ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

  ಹೆಚ್ಚಿನ ಸಂಶೋಧನೆಗೆ ಆರ್ಥಿಕ ಅಡಚಣೆ

Team Udayavani, Feb 26, 2021, 8:49 PM IST

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಉಡುಪಿ/ಪಡುಬಿದ್ರಿ:  ಭಾರತದಲ್ಲಿ ಪ್ರಥಮ ಬಾರಿಗೆ ನೀರಿನಿಂದ ಟೇಕ್‌ ಆಫ್ ಆಗಿ ನೀರಿನಲ್ಲೇ ಲ್ಯಾಂಡ್‌ ಆಗುವ ಅತ್ಯಂತ ಹಗುರದ ಮೈಕ್ರೋ ಸೀಪ್ಲೇನ್‌ ಅನ್ನು ಹೆಜಮಾಡಿಯಲ್ಲಿ 8 ಮಂದಿ ಎಂಜಿನಿಯರಿಂಗ್‌ ಪದವೀಧರರ ತಂಡವು ಸಂಶೋಧನೆ ನಡೆಸಿ ಹಾರಿಸಿ ಸಾಧನೆ ಮಾಡಿದೆ.

ಈ ಸೀಪ್ಲೆ„ನ್‌ ದೇಶ ರಕ್ಷಣೆ, ನೆರೆ ಸಂದರ್ಭ ಬಳಕೆ, ಪ್ರವಾಸೋದ್ಯಮ ಬಳಕೆಗೆ  ಅನುಕೂಲವಾಗುವಂತಿದೆ. ಸ್ಥಳೀಯ ನೆರವನ್ನಷ್ಟೇ ಬಳಸಿಕೊಂಡು ಉತ್ಸಾಹಿಗಳ ತಂಡ ಈ ಸಾಧನೆ ಮಾಡಿದ್ದು, ಹೆಚ್ಚಿನ ಸಂಶೋಧನೆಯ ಅಗತ್ಯವನ್ನು ಮನಗಂಡಿದೆ.

ಈ ತಂಡದ ಮುಖ್ಯಸ್ಥರು ಪುಷ್ಪರಾಜ್‌ ಅಮೀನ್‌ ನರಿಕುದ್ರು. ಡ್ರೋನ್‌ ಪೈಲೆಟ್‌ ಆಗಿರುವ ಅಭಿಷೇಕ್‌ ಕೋಟ್ಯಾನ್‌, ಟ್ರೈನಿ ಪೈಲಟ್‌ ಆಗಿರುವ ವಿನಯ್‌ ಯು., ಸಂತ ಅಲೋಶಿಯಸ್‌ ಕಾಲೇಜು ವಿದ್ಯಾರ್ಥಿನಿ ಅಶ್ವಿ‌ನಿ ರಾವ್‌, ಏರೋನಾಟಿಕಲ್‌ ಎಂಜಿನಿಯರ್‌ ಆಗಿರುವ ಶಯನಿ ರಾವ್‌, ರೇಶ್ಮಾ ಜೆ. ಬಂಗೇರ ಹೆಜಮಾಡಿ, ವಸುರಾಜ್‌ ಅಮೀನ್‌ ನಡಿಕುದ್ರು, ಏರೋನಾಟಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿ ಆಗಿರುವ ಉತ್ಸವ್‌ ಯು. ಅವರನ್ನು ಸೇರಿಸಿಕೊಂಡು, ಹೊಸ ಅನ್ವೇಷಣೆ ಮಾಡಲಾಗಿದೆ.

ನೆರವಿಗೆ ಯಾಚನೆ  :

ಹೆಚ್ಚಿನ ಸಂಶೋಧನೆ, ಸುಧಾರಿತ ಸೀಪ್ಲೇನ್‌ ತಯಾರಿಗೆ ಆರ್ಥಿಕ ಸಂಕಷ್ಟವಿದ್ದು ಸಂಘ-ಸಂಸ್ಥೆಗಳು, ಸರಕಾರದ ನೆರವಿನ ಅಗತ್ಯವಿದೆ ಎಂದು ತಂಡದ ಮುಖ್ಯಸ್ಥ  ಪುಷ್ಪರಾಜ್‌ ಅಮೀನ್‌ ನರಿಕುದ್ರು ಅವರು ಶುಕ್ರವಾರ ನಡೆದ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಅಭಿಷೇಕ್‌ ಎಂ. ಕೋಟ್ಯಾನ್‌ ಉಳ್ಳಾಲ ಮಾತನಾಡಿ, ಇನ್ನಷ್ಟು ಸಂಶೋಧನೆಗೆ ಯಂತ್ರೋಪಕರಣಗಳು, ಸೇಫ್ಟಿ ಕಿಟ್‌ ಇನ್ನಿತರ ಸೌಕರ್ಯವನ್ನು ವ್ಯವಸ್ಥೆಗೊಳಿಸಬೇಕಿದೆ. ಇದನ್ನು ಸರಕಾರ ಮಾಡಿದೆ, ಇನ್ನಷ್ಟು ಸಾಧಿಸುವ ಉತ್ಸಾಹವಿದೆ ಎಂದರು. ಸರಕಾರ ವ್ಯವಸ್ಥೆಗೊಳಿಸಿದರೆ ಮತ್ತಷ್ಟು ಸಾಧಿಸುವ ಹುಮ್ಮಸ್ಸಿದೆ ಎಂದರು.

ಉತ್ಸವ್‌ ಉಮೇಶ್‌ ಮಂಗಳೂರು, ಶಯಾನಿ ರಾವ್‌ ಶೃಂಗೇರಿ, ಅಶ್ವಿ‌ನಿ ರಾವ್‌ ಶೃಂಗೇರಿ, ವಿನಯ್‌ ಯು. ಶಿವಮೊಗ್ಗ, ವಸುರಾಜ್‌ ಅಮೀನ್‌ ನರಿಕುದ್ರು, ರೇಷ್ಮಾ ಜೆ. ಬಂಗೇರ ಹೆಜಮಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

7 ಲಕ್ಷ  ರೂ. ವೆಚ್ಚ  :

ಸೀಪ್ಲೇನ್‌ ತಯಾರಿಸಲು ಸರಿಯಾದ ಸ್ಥಳಾವಕಾಶ, ವರ್ಕ್‌ಶಾಪ್‌ ಇಲ್ಲದೆ, 3 ವರ್ಷಗಳಿಂದ ಹೆಜಮಾಡಿಯಲ್ಲಿ ಇದರ ತಯಾರಿ ನಡೆದಿದೆ. ಈವರೆಗೆ ಮನೆಯವರು ಮತ್ತು ನೆರೆಹೊರೆಯವರಿಂದ ಸಾಲ ಮಾಡಿ  7 ಲ.ರೂ. ವೆಚ್ಚ ಮಾಡಲಾಗಿದೆ. ಇದಕ್ಕೆ ಬೇಕಾದ ಅವಶ್ಯ ಕೆಲವು ಸಾಮಗ್ರಿಗಳನ್ನು ಮಾತ್ರ ವಿದೇಶದಿಂದ ತರಿಸಿಕೊಳ್ಳಲಾಗಿದೆ. ಸುಮಾರು 180 ಕೆಜಿ ತೂಕವಿರುವ ಈ ಸೀಪ್ಲೇನ್‌ 5 ಮೀ. ಉದ್ದವಿದ್ದು, ಇದರ ರೆಕ್ಕೆ 5 ಅಡಿ ಉದ್ದವಿದೆ. ಇದಕ್ಕೆ ಇಂಧನವಾಗಿ ಪೆಟ್ರೋಲ್‌ ಬಳಸಲಾಗುತ್ತದೆ. ತಂಡ ಈವರೆಗೆ ಪೇಟೆಂಟ್‌ಗೆ ಮಾಡಿಲ್ಲ. 200 ಕೆ.ಜಿ. ಮೇಲ್ಪಟ್ಟ ಸೀಪ್ಲೇನ್‌, ಸ್ಪೀಡ್‌ಬೋಟ್‌ ಮತ್ತು ಎಲೆಕ್ಟ್ರಿಕ್‌ ಮಾದರಿಯ ತಯಾರಿಕೆಗೆ ಉತ್ಸಾಹ ಹೊಂದಿದ್ದು ಆಗ ಪೇಟೆಂಟ್‌, ಲೈಸೆನ್ಸ್‌ಗಳಿಗೆ ಪ್ರಯತ್ನಿಸುವುದಾಗಿ ತಂಡ ಹೇಳಿಕೊಂಡಿದೆ.

ಟಾಪ್ ನ್ಯೂಸ್

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.