ನಾಯಕಿಯ ಹುಡುಕಾಟದಲ್ಲಿ ‘ಕಥಾನಾಯಕ’
Team Udayavani, Mar 13, 2021, 12:16 PM IST
ಯಾವುದೇ ಚಿತ್ರದಲ್ಲಿ ಒಂದು ಕಥೆ ಇರುತ್ತದೆ. ಆ ಕಥೆಗೆ ಒಬ್ಬ “ಕಥಾ ನಾಯಕ’ ಇರುತ್ತಾನೆ. ಆ “ಕಥಾನಾಯಕ’ನ ಸುತ್ತ ಆ ಚಿತ್ರ ನಡೆಯುತ್ತದೆ. ಆ ಕಥೆಗೆ ಮತ್ತು “ಕಥಾ ನಾಯಕ’ನಿಗೆ ಒಂದು ಹೆಸರು ಇರುತ್ತದೆ. ಅಂಥ ಕಥೆ ಅಥವಾ ನಾಯಕನ ಹೆಸರನ್ನೇ ಸಾಮಾನ್ಯವಾಗಿ ಆ ಚಿತ್ರಕ್ಕೆ ಇಡುವುದನ್ನ ಚಿತ್ರರಂಗದಲ್ಲಿ ನೋಡಿರುತ್ತೀರಿ. ಆದರೆ ಇಲ್ಲೊಂದು ಚಿತ್ರತಂಡ, ತಮ್ಮ ಚಿತ್ರಕ್ಕೆ “ಕಥಾ ನಾಯಕ’ ಅಂತಲೇ ಹೆಸರಿಟ್ಟಿದೆ. ಅದಕ್ಕೆ ಕಾರಣ ಚಿತ್ರದ ಕಥೆಯೇ ಹಾಗಿದೆಯಂತೆ!
ಅಂದಹಾಗೆ, ನವ ನಿರ್ದೇಶಕ ವಿನಾಯಕ ಜ್ಯೋತಿ “ಕಥಾ ನಾಯಕ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ವಿನಾಯಕ ಜ್ಯೋತಿ, “ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ನಾಯಕಿಯ ಹುಟುಕಾಟದ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಸಿನಿಮಾದ ಕಥೆ ಮತ್ತು ನಿರೂಪಣೆ ಅನೇಕ ಟರ್ನ್, ಟ್ವಿಸ್ಟ್ಗಳನ್ನು ತೆಗೆದುಕೊಳ್ಳುತ್ತ ಸಾಗುತ್ತದೆ.
ಇದನ್ನೂ ಓದಿ:ಮುಂದಿನ ವಾರದಿಂದ ಶುರು “ಮುಂದುವರೆದ ಅಧ್ಯಾಯ”
ಸಿನಿಮಾದಲ್ಲಿ ಮೂವರು ನಾಯಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೊಂದು ಆಯಾಮದಲ್ಲಿ ಒಬ್ಬೊಬ್ಬರು ಕಥಾನಾಯಕನಾಗಿ ಕಾಣಿಸಿಕೊಳ್ಳುತ್ತಾರೆ. ನಿಜವಾದ ನಾಯಕ ಯಾರು ಅನ್ನೋದು ಸಿನಿಮಾದಲ್ಲೇ ನೋಡಬೇಕು’ ಎನ್ನುತ್ತಾರೆ.
ಈ ಚಿತ್ರದಲ್ಲಿ ಪ್ರವೀಣ್ ತೇಜ್, ಅರ್ಜುನ್ ಕಾಪಿಕಾಡ್, ಅಭಿಷೇಕ್, ಸಪ್ತಾ ಪಾವೂರ್, ಧನುಶ್ ಮೊದಲಾದವರು “ಕಥಾ ನಾಯಕ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ, “ಕಥಾ ನಾಯಕ’ ಚಿತ್ರದ ನಾಯಕಿಯ ಹೆಸರನ್ನು ಚಿತ್ರತಂಡ ಇನ್ನೂ ಬಹಿರಂಗಪಡಿಸಿಲ್ಲ. ಅದಕ್ಕೆ ಕಾರಣ ಇಡೀ ಚಿತ್ರದ ಕಥೆ ನಾಯಕಿಯ ಹುಡುಕಾಟದ ಸುತ್ತ ನಡೆಯುತ್ತಿರುವುದಂತೆ. ಹಾಗಾಗಿ ಚಿತ್ರದ ನಾಯಕಿಯ ಹೆಸರನ್ನು ತೆರೆಮೇಲೆ ರಿವೀಲ್ ಮಾಡಲಿದ್ದೇವೆ ಎನ್ನುತ್ತದೆ ಚಿತ್ರತಂಡ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಪ್ರೇಮ ಪುರಾಣ: ಸಪ್ತಸಾಗರದಾಚೆ ಇಂಟೆನ್ಸ್ ಲವ್ಸ್ಟೋರಿ!
“ಕಥಾ ನಾಯಕ’ ಚಿತ್ರದ ಹಾಡುಗಳಿಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಕಾರ್ತಿಕ್ ಎಸ್ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನವಿದೆ. ವಿಕ್ರಂ ಮೋರ್ ಸಾಹಸವಿದೆ. ಬೆಂಗಳೂರು, ದೆಹಲಿ ಸುತ್ತಮುತ್ತ ಸುಮಾರು 50ಕ್ಕೂ ಹೆಚ್ಚು ದಿನಗಳ ಕಾಲ “ಕಥಾ ನಾಯಕ’ ಚಿತ್ರದ ಶೂಟಿಂಗ್ಗೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. “ವಿನಾಯಕ ಜ್ಯೋತಿ ಚಲನಚಿತ್ರ’ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಜೇಗೌಡ, ಶ್ರೀನಾಥ್ ಸಹ ನಿರ್ಮಾಪಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ
Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ
ʼಸಲಾರ್ʼನ ʼಶಿವ್ ಮನ್ನಾರ್ʼಗೂ ʼಕೆಜಿಎಫ್ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್
Brazil Floods: ಪ್ರವಾಹಕ್ಕೆ ತತ್ತರಿಸಿದ ಬ್ರೆಜಿಲ್, ಸಾವಿನ ಸಂಖ್ಯೆ 90ಕ್ಕೆ ಏರಿಕೆ