ಮಲೇಶ್ಯದಿಂದ ಬಂದ ಬಾಂಗ್ಲಾ ವಿದ್ಯಾರ್ಥಿ ಮೊಸಳೆಯನ್ನು ಕೆಣಕಿ ಬಲಿ
Team Udayavani, Mar 25, 2017, 7:31 PM IST
ಢಾಕಾ : ಮಲೇಶ್ಯದಲ್ಲಿ ಓದುತ್ತಿದ್ದ ಬಾಂಗ್ಲಾ ವಿದ್ಯಾರ್ಥಿಯೊಬ್ಬ ರಜೆಯಲ್ಲಿ ಊರಿಗೆ ಬಂದವನು ಮೊಸಳೆಗೆ ಆಹಾರವಾದ ದುರದೃಷ್ಟಕರ ಘಟನೆ ವರದಿಯಾಗಿದೆ.
ಮಲೇಶ್ಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಆಸದ್ ಉಜ್ಜಮಾನ್ ರಾನಿ ಎಂಬ 29ರ ಹರೆಯದ ಬಾಂಗ್ಲಾದೇಶೀಯ ತರುಣನು ತನ್ನ ಸ್ನೇಹಿತರು ಹಾಗೂ ಕುಟುಂಬ ಸದಸ್ಯರೊಂದಿಗೆ, ಇಲ್ಲಿಂದ ಸುಮಾರು 330 ಕಿಮೀ.ದೂರದ ಬಾರ್ಗುಣ ತಾಲ್ತೋಲಿ ಉಪಜಿಲ್ಲೆಯಲ್ಲಿನ ತೇಂಗ್ರಗಿರಿ ಪರಿಸರ ಉದ್ಯಾನವನಕ್ಕೆ ಹೋಗಿದ್ದ.
ಅಸದ್ ಮತ್ತು ಆತನ ಸೋದರ ಸಂಬಂಧಿ ಅಲ್ ಅಮೀನ್ ಸಂದರ್ಶಕರ ಸುರಕ್ಷೆಗಾಗಿ ಗೊತ್ತುಪಡಿಸಲಾಗಿದ್ದ ಗಡಿಯನ್ನು ದಾಟಿ ಮೊಸಳೆ ಇರುವಲ್ಲಿಗೆ ಹೋಗಿದ್ದರು. ಮೊಸಳೆಯನ್ನು ಹತ್ತಿರದಿಂದ ಕಾಣುವ ಆತುರದಲ್ಲಿ ಅಸದ್ ಕೋಲಿನಿಂದ ಮೊಸಳೆಯನ್ನು ಕೆಣಕಿದ.
ಒಡನೆಯೇ ಅದು ಅಸದ್ ನನ್ನು ಕಚ್ಚಿ ನೀರಿಗೆ ಎಳೆದೊಯ್ದಿತು. ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಅಸದ್ನ ಶವವವನ್ನು ಕೊಳದಿಂದ ಮೇಲೆತ್ತಲಾಯಿತು ಎಂದು ಡಿಬಿ ನ್ಯೂಸ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ