ನರೇಗಾದಡಿ ರೈತ ಸಂಪರ್ಕ ರಸ್ತೆ ನಿರ್ಮಿಸಿ
Team Udayavani, Mar 8, 2021, 5:26 PM IST
ಲಕ್ಷ್ಮೇಶ್ವರ: ಭಾರತ ಹಳ್ಳಿಗಳಿಂದ ಕೂಡಿದ ಕೃಷಿ ಪ್ರಧಾನ ದೇಶ. ಸರ್ಕಾರ ನರೇಗಾದಡಿ ರೈತ ಸಂಪರ್ಕ ರಸ್ತೆ, ಕೆರೆ, ಬಾಂದಾರ, ಬಾವಿಗಳ ನಿರ್ಮಾಣ ಮತ್ತು ಹೂಳು ತೆಗೆಸುವ ಕಾರ್ಯ ಮಾಡಿಸಬೇಕೆಂದು ರೈತ ಮುಖಂಡ ಸೋಮೇಶ ಉಪನಾಳ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿ ವರ್ಷ ಜಮೀನುಗಳಲ್ಲಿ ಬದುವುನಿರ್ಮಿಸುವುದಕ್ಕೆ ಹೆಚ್ಚು ಒತ್ತು ನೀಡಿದರೂ ಪ್ರತಿ ವರ್ಷದ ಮಳೆಗಾಲಕ್ಕೆಬದುವುಗಳು ಯಥಾಸ್ಥಿತಿಗೆ ಬರುತ್ತವೆ. ಗ್ರಾಮೀಣ ಭಾಗದ ರೈತರ ಅಗತ್ಯವಾದರಸ್ತೆ ಅಭಿವೃದ್ಧಿಯಾಗಿದೆ. ಆದ್ದರಿಂದ, ನರೇಗಾದಡಿ ನಮ್ಮ ಜಮೀನು ನಮ್ಮ ರಸ್ತೆ ಎಂಬ ಹೊಸ ಯೋಜನೆ ಮೂಲಕ ಸದ್ಯಕ್ಕೆ ಇರುವ ಕಾಲ್ದಾರಿ, ಚಕ್ಕಡಿ ದಾರಿ, ಸರ್ಕಾರಿ ದಾರಿಗಳನ್ನು ಕನಿಷ್ಠ 5 ಮೀಟರ್ಗಳಿಗೆ ವಿಸ್ತರಿಸಬೇಕು. ನರೇಗಾ ಜಾಬ್ಕಾರ್ಡ್ ಹೊಂದಿರುವ ಪುರುಷ ಮತ್ತು ಮಹಿಳಾ ಕೃಷಿ ಕಾರ್ಮಿಕರಿಂದಲೇ ರಸ್ತೆಯ ಎರಡು ಬದಿ ಕಚ್ಚಾ ಗಟಾರು ನಿರ್ಮಿಸಿಇಕ್ಕೆಲಗಳಲ್ಲಿ ಸಸಿ ನೆಟ್ಟರೆ ನೆರಳಿನ ಜತೆಗೆ ಮಣ್ಣಿನ ಸವಕಳಿ ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.
ರೈತರ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿಸಿದರೆ ಕೈಗೆ ಬಂದಫಸಲನ್ನು ಸಕಾಲಿಕವಾಗಿ ಮಾರುಕಟ್ಟೆಗೆ ಮತ್ತು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ನೆರವಾಗುತ್ತದೆ. ಆದ್ದರಿಂದ, ಸರ್ಕಾರಮತ್ತು ಅ ಧಿಕಾರಿಗಳು ಈ ನಿಟ್ಟಿನಲ್ಲಿಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.
ವಸತಿ ಸಚಿವರಿಗೆ ಚಿಂಚಲಿ ಗ್ರಾಪಂ ಸದಸ್ಯರ ಮನವಿ :
ಮುಳಗುಂದ: ಚಿಂಚಲಿ ಗ್ರಾಪಂ ವ್ಯಾಪ್ತಿಯ ಬಡವರಿಗೆ ವಸತಿ ಯೋಜನೆಗಳಡಿ ಸಹಾಯಧನ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಸದಸ್ಯರು ವಸತಿ ಸಚಿವ ವ್ಹಿ. ಸೋಮಣ್ಣ ಅವರಿಗೆಬೆಂಗಳೂರಿನ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಸಮೀಪದ ಚಿಂಚಲಿ ಗ್ರಾಪಂ ವ್ಯಾಪ್ತಿಯ ಚಿಂಚಲಿ, ಕಲ್ಲೂರ, ನೀಲಗುಂದ ಗ್ರಾಮಗಳಲ್ಲಿ ವಿವಿಧ ವಸತಿಯೋಜನೆಗಳಡಿ 2017 ರಿಂದ ಇಲ್ಲಿಯವರೆಗೆ ಶೇ.90 ಫಲಾನುಭವಿಗಳ ಸಹಾಯಧನ ಮಂಜೂರಾಗದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಬಡವರು ತೀವ್ರಕಷ್ಟ ಅನುಭವಿಸುತ್ತಿರುವ ಕಾರಣ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಯೋಜನೆ ಪೂರ್ಣಗೊಳಿಸಲು ಸೂಚಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ರಾಮರಡ್ಡಿ, ಚಂದ್ರಶೇಖರ ಹರಿಜನ, ಎಂ.ವೈ. ಸಂದಕದ, ನಿಂಗರಡ್ಡಿ ತೇರಿನಗಡ್ಡಿ, ಬಸವರಾಜ ಪೂಜಾರ, ಗೌರಮ್ಮ ಕರಿಗಾರ, ಶಕುಂತಲಾ ಕೆಂಬಾವಿಮಠ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ