ದೀಪಾವಳಿ ಕೆಡುಕಿನ ಮೇಲೆ ಶುಭದ ಜಯ ಸಾರುತ್ತದೆ
Team Udayavani, Oct 20, 2017, 5:23 PM IST
ಮುಂಬಯಿ: ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಎಲ್ಲ ಆಚರಣೆಗಳು ದೈವಿಕ ಹಿನ್ನೆಲೆಯಿಂದ ಕೂಡಿದೆ. ಹಬ್ಬಗಳು, ಸ್ನೇಹ, ಸೌಹಾದì, ಉತ್ತಮ ಚಿಂತನೆ, ಮನುಷ್ಯ, ಪ್ರಾಣಿ, ಪಕ್ಷಿ ಹಾಗೂ ಚಿರಾಚರ ವಸ್ತುಗಳ ಮಧುರ ಬಾಂಧವ್ಯವನ್ನು ಗಟ್ಟಿಯಾಗಿಸುತ್ತದೆ. ಜೀವನಾದರ್ಶವೇ ದೀಪವೆಂಬ ಅರ್ಥದಲ್ಲಿ ಹಚ್ಚುತ್ತ ಬಂದ ದೀಪಾವಳಿ ಕೆಡುಕಿನ ಮೇಲೆ ಶುಭದ ಜಯವನ್ನು ಸಾರುತ್ತದೆ. ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕೂಡಿರುವ ಈ ಹಬ್ಬವು ಸಮಗ್ರ ಕುಟುಂಬದ ಆನಂದ ಮತ್ತು ಚೈತನ್ಯವನ್ನು ಹೆಚ್ಚಿಸಲಿ. ಶಾಶ್ವತವಲ್ಲದ ಬದುಕಿನಲ್ಲಿ ಗತ ಕಾಲದ ಕಹಿನೆನಪುಗಳನ್ನು ಮರೆತು ಸಿಹಿ ನೆನಪಿನೊಂದಿಗೆ ಕೂಡಿ ಬಾಳುವ ಸಂಸಾರ ನಮ್ಮದಾಗಲಿ ಎಂದು ದ್ವಿತೀಯ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಅಭಿಪ್ರಾಯಿಸಿದರು.
ಅ.18ರಂದು ಮೀರಾರೋಡ್ ಪೂರ್ವದ ಮೀರಾಗಾಂವ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಶರೀರ ನಮ್ಮದಾದರೂ ವಯಸ್ಸು ಹೆಚ್ಚಿದಂತೆ ಎಲ್ಲಾ ಅಂಗಾಂಗಳು ದುರ್ಬಲವಾಗುತ್ತದೆ. ನಾನು, ನನ್ನದು, ಎಲ್ಲವೂ ನನ್ನಿಂದಲೇ ಎಂಬ ಮಮಕಾರದ ಭಾವನೆ ಶೂನ್ಯ ವಾಗುತ್ತದೆ. ಇದ್ದಷ್ಟು ಕಾಲ ಸಿದ್ಧಿ- ಸಾಧನೆಗಳ ಮೂಲಕ ಜೀವನದ ಶ್ರೇಷ್ಠತೆಯನ್ನು ಹೆಚ್ಚಿಸಬೇಕು. ನಾವೆಲ್ಲ ನಿಮಿತ್ತ ಮಾತ್ರ. ಅಂತಿಮ ತೀರ್ಮಾನ ಭಗವಂತನದ್ದು ಎಂದು ನುಡಿದು, ಮುಂದಿನ ಜನವರಿ 18 ರಂದು ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಜರಗುವ ಪರ್ಯಾ
ಯೋತ್ಸವದಲ್ಲಿ ಕುಟುಂಬ ಸಮೇತ ಉಪಸ್ಥಿತರಿದ್ದು, ಭಗವಂತನ ಕೃಪಾಕಟಾಕ್ಷಕ್ಕೆ ಪಾತ್ರ ರಾಗಬೇಕು ಎಂದರು.
ಮಂದಿರದ ಪ್ರಧಾನ ಅರ್ಚಕ ಹಾಗೂ ಟ್ರಸ್ಟಿ ಸಾಂತಿಂಜ ಜನಾರ್ದನ ಭಟ್ ದಂಪತಿ ಶ್ರೀಗಳ ಪಾದಪೂಜೆ ಸಲ್ಲಿಸಿದರು. ಟ್ರಸ್ಟಿ, ಆಡಳಿತ ಮಂಡಳಿ ಹಾಗೂ ಮಹಿಳಾ ಸದಸ್ಯೆಯರು, ಪೂರ್ಣಕುಂಭಾ ತುಳಸಿ ಹಾರಾರ್ಪಣೆಯೊಂದಿಗೆ ಸ್ವಾಗತಿಸಿದರು. ಸಾಂತಿಂಜ ಜನಾದìನ ಭಟ್ ಅವರು, ಶ್ರೀಗಳ ಕಾರ್ಯ ಸಾಧನೆಗಳ ಬಗ್ಗೆ ವಿವರಿಸಿ, ಉಡುಪಿ ಶ್ರೀ ಕೃಷ್ಣ ಕ್ಷೇತ್ರದ ಬಂಗಾರದ ಗೋಪುರ ದ್ವಾರಕೆಯ ವೈಭವವನ್ನು ನೆನಪಿಸಲಿದೆ. ಪ್ರತಿಚದರ ಅಡಿಗೆ ಸುಮಾರು 40 ಕಿಲೋ ಬಂಗಾರದಂತೆ ಸುಮಾರು 2500 ಚದರಡಿಗೆ ಸುಮಾರು 100 ಕಿಲೋ ಬಂಗಾರಬೇಕಾಗುತ್ತದೆ. ಈ ಬೃಹತ್ ಯೋಜನೆಯು ಸಾಕಾರಗೊಳ್ಳಲು ಭಕ್ತ ಕೋಟಿಯ ಸಹಕಾರ ದಿಂದ ಮಾತ್ರ ಸಾಧ್ಯ. ಸುವರ್ಣಮಯ ಗೋಪುರದ ಪ್ರತಿಯೊಂದು ಕಣ ಕಣದಲ್ಲೂ ಕಿಂಚಿತ್ತು ಕಾಣಿಕೆಯನ್ನು ಸ್ವೀಕರಿಸಲಾಗುವುದು. ಇದರಿಂದ ಜನ ಸಾಮಾನ್ಯರ ಆಧ್ಯಾತ್ಮಿಕ ಚಿಂತನೆ, ಸಹಕಾರ ಮನೋಭಾವ ಕಂಗೊಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಾದ ನೀಲು ಬಾಯಿ ಅವರು ನೀಡಿದ ನೀಡಿದ ಬಂಗಾರವನ್ನು ಶ್ರೀಗಳು ಸ್ವೀಕರಿಸಿ ಮಂತ್ರಾಕ್ಷತೆ, ಫಲಪುಷ್ಪವನ್ನಿತ್ತು ಆಶೀರ್ವದಿಸಿದರು. ದೇವಸ್ಥಾನದ ಅಧ್ಯಕ್ಷ ಬಾಬಾ ರಂಜನ್ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ಮಾತ್ರೆ, ಕೋಶಾಧಿಕಾರಿ ವೆಂಕಟೇಶ್ ಪಾಟೀಲ್, ಉಪಾಧ್ಯಕ್ಷ ಅನಿಲ್ ಕೆ. ಶೆಟ್ಟಿ, ಜತೆ ಕಾರ್ಯದರ್ಶಿ ಹೇಮಂತ್ ಸಂಕಪಾಲ್, ಸ್ಥಾಪಕಾಧ್ಯಕ್ಷ ಕೃಷ್ಣ ಜಿ. ಶೆಟ್ಟಿ, ಸದಸ್ಯರಾದ ಸುಂದರ್ ಶೆಟ್ಟಿಗಾರ್, ಪ್ರಸನ್ನ ಶೆಟ್ಟಿ, ಭಾಗವತರಾದ ಶಂಕರ್ ನಾಯಕ್ ಎಳ್ಳಾರೆ, ಮಾಧವ ಭಟ್, ನಾಗರಾಜ್ ಭಟ್, ವಾಸುದೇವ ಭಟ್, ಶ್ರೀಶ ಭಟ್, ದೇವರಾಜ್ ಭಟ್, ಸುರೇಶ್ ಭಟ್ ಕುಂಟಾಡಿ, ವಿಠಲ್ ಭಟ್, ಗೌರಿ ಶಂಕರ್ ಕಾರಿಂಜೆ, ರಮಕಾಂತ ನಕ್ಷತ್ರಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ