ಭಾರತ-ಚೀನ ನಡುವೆ 5.63 ಲಕ್ಷ ಕೋಟಿ ರೂ. ಮೊತ್ತದ ವಹಿವಾಟು


Team Udayavani, Feb 24, 2021, 7:05 AM IST

ಭಾರತ-ಚೀನ ನಡುವೆ 5.63 ಲಕ್ಷ ಕೋಟಿ ರೂ. ಮೊತ್ತದ ವಹಿವಾಟು

ಬೀಜಿಂಗ್‌: 2020ರಲ್ಲಿ ಗಡಿ ಬಿಕ್ಕಟ್ಟಿನಿಂದಾಗಿ ಭಾರತ ಹಾಗೂ ಚೀನ ನಡುವೆ ಸಂಬಂಧ ಹದ ಗೆಟ್ಟಿದ್ದ ನಡುವೆಯೂ ಉಭಯ ದೇಶಗಳ ನಡುವಿನ ದ್ವಿಮುಖ ವ್ಯಾಪಾರ ವಹಿವಾಟು ನೆಲಕ್ಕಚ್ಚಿರಲಿಲ್ಲ. ಎರಡೂ ರಾಷ್ಟ್ರಗಳು ಬರೋಬ್ಬರಿ 5.63 ಲಕ್ಷ ಕೋಟಿ ರೂ. ವಹಿವಾಟು ನಡೆಸಿದ್ದು, ಇದು ಬೇರೆಲ್ಲ ರಾಷ್ಟ್ರಗಳಿಗಿಂತ ಅತ್ಯಧಿಕ ಎಂದು ಕೇಂದ್ರ ವಿತ್ತ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶ ಹೇಳಿದೆ.

ಭಾರತ ಕಳೆದ ವರ್ಷ 4.25 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಉತ್ಪನ್ನಗಳನ್ನು ಚೀನದಿಂದ ಆಮದು ಮಾಡಿಕೊಂಡಿತ್ತು. ಈ ಮೊತ್ತ ನಂ.1- ನಂ.2 ಸ್ಥಾನದಲ್ಲಿರುವ ಅಮೆರಿಕ, ಯುಎಇಗಳಿಂದ ಭಾರತ ಮಾಡಿಕೊಳ್ಳುವ ಒಟ್ಟು ಆಮದುಗಿಂತಲೂ ಅಧಿಕ. ಆದರೆ ಒಟ್ಟು 5.63 ಲಕ್ಷ ಕೋಟಿ ರೂ. ವಹಿವಾಟಿನಲ್ಲಿ ಭಾರತ ಕೇವಲ 1.37 ಲಕ್ಷ ಕೋಟಿ ರೂ.ಗಳಷ್ಟು ಮೊತ್ತದ ಉತ್ಪನ್ನಗಳನ್ನು ಮಾತ್ರವೇ ಚೀನಕ್ಕೆ ರಫ್ತು ಮಾಡಿದೆ. ಅಂದರೆ, ದ್ವಿಮುಖ ವ್ಯಾಪಾರದಲ್ಲಿ ನಮ್ಮ ಪಾಲು ಕೇವಲ ಶೇ.11!

ಭಾರತವು ಚೀನದಿಂದ 2.89 ಲಕ್ಷ ಕೋಟಿ ರೂ. ಮೊತ್ತದ ಭಾರೀ ಯಂತ್ರಗಳು, ಟೆಲಿಕಾಂ ಉಪಕರಣಗಳು, ಗೃಹ ಬಳಕೆ ವಸ್ತುಗಳನ್ನು ಆಮದು ಮಾಡಿಕೊಂಡಿದೆ.

ಸ್ವಾವಲಂಬಿಯಾಗಲು 4-5 ವರ್ಷ ಬೇಕು: ಸ್ಥಳೀಯವಾಗಿ ವಸ್ತುಗಳ ಉತ್ಪಾದನೆಗೆ ಪ್ರಧಾನಿ ಮೋದಿ ಅವರು ಪಿಎಲ್‌ಐ ಯೋಜನೆ (ಉತ್ಪಾದನೆ ಆಧಾರಿತ ಪ್ರೋತ್ಸಾಹಧನ) ಜಾರಿಮಾಡಿದ್ದಾರೆ. ಈ ಅನುದಾನ ಬಳಸಿಕೊಂಡು ಈಗಾಗಲೇ ಸ್ಥಳೀಯವಾಗಿ ವಸ್ತುಗಳ ತಯಾರಿಕೆ ಶುರುವಾಗಿದೆ. “ಪಿಎಲ್‌ಐ ಬಳಸಿಕೊಂಡು ಭಾರತ ಸ್ವಾವಲಂಬಿಯಾಗಲು ಇನ್ನೂ 4-5 ವರ್ಷಗಳು ಬೇಕು. ಅಲ್ಲಿಯವರೆಗೆ ಚೀನ ವಸ್ತುಗಳನ್ನೇ ಅವಲಂ­ಬಿ­ಸ­ಬೇಕಾಗಿದೆ’ ಎನ್ನುತ್ತಾರೆ ಆರ್ಥಿಕ ತಜ್ಞ ಅಮಿತೇಂದು ಪಾಲಿಟ್‌.

45 ಚೀನೀ ಸಂಸ್ಥೆಗಳ ಹೂಡಿಕೆಗೆ ಸಮ್ಮತಿ ವಿಚಾರ ಸುಳ್ಳು
45 ಚೀನೀ ಸಂಸ್ಥೆಗಳಿಗೆ ಹೂಡಿಕೆ ಮಾಡಲು ಭಾರತ ಗ್ರೀನ್‌ ಸಿಗ್ನಲ್‌ ನೀಡುತ್ತಿದೆ ಎಂಬ ಸುದ್ದಿಯನ್ನು ಕೇಂದ್ರ ಸರಕಾರ‌ ಸ್ಪಷ್ಟವಾಗಿ ನಿರಾಕರಿಸಿದೆ. “ಯಾವ ಚೀನೀ ಕಂಪೆನಿಗಳ ಹೂಡಿಕೆಗೂ ಭಾರತ ಸಮ್ಮತಿ ನೀಡಿಲ್ಲ’ ಎಂದು ಸರಕಾರದ ಮೂಲಗಳು ಸ್ಪಷ್ಪಪಡಿಸಿವೆ. “ಹಾಂಕಾಂಗ್‌ ಮೂಲದ 3 ಪ್ರಸ್ತಾವಗಳಿಗಷ್ಟೇ ಒಪ್ಪಿಗೆ ನೀಡಲಾಗಿದೆ. ಸಿಟಿಜನ್‌ ವಾಚಸ್‌, ನಿಪ್ಪಾನ್‌ ಪೇಂಟ್ಸ್‌ ಮತ್ತು ನೆಟ್‌ಪ್ಲೇ ಇಂಥ ಅವಕಾಶ ಪಡೆದಿವೆ. ಇವುಗಳ ಪೈಕಿ 2 ಜಪಾನೀಸ್‌ ಮತ್ತು 1 ಎನ್‌ಆರ್‌ಐಗೆ ಸೇರಿದ ಕಂಪೆನಿಗಳಾಗಿವೆ’ ಎಂದಿದೆ. ಭಾರತದ ಎಫ್ಡಿಐ ಕಾಯ್ದೆಯ ಹೊಸ ತಿದ್ದುಪಡಿಯಂತೆ ಬಿಕ್ಕಟ್ಟು ಹೊಂದಿರುವ ಯಾವುದೇ ನೆರೆರಾಷ್ಟ್ರಗಳು ಸರಕಾರದಿಂದ ರಕ್ಷಣ ವಿಶ್ಲೇ­ಷಣೆಗೊಳಪಟ್ಟೇ ಅನುಮತಿ ಪಡೆಯಬೇಕು ಎಂದಿದೆ.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.