್ಯಾಪಕ ಪ್ರತಿಭಟನೆಗಳು ಆರಂಭವಾಗಿವೆ. ಜಲ್ಲಿಕಟ್ಟು ಸಕ್ರಮಗೊಳಿಸಿ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸುವವರೆಗೆ ಪ್ರತಿಭಟನೆಗಳು ನಿಲ್ಲುವು ದಿಲ್ಲ ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ.
ಇದೇ ವೇಳೆ, ಪ್ರತಿಭಟನೆಗೆ ಮಣಿದಿರುವ ಮುಖ್ಯಮಂತ್ರಿ ಪನ್ನೀರಸೆಲ್ವಂ, ಅಧ್ಯಾದೇಶಕ್ಕೆ ಆಗ್ರಹಿಸಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ. ಅಣ್ಣಾಡಿಎಂಕೆ ಮುಖ್ಯಸ್ಥೆ ಶಶಿಕಲಾ ಅವರೂ ಈ ಕುರಿತು ತಮಿಳುನಾಡು ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಮತ್ತು ಜಲ್ಲಿಕಟ್ಟು ವಿರೋಧಿಸುವ ಪೇಟಾ ಪ್ರಾಣಿದಯಾ ಸಂಘಟನೆಯ ನಿಷೇಧಕ್ಕೆ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇನ್ನೊಂದೆಡೆ ಉದ್ವಿಗ್ನ ವಾತಾವರಣ ತಲೆದೋರಿರುವ ಕಾರಣ ಗುರುವಾರ ಚೆನ್ನೈ ಸೇರಿದಂತೆ ಹಲವೆಡೆ ಶಾಲಾ- ಕಾಲೇಜುಗಳಿಗೆ ರಜೆ ಸಾರಲಾಗಿದೆ.
ಆಂದೋಲನ: ಜಲ್ಲಿಕಟ್ಟು ಆಂದೋಲನವು ಈಗ ಸಾಮಾ ಜಿಕ ಜಾಲತಾಣಗಳು ಹಾಗೂ ತಮಿಳು ನಟರ ಪ್ರೇರಣೆಯಿಂದ ತಮಿಳರ ಸಾಂಸ್ಕೃತಿಕ ಸ್ವಾಭಿಮಾನವಾಗಿ ಪರಿವರ್ತಿತವಾಗಿದೆ.
ಮರೀನಾ ಬೀಚ್ನಲ್ಲಿ ನಡೆದಿರುವ ಜಲ್ಲಿಕಟ್ಟು ಪ್ರತಿಭಟನೆಗೆ ಯಾವುದೇ ನಿರ್ದಿಷ್ಟ ನಾಯಕನಿಲ್ಲ. ಹಾಗಿದ್ದರೂ ಜನರು ಈ ಪ್ರತಿಭಟನಾ ತಾಣದಿಂದ ಹಿಂದೆ ಸರಿಯುತ್ತಿಲ್ಲ. ಪರಿಣಾಮವಾಗಿ ತಮಿಳುನಾಡು ಸರಕಾರ ಈಗ ಕೇಂದ್ರವನ್ನು ಸಂಪರ್ಕಿಸಿದ್ದು ಪ್ರತಿಭಟನೆಯ ಕಾವನ್ನು ಶಮನಗೊಳಿಸುವುದಕ್ಕೆ ನೆರವಾಗುವಂತೆ ಕೋರಿದೆ.
ರಾಜ್ಯ ಮೀನುಗಾರಿಕೆ ಸಚಿವ ಡಿ. ಜಯ ಕುಮಾರ್ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಕೆ ಪಾಂಡ್ಯರಾಜನ್ ಅವ ರೊಂದಿಗೆ ಮರೀನಾ ಬೀಚ್ನಲ್ಲಿ ಪ್ರತಿಭಟನೆ ನಿರತ ಯುವಕರ ಜತೆಗೆ ಮಾತುಕತೆ ನಡೆಸಿದರು. ಆದರೆ ಸುಗ್ರೀವಾಜ್ಞೆ ಹೊರಡುವವರೆಗೆ ಪ್ರತಿಭಟನೆ ನಿಲ್ಲದೆಂದು ಪ್ರತಿಭಟನಾಕಾ ರರು ಸ್ಪಷ್ಟಪಡಿಸಿದರು.
ಕೋರ್ಟಿಂದಲೂ ಮಧ್ಯಪ್ರವೇಶ ಇಲ್ಲ: ಈ ನಡುವೆ ಜಲ್ಲಿಕಟ್ಟು ಪ್ರತಿಭಟನೆ ವಿಷಯದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಸ್ಪಷ್ಟಪಡಿಸಿದೆ.