ಹೈನುಗಾರಿಕೆ ಮಾಹಿತಿ ನೀಡುವ ಉಚಿತ ಆ್ಯಪ್ ಬಿಡುಗಡೆ
Team Udayavani, Jul 20, 2017, 5:10 AM IST
ಬೆಂಗಳೂರು: ವೈಜ್ಞಾನಿಕವಾಗಿ ಹೈನುಗಾರಿಕೆ ಕುರಿತು ರೈತರಿಗೆ ಮಾಹಿತಿ ನೀಡುವ ಮೊಬೈಲ್ ಆ್ಯಪ್ ಅನ್ನು ಪಶು ಸಂಗೋಪನೆ ಸಚಿವ ಎ.ಮಂಜು ಬಿಡುಗಡೆ ಮಾಡಿದರು.
ಭಾರತೀಯ ಅನುಸಂಧಾನ ಪರಿಷತ್ ಯೋಜನೆಯಡಿ ಬೆಂಗಳೂರಿನ ಪಶುವೈದ್ಯಕೀಯ ವಿದ್ಯಾಲಯ ಜಯಲಕ್ಷ್ಮೀ ಅಗ್ರೊ ಟೆಕ್ ಸಂಸ್ಥೆಯ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಿರುವ ನೂತನ ಆ್ಯಪನ್ನು ರೈತರು ಪ್ಲೇ ಸ್ಟೋರ್ನಲ್ಲಿ ಡೈರಿ ಕನ್ನಡ ಎಂದು ನಮೂದಿಸಿ ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಬಿಡುಗಡೆ ನಂತರ ಮಾತನಾಡಿದ ಸಚಿವ ಎ. ಮಂಜು, ಈ ಮೊಬೈಲ್ ಆಪ್ನಲ್ಲಿ ರೈತರು ವೈಜ್ಞಾನಿಕವಾಗಿ ಹೈನುಗಾರಿಕೆ ನಡೆಸಲು ಧ್ವನಿ ಮತ್ತು ಚಿತ್ರಗಳ ಮೂಲಕ ಮಾಹಿತಿ ನೀಡಲಾಗಿದೆ. ಹಸು ಮತ್ತು ಎಮ್ಮೆ ತಳಿಗಳ ಪರಿಚಯ, ಬೆದೆಯ ಲಕ್ಷಣಗಳು, ಹೈನು ರಾಸುಗಳಲ್ಲಿ ಕೃತಕ ಗರ್ಭಧಾರಣೆ, ಅಧಿಕ ಹಾಲು ಕೊಡುವ ರಾಸುಗಳ ಆಯ್ಕೆ, ವಸತಿ ವ್ಯವಸ್ಥೆ ಮತ್ತು ವೈಜ್ಞಾನಿಕ ನಿರ್ವಹಣೆ,ರಾಸುಗಳ ಆಹಾರ, ಅವುಗಳಲ್ಲಿ ಕಂಡು ಬರುವ ಮುಖ್ಯ ರೋಗಗಳು ಮತ್ತು ನಿಯಂತ್ರಣ, ಶುದ್ಧ ಹಾಲಿನ ಉತ್ಪಾದನೆ, ಹೈನುಗಾರಿಕೆಯಲ್ಲಿ ಆರ್ಥಿಕತೆ ಮುಂತಾದ ಮಾಹಿತಿ ನೀಡಲಾಗಿದೆ. ರೈತರು ಈ ಆ್ಯಪ್ ಬಳಕೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಆದಾಯ ಪಡೆಯಬಹುದು ಎಂದು ಎ.ಮಂಜು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…