ಕೆಪಿಸಿಸಿ ಕಚೇರಿಯಲ್ಲಿ ಎಡವಿ ಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ
Team Udayavani, May 24, 2017, 11:37 AM IST
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಕಚೇರಿಯ ಬಾಗಿಲಿನಲ್ಲಿ ಮುಗ್ಗರಿಸಿ ಬಿದ್ದ ಘಟನೆ ಬುಧವಾರ ನಡೆದಿದೆ.
ಮೆಟ್ಟಿಲುಗಳನ್ನು ಹತ್ತಿ ಒಳ ಪ್ರವೇಶಿಸುವ ವೇಳೆ ಸಿದ್ದರಾಮಯ್ಯ ಅವರ ಕಾಲಿಗೆ ಪಂಚೆ ಸಿಲುಕಿ ಮುಗ್ಗರಿಸಿ ಬಿದ್ದಿದ್ದಾರೆ. ಕೂಡಲೇ ಜೊತೆಯಲ್ಲಿದ್ದ ಶಾಸಕ ರೋಷನ್ ಬೇಗ್ ಮತ್ತು ಮೋಯಿದ್ದೀನ್ ಬಾವಾ ಅವರು ಮುಖ್ಯಮಂತ್ರಿಗಳನ್ನು ಮೇಲಕ್ಕೆತ್ತಿದ್ದರು.
ಘಟನೆಯಿಂದ ಎಲ್ಲರೂ ಒಂದು ಕ್ಷಣ ಗಾಬರಿಗೊಂಡರು. ಸಿಎಂ ಏನೂ ಆಗಿಲ್ಲ ಎಂದು ತಮ್ಮ ಕೆಲಸದಲ್ಲಿ ಮುಂದುವರಿದರು.
ಕೆಲವರು ಸಿಎಂ ಎಡವಿರುವುದು ಅಪಶಕುನ ಎಂದಿದ್ದಾರೆ. ಈ ಹಿಂದೆ ಕಾರಿನ ಮೇಲೆ ಕಾಗೆ ಕುಳಿತದ್ದು, ಹೆಲಿಕ್ಯಾಪ್ಟರ್ಗೆ ಹದ್ದು ಡಿಕ್ಕಿಯಾದ ಪ್ರಕರಣಗಳನ್ನೂ ಅಪಶಕುನಗಳು ಎನ್ನಲಾಗಿತ್ತು.