ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಫೈಟರ್‌ ಜೆಟ್‌ ರೋಮಾಂಚನ


Team Udayavani, Oct 24, 2017, 11:47 AM IST

Fighter-Jets-700.jpg

ಹೊಸದಿಲ್ಲಿ : ಭಾರತೀಯ ವಾಯು ಪಡೆ ಇಂದು ಮಂಗಳವಾರ ಸೂಪರ್‌ ಹರ್‌ಕ್ಯುಲಸ್‌ ಸಿ-130 ಸಾರಿಗೆ ವಿಮಾನ ಮತ್ತು ಇತರ ಹಲವು ಬಗೆಯ ಯುದ್ಧ ವಿಮಾನಗಳನ್ನು ಲಕ್ನೋ -ಆಗ್ರಾ ಎಕ್ಸ್‌ಪ್ರೆಸ್‌ ವೇಯಲ್ಲಿ ಇಳಿಸುವ ತಾಲೀಮನ್ನು ಆರಂಭಿಸಿದ್ದು ವೀಕ್ಷಕರಲ್ಲಿ  ಭಾರೀ ರೋಮಾಂಚನ ಉಂಟು ಮಾಡಿದೆ.

ಪ್ರಾಕೃತಿಕ ವಿಕೋಪ, ಮಾನವೀಯ ನೆರವು ಮತ್ತು ಯುದ್ಧದ ಸನ್ನಿವೇಶ ಉಂಟಾದ ಸಂದರ್ಭದಲ್ಲಿ ಫೈಟರ್‌ ಜೆಟ್‌ಗಳನ್ನು ತುರ್ತಾಗಿ ಇಳಿಸುವ ಮತ್ತು ಅವುಗಳ ಕಾರ್ಯ ಸನ್ನದ್ಧತೆಯನ್ನು ಪರೀಕ್ಷಿಸುವ ಸಲುವಾಗಿ ಈ ಕವಾಯತುಗಳನ್ನು ಭಾರತೀಯ ವಾಯು ಪಡೆ ನಡೆಸುತ್ತಿದೆ. 

ಈ ಕವಾಯತಿನ ಅಂಗವಾಗಿ ಇಂದು ಮೊದಲ ಅವತರಣವನ್ನು ಸಿ130 ವಿಮಾನ  ಗಾರ್ಡ್‌ ಕಮಾಂಡೋಗಳೊಂದಿಗೆ ಯಶಸ್ವಿಯಾಗಿ ಕೈಗೊಂಡಿತು. ಆ ಬಳಿಕ ಹಲವು ಮಿರಾಜ್‌ ಮತ್ತು ಸುಖೋಯಿ ಫೈಟರ್‌ ಜೆಟ್‌ಗಳು ಕೆಳ ಮಟ್ಟದಲ್ಲಿ ಹಾರಾಟ ನಡೆಸಿ ಭೂ ಸ್ಪರ್ಶ ಮಾಡಿದವು. 

ಇವುಗಳ ಬಳಿಕ ಜಾಗ್ವಾರ್‌ ಫೈಟರ್‌ ಜೆಟ್‌ಗಳು ಇದೀಗ ಹಾರಾಟ ಮತ್ತು ಅವತರಣಕ್ಕೆ ಸಿದ್ಧವಾಗಿ ತಮ್ಮ ಸರದಿಗಾಗಿ ಕಾಯುತ್ತಿರುವುದಾಗಿ ಮೂಲಗಳು ತಿಳಿಸಿವೆ. 

ಭಾರತೀಯ ವಾಯು ಪಡೆ ತನ್ನ ಯಾವುದೇ ಜೆಟ್‌ಗಳು ನಿಶ್ಚಲವಾಗಿ ನಿಂತಿರುವುದನ್ನು ಬಯಸುವುದಿಲ್ಲ; ತಳಮಟ್ಟದಲ್ಲಿ ಹಾರಾಟ ನಡೆಸುವ ಮತ್ತು ಸಾರ್ವಜನಿಕ ರಸ್ತೆಗಳಲ್ಲಿ ಭೂ ಸ್ಪರ್ಶ ಮಾಡುವ ಅವುಗಳ ಕಾರ್ಯ ಕ್ಷಮತೆ ಮತ್ತು ಸನ್ನದ್ಧತೆಯನ್ನು ಪರೀಕ್ಷಿಸುವುದೇ ಈ ಕವಾಯತಿನ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನ ಮತ್ತು ಪಾಕಿಸ್ಥಾನ ದೇಶಗಳು ಭಾರತದ ಮೇಲೆ ಏಕ ಕಾಲದಲ್ಲಿ ಯುದ್ಧಕ್ಕೆ ತೊಡಗಿದ ಸಂದರ್ಭದಲ್ಲಿ ಎರಡೂ ಗಡಿಗಳಲ್ಲಿ ಪರಿಣಾಮಕಾರಿ ಪ್ರತಿ ಸಮರಕ್ಕೆ ತೊಡಗುವ ಕ್ಷಮತೆ ಮತ್ತು ಸನ್ನದ್ಧತೆಯನ್ನು ಪರೀಕ್ಷಿಸುವುದು ಕೂಡ ಕವಾಯತಿನ ಉದ್ದೇಶವೆಂದು ಮೂಲಗಳು ಹೇಳಿವೆ. 

ವಾಯು ಪಡೆಯು ಈ ಕವಾಯತನ್ನು ಉತ್ತರ ಪ್ರದೇಶ ಸರಕಾರದ ಸಹಯೋಗದೊಂದಿಗೆ ಉನ್ನಾವೋ ದಲ್ಲಿನ ಬಾಂಗರ್‌ಮಾವೂ ಸಮೀಪದಲ್ಲಿ ನಡೆಸುತ್ತಿದೆ. ಲಕ್ನೋ – ಆಗ್ರಾ ಎಕ್ಸ್‌ಪ್ರೆಸ್‌ವೇಯನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಘಾಟಿಸಲಾಗಿತ್ತು. 

ಪ್ರಾಕೃತಿಕ ವಿಕೋಪ, ರಾಷ್ಟ್ರೀಯ ಭದ್ರತೆಯೇ ಮೊದಲಾದ ವಿಷಮ ಹಾಗೂ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ತಳಮಟ್ಟದ ಹಾರಾಟ ಮತ್ತು ಭೂಸ್ಪರ್ಶ ಕ್ಷಮತೆಯನ್ನು ಸಾರ್ವಜನಿಕ ರಸ್ತೆಗಳಲ್ಲಿ ಪರೀಕ್ಷಿಸುವುದು ಈ ಕವಾಯತಿನ ಮುಖ್ಯ ಉದ್ದೇಶವಾಗಿದೆ ಎಂದು ವಾಯುಪಡೆ ಮೂಲಗಳು ಹೇಳಿವೆ. 

ರಸ್ತೆ ಮತ್ತು ಸಾರಿಗೆ ಸಚಿವಾಲಯದ ಅಧಿಕಾರಿಗಳು ಹೇಳುವ ಪ್ರಕಾರ ದೇಶದಲ್ಲಿ 12 ಹೈವೇಗಳನ್ನು ಈ ರೀತಿಯ ಉದ್ದೇಶಗಳಿಗೆ ಬಳಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಇವುಗಳಲ್ಲಿ ಮೂರು ಹೈವೇಗಳು ಒಡಿಶಾ, ಜಾರ್ಖಂಡ್‌ ಮತ್ತು ಛತ್ತೀಸ್‌ಗಢದ ಮಾವೋ ಉಗ್ರ-ಬಾಧಿತ ಪ್ರದೇಶಗಳನ್ನು ಸಂಪರ್ಕಿಸುತ್ತವೆ. ಈ ಪ್ರದೇಶಗಳು ಪ್ರತೀ ವರ್ಷ ಪ್ರವಾಹ, ಚಂಡಮಾರುತದ ಪ್ರಕೋಪಕ್ಕೆ ಗುರಿಯಾಗುವುದು ಸಾಮಾನ್ಯವಾಗಿದೆ.   

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.