ಆ್ಯಪ್‌ನಲ್ಲಿ ಅಡಕೆ ಬದಲು ಬಾಳೆ!

ಪಹಣಿಯಲ್ಲಿ ಎಡವಟ್ಟು: ಬೆಳೆಗಾರರಿಗೆ ದಿಗಿಲು,ಮುಖ್ಯ ಬೆಳೆ ಬದಲಾಯಿಸಿದ ಆ್ಯಪ್‌

Team Udayavani, Feb 24, 2021, 5:11 PM IST

ಆ್ಯಪ್‌ನಲ್ಲಿ ಅಡಕೆ ಬದಲು ಬಾಳೆ!1

ಶಿರಸಿ: ರೈತರ ಪಹಣಿಯಲ್ಲಿ ರೈತರೇ ಬೆಳೆ ನೋಂದಣಿ ಮಾಡಿಕೊಳ್ಳುವಂತೆ ಸಿದ್ಧಪಡಿಸಿಅನುಷ್ಠಾನಗೊಳಿಸಿದ ಆ್ಯಪ್‌ನಲ್ಲಿ ಮುಖ್ಯ ಬೆಳೆಯನ್ನೇ ಬದಲಾಯಿಸಿ ಎಡವಟ್ಟು ಮಾಡಿದ ಪ್ರಸಂಗ ನಡೆದಿದೆ.

ಇದರಿಂದ ಅನೇಕ ಬೆಳೆಗಾರರಿಗೆ ದಿಗಿಲು ಸೃಷ್ಟಿಸಿದ್ದು, ಕೆಳಸ್ಥರದ ಅಧಿಕಾರಿಗಳು ಸಾಫ್ಟ್ ವೇರ್‌ ಬೈಯ್ಯುವಂತಾಗಿದೆ. ಕಳೆದ ಜೂನ್‌, ಜುಲೈ, ಆಗಸ್ಟ್‌ನಲ್ಲಿಬೆಳೆಗಾರರ ಕೈಗೆ ಮೊಬೈಲ್‌ ಮೂಲಕ ಸಾಫ್ಟ್ ವೇರ್‌ ನೀಡಿ, ಕೆಲವೆಡೆ ಕೃಷಿ ಇಲಾಖೆಮೂಲಕ ಜನರನ್ನು ನೇಮಿಸಿ ಬೆಳೆ ಸರ್ವೇಮಾಡಲಾಗಿತ್ತು. ಅಂದು ಮಾಡಿದ ಬೆಳೆ ಸರ್ವೇ ಇದೀಗ ಪಹಣಿಯಲ್ಲೂದಾಖಲಾಗಿದ್ದು, ಮುಖ್ಯ ಬೆಳೆಯ ಕಾಲಂನಲ್ಲಿ ಇರಬೇಕಿದ್ದ ಅಡಕೆ ಬದಲಿಗೆ ಬಾಳೆ ಎಂದುಬರೆಯಲಾಗಿದೆ. ಅಡಕೆ ಬೆಳೆಗಾರರ ಭಾಗಾಯ್ತ ಕಾಲಂನಲ್ಲಿ ನಿಲ್‌ ಮಾಡಿದೆ. ಮುಖ್ಯವಾಗಿ ಒಂದೇ ಬೆಳೆ ದಾಖಲಿಸಿದ್ದಪಹಣಿಯಲ್ಲಿ ಈ ಎಡವಟ್ಟು ಆಗಿಲ್ಲ.ಬದಲಿಗೆ ಅಡಕೆಯಂತಹ ಮಿಶ್ರ ಬೆಳೆಯ ತೋಟದಲ್ಲಿ ಈ ಸಮಸ್ಯೆ ಉಂಟಾಗಿದೆ. ಬಹುವಾರ್ಷಿಕ ಅಡಕೆಯ ಬದಲಿಗೆ ಬಾಳೆ ಮುಖ್ಯ ಬೆಳೆಯಾದರೆ, ಅಡಕೆ, ಕಾಳು ಮೆಣಸು, ಏಲಕ್ಕಿಗಳು ಉಪ ಬೆಳೆಯಾಗಿ ಗುರುತಾಗಿದೆ.

ಇದು ರೈತರಿಗೆ ಏಪ್ರಿಲ್‌ನಲ್ಲಿ ಸಿಗಬೇಕಾದ ಬೆಳೆ ಸಾಲಕ್ಕೂ, ಬೆಳೆವಿಮೆಗೂ ಸಂಕಷ್ಟ ತಂದೊಡ್ಡಲಿದೆ.ಸರಕಾರದ ಈ ಆ್ಯಪ್‌ನಲ್ಲಿ ಮೊದಲೇ ಮುಖ್ಯ ಬೆಳೆ, ಅಂತರ ಬೆಳೆ ಪ್ರತ್ಯೇಕವಾಗಿ ದಾಖಲಿಸಲು ಅವಕಾಶ ನೀಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಬದಲಿಗೆ ಎಲ್ಲವೂ ಮುಖ್ಯ ಹಾಗೂ ಅಂತರ ಬೆಳೆ ಎಂದು ದಾಖಲಿಸಲು ಅವಕಾಶ ಮಾಡಿತ್ತು. ಭಾಗಾಯ್ತದ ಪ್ರಸ್ತಾಪ ಕೂಡ ಇಲ್ಲವಾಗಿತ್ತು. ಈ ಕುರಿತು ಬೆಳೆ ಸರ್ವೇ ಆ್ಯಪ್‌ ಕುರಿತು “ಉದಯವಾಣಿ’ ಆಗಸ್ಟ್‌ 22 ರಂದೇ ವರದಿ ಮಾಡಿತ್ತು. ಕೃಷಿ ಸಚಿವ ಬಿ.ಸಿ. ಪಾಟೀಲರು ಶಿರಸೀಲಿ ಇದು ಗೊಂದಲ ಆಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.

ಈಗ ಮುಖ್ಯ ಬೆಳೆ ಮಿಶ್ರ ಬೆಳೆ ಕಾಲಂಗೆ ಹೋಗಿದ್ದರಿಂದ ಬೆಳೆ ಸಾಲ ಹಾಗೂ ಬೆಳೆವಿಮೆ ಎರಡಕ್ಕೂ ಸಮಸ್ಯೆ ಆಗುವ ಸಾಧ್ಯತೆಇದೆ. ಅಡಕೆ ಬೆಳೆಗಾರರ ಭಾಗಾಯ್ತ ಕೂಡ ದಾಖಲಾಗಿಲ್ಲ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ಶಿಫಾರಸ್ಸು ಮೂಲಕ ಈ ಪಹಣಿಯ ದುರಸ್ತಿ ಮಾಡುವ ಅಧಿಕಾರ ಉಪ ತಹಶೀಲ್ದಾರರು ಅಥವಾ ತಹಶೀಲ್ದಾರರಿಗೆ ನೀಡಬೇಕು. ಆ್ಯಪ್‌ನಲ್ಲೂ ಮುಖ್ಯಬೆಳೆ, ಅಂತರ ಬೆಳೆ, ಬದುವಿನ ಬೆಳೆ ಎಂದು ಪ್ರತ್ಯೇಕವಾಗಿ ದಾಖಲಿಸಿ ಭೂಮಿ ಸಾಫ್ಟ್‌ವೇರ್‌ಗೆಕೊಡುವಂತಾಗಬೇಕು. ಹಾಗಾದಾಗ ಮಾತ್ರ ಈ ಗೊಂದಲಕ್ಕೆ ಶೀಘ್ರ ತೆರೆ ಎಳೆಯಬಹುದು. ಕೋವಿಡ್ ಸಂಕಷ್ಟದ ಬೆನ್ನಲ್ಲೇ ಪಹಣಿ ಸಂಕಷ್ಟ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.

ಬಹು ವಾರ್ಷಿಕ ಬೆಳೆ ಹಾಗೂ ಮಿಶ್ರ ಬೆಳೆ ಇದ್ದಲ್ಲಿ ಈ ಸಮಸ್ಯೆ ಆಗಿದ್ದು ಗಮನಕ್ಕೆ ಬಂದಿದೆ. ಪರಿಹಾರ ಕುರಿತು ಸಂಬಂಧಪಟ್ಟವರ ಜತೆಸಮಾಲೋಚಿಸಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. –ಎಚ್‌.ಕೆ. ಕೃಷ್ಣಮೂರ್ತಿ, ಅಪರ ಜಿಲ್ಲಾಧಿಕಾರಿ, ಉತ್ತರ ಕನ್ನಡ.

ಪಹಣಿಯಲ್ಲಿ ಅಡಕೆ ಪ್ರಧಾನ ಬೆಳೆ. ಆದರೆ, ಬಾಳೆ ಎಂದು ದಾಖಲಾಗಿದೆ. ಸರಕಾರವೇ ಇದನ್ನು ದುರಸ್ತಿ ಮಾಡಿ ರೈತರ ಅಲೆದಾಟ, ಆತಂಕ ತಪ್ಪಿಸಬೇಕು. – ಜಗದೀಶ ಬಾಳೇಹದ್ದ, ರೈತ. -ರಾಘವೇಂದ್ರ ಬೆಟ್ಟಕೊಪ್ಪ

 

-ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.