ಬಜೆಟ್ ಅಧಿವೇಶನ ಹಿನ್ನೆಲೆ : ಬಿಜೆಪಿ ಕೋರ್ ಕಟಿಮಿ ಸಭೆ ಮುಂದೂಡಿಕೆ
Team Udayavani, Mar 4, 2021, 12:03 AM IST
ಬೆಂಗಳೂರು: ಇಂದು ಮತ್ತು ನಾಳೆ ಕಲಬುರ್ಗಿಯಲ್ಲಿ ನಡೆಯಬೇಕಿದ್ದ ಬಿಜೆಪಿ ಕೋರ್ ಕಮಿಟಿ ಸಭೆ ಹಾಗೂ ಪಕ್ಷದ ಪದಾಧಿಕಾರಿಗಳ ಸಭೆ ಮುಂದೂಡಿಕೆಯಾಗಿದೆ.
ಗುರುವಾರದಿಂದ ಬಜೆಟ್ ಅಧಿವೇಶನ ಆರಂಭವಾಗುತ್ತಿರುವುದರಿಂದ ಕೋರ್ ಕಮಿಟಿ ಪ್ರಮುಖ ನಾಯಕರು ಸಭೆಗೆ ಹಾಜರಾಗಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಕೋರ್ ಕಮಿಟಿ ಸಭೆಯನ್ನು ಮುಂದೂಡಲಾಗಿದ್ದು ಮಾರ್ಚ್ 13 ಮತ್ತು 14 ರಂದು ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಕೋರ್ ಕಮಿಟಿ ಸಭೆ ಮುಂದೂಡಿಕೆಯಾಗಿರುವುದರಿಂದ ರಾಜ್ಯ ಬಿಜೆಪಿ.ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿ ಮುಂದೂಡಿಕೆಯಾಗಿದೆ.