ಕರ್ನಾಟಕ ಸಂಘದಲ್ಲಿ  ಕೃತಿಗಳ ಬಿಡುಗಡೆ, ಸಂಗೀತ ಕಾರ್ಯಕ್ರಮ


Team Udayavani, May 6, 2017, 5:22 PM IST

05-Mum05a.jpg

ಮುಂಬಯಿ: ಸಂಗೀತ ಸರಸಿ  ಗ್ರಂಥವು ಶ್ರೀ ಬುರ್ಡೆಯವರ ಸಂಗೀತ ವಿಷಯಕ ಜ್ಞಾನ ಭಂಡಾರವನ್ನು ರಸಿಕರ ಮುಂದೆ ಅಚ್ಚರಿ ಪಡುವಂತೆ ತೆರೆದಿಟ್ಟಿದೆ. ಇಂತಹ ಒಂದು ಒಳ್ಳೆಯ ಸಂಶೋಧನಾತ್ಮಕ ಸಂದರ್ಭ ಗ್ರಂಥವನ್ನು ಸಂಪಾದಿಸಿ ಸಂಗೀತ ಕಲಾರಸಿಕರಿಗೆ ನೀಡಿರುವ ಅವರ ಸಹೋದರಿ ದ್ವಯರು ಅಭಿನಂದನಾರ್ಹರು ಎಂದು ಖ್ಯಾತ ವಿಜ್ಞಾನಿ, ಕನ್ನಡದ ಹಿರಿಯ ಸಾಹಿತಿ ಡಾ|  ವ್ಯಾಸರಾವ್‌ ನಿಂಜೂರ್‌ ಅವರು ನುಡಿದರು.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಕಲಾವೇದಿಕೆ ಕಲಾಭಾರತಿಯಲ್ಲಿ ಬುರ್ಡೆ ಪರಿವಾರದವರ ಪ್ರಾಯೋಜಕತ್ವದಲ್ಲಿ ಮೇ 1ರಂದು ಬೆಳಗ್ಗೆ 10ರಿಂದ ಸಂಘದ ಸಮರಸ ಭವನದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಹಾಗೂ ಸಂಗೀತ ಕ್ಷೇತ್ರದ  ಹೆಸರಾಂತ ವಿಮರ್ಶಕರಾದ ದಿ|  ಪ್ರಕಾಶ್‌ ಬುರ್ಡೆಯವರ ಬದುಕು ಬರಹಗಳನ್ನು ಪ್ರತಿಬಿಂಬಿಸುವ ಉದ್ಗಂಥ ಸಂಗೀತ ಸರಸಿಯ ಲೋಕಾರ್ಪಣೆ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ  ಮಾತನಾಡಿದ ಅವರು, ಇದೊಂದು ಅರ್ಥ ಪೂರ್ಣ ಕಾರ್ಯಕ್ರಮವಾಗಿದೆ. ಪ್ರಕಾಶ್‌ ಬುರ್ಡೆ ಕರ್ನಾಟಕ ಸಂಘದಲ್ಲಿದ್ದು ಕೊಂಡು ಸಂಗೀತ, ಸಾಹಿತ್ಯ ಆರಾಧನೆಯಲ್ಲಿ ತೊಡಗಿದ್ದರು. ಅವರು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ನುಡಿದು ಆಯೋಜಕರನ್ನು ಶ್ಲಾಘಿಸಿದರು.

ಸಂಗೀತ ಸರಸಿಯನ್ನು ಬುರ್ಡೆ ಅವರ ಸಹೋದರಿಯರಾದ ಡಾ| ಜೋತ್ಸಾ$° ಕಾಮತ್‌ ಮತ್ತು ಡಾ| ಸುಷ್ಮಾ ಆರೂರ್‌ ಅವರು ಸಂಪಾದಿಸಿ ಪ್ರಗತಿ ಗ್ರಾಫಿಕ್ಸ್‌, ಬೆಂಗಳೂರು ಮೂಲಕ ಪ್ರಕಟಿಸಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಉತ್ತರಾರ್ಧದಲ್ಲಿ ಬೆಂಗಳೂರಿನ ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ, ಪದ್ಮಭೂಷಣ ಪಂಡಿತ್‌ ಬಸವರಾಜ ರಾಜಗುರು ಅವರ ಶಿಷ್ಯೆ ಪೂರ್ಣಿಮಾ ಕುಲಕರ್ಣಿಯವರು ಸುಶ್ರಾವ್ಯವಾಗಿ ಸಾಲಗವರಾಳಿ, ಮಧ್ಯಮಾವತಿ ಮತ್ತು ಹೇಮಾವತಿ ರಾಗಲಹರಿಯನ್ನು ಪ್ರಸ್ತುತಪಡಿಸಿ ಕೊನೆಗೆ ಚಕೊರಂಗೆ ಚಂದ್ರಮನ ಬೆಳಕಿನ ಚಿಂತೆ ಎಂಬ ವಚನವನ್ನು ಭೈರವಿ ರಾಗದಲ್ಲಿ ಹಾಡಿ ರಸಿಕರ ಮನ ತಣಿಸಿದರು. ಅವರಿಗೆ ಪಕ್ಕವಾದ್ಯ ತಬಲಾದಲ್ಲಿ   ಪಂಡಿತ್‌ ಓಂಕಾರ್‌ ಗುಲ್ವಾಡಿ, ಸಂವಾದಿನಿಯಲ್ಲಿ ಪಂಡಿತ್‌ ಸುಧೀರ್‌ ನಾಯಕ್‌ ಅವರು ಅತ್ಯಂತ ಸಮರ್ಥವಾಗಿ ಸಾಥ್‌ ನೀಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮನೋಹರ ಕೋರಿ, ಗೌರವ ಕಾರ್ಯದರ್ಶಿ ಡಾ| ಭರತಕುಮಾರ್‌ ಪೊಲಿಪು, ಡಾ| ಸುಷ್ಮಾ ಆರೂರ್‌,  ಶುಭಾಂಗ ಬುರ್ಡೆ ಉಪಸ್ಥಿತರಿದ್ದರು. ಮನೋಹರ  ಕೋರಿ ದಂಪತಿ ಕುಲಕರ್ಣಿಯವರಿಗೆ ಪುಸ್ತಕ  $ಗೌರವವನ್ನು ನೀಡಿದರು. ಡಾ|  ಸುಷ್ಮಾ ಅವರು  ಸಂಗೀತ ಸರಸಿಯ ಬಗ್ಗೆ ವಿಶ್ಲೇಸಿದರು.  ಕಲಾಭಾರತಿಯ ಸಂಚಾಲಕರಾದ ಡಾ| ಸುಧೀಂದ್ರ ಭವಾನಿ ಅವರು ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ, ಕಾರ್ಯಕ್ರಮ  ನಿರೂಪಿಸಿದರು.  ಶುಭಾಂಗ ಬುರ್ಡೆ ವಂದಿಸಿದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.