ಮನ್ಸುಖ್, ವಾಜೆ ಆಗಾಗ ಭೇಟಿ!
Team Udayavani, Mar 20, 2021, 7:40 AM IST
ಮುಂಬಯಿ: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕವಿದ್ದ ಕಾರು ಪತ್ತೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹಾಗೂ ಇದೇ ಪ್ರಕರಣದಲ್ಲಿ ಅನುಮಾನಾಸ್ಪದ. ವಾಗಿ ಸಾವಿಗೀಡಾಗಿರುವ ಥಾಣೆಯ ಉದ್ಯಮಿ ಮನ್ಸುಖ್ ಹಿರನ್ ಅವರಿಬ್ಬರೂ ಈ ಹಿಂದೆ ಆಗಾಗ ಭೇಟಿಯಾಗುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಅಲ್ಲದೆ, ಮನ್ಸುಖ್ ಬಳಿಯಿದ್ದ ಸ್ಕಾರ್ಪಿಯೊ ಕಾರು ಕಳುವಾದ ದಿನ (ಫೆ. 17) ಅವರಿಬ್ಬರೂ ಈಗಾಗಲೇ ಎನ್ಐಎ ಜಪ್ತಿ ಮಾಡಿರುವ ವಾಜೆ ಯವರ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಭೇಟಿ ಯಾಗಿರುವುದು ಸಿಸಿಟಿವಿ ದೃಶ್ಯಾವಳಿಗ ಳಿಂದ ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಮತ್ತೂಂದೆಡೆ, ಶುಕ್ರವಾರದಂದು ವಿಧಿವಿಜ್ಞಾನ ಪ್ರಯೋಗಾಲದ ತಜ್ಞರು, ಎಸ್ಐಟಿ ಜಪ್ತಿ ಮಾಡಿರುವ ವಾಜೆಯವರ ಐಶಾರಾಮಿ ಕಾರುಗಳ ತಪಾಸಣೆ ನಡೆಸಿದೆ.
ನೀರಿಗೆ ಎಸೆಯಲಾಗಿತ್ತೇ?: ಮನ್ಸುಖ್ ಮೃತ ದೇಹದ ಡಯಾಟಮ್ ಪರೀಕ್ಷೆಯಲ್ಲಿ ಅವರ ಶ್ವಾಸಕೋಶದಲ್ಲಿ ನೀರಿನ ಪಾಚಿಯ ಚೂರು ಗಳು ಪತ್ತೆಯಾಗಿದ್ದು, ಅವರು ಸಾಯುವ ಮುನ್ನ ಅವರನ್ನು ಥಳಿಸಿ, ನೀರಿಗೆ ತಳ್ಳಲಾಗಿತ್ತೇ ಎಂದು ಅನುಮಾನ ಎದ್ದಿದೆ. ಹಾಗಾಗಿ, ಡಯಾಟಮ್ ವರದಿಯನ್ನು ಹರ್ಯಾಣದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಮಹಾರಾಷ್ಟ್ರ ಎಟಿಎಸ್ ನಿರ್ಧರಿಸಿದೆ.
ಇದನ್ನೂ ಓದಿ:ಉಪ ಚುನಾವಣೆ ಅಭ್ಯರ್ಥಿಗಳ ಕುರಿತು ನಾಳೆ ಚರ್ಚೆ : ಅರುಣ್ ಸಿಂಗ್
ಕಮೀಷನರ್ ಭೇಟಿ: ಮುಂಬಯಿ ನೂತನ ಪೊಲೀಸ್ ಕಮೀಷನರ್ ಆದ ಹೇಮಂತ್ ನಗ್ರಾಲೆ ಅವರನ್ನು ಎನ್ಐಎ ಅಧಿಕಾರಿಗಳಾದ ಅನಿಲ್ ಶುಕ್ಲಾ, ವಿಕ್ರಮ್ ಖಲಾಟೆ ಭೇಟಿಯಾಗಿ ಅಂಬಾನಿ ಪ್ರಕರಣ ಕುರಿತಂತೆ ಮಾತುಕತೆ ನಡೆಸಿದರು.
ಶಿವಸೇನೆ ಪ್ರಶ್ನೆ: ಅಂಬಾನಿ ಪ್ರಕರಣವನ್ನು ಎನ್ಐಎ ತನಿಖೆ ಮಾಡುತ್ತಿರುವ ಬಗ್ಗೆ ಶಿವಸೇನೆ, ತನ್ನ ಮುಖವಾಣಿ “ಸಾಮ್ನಾ’ದಲ್ಲಿ ಟೀಕಿಸಿದೆ. ಮುಂಬಯಿ ಎಟಿಎಸ್ ತನಿಖೆ ನಡೆಸುತ್ತಿದ್ದರೂ, ಎನ್ಐಎ ಕೂಡ ಈ ಪ್ರಕರಣದ ತನಿಖೆ ನಡೆಸಲಾರಂಭಿಸಿತು. ಇದರ ಹಿಂದಿನ ಉದ್ದೇಶ ಸದ್ಯದಲ್ಲೇ ಹೊರಬರಲಿದೆ. ಉರಿ, ಪುಲ್ವಾಮಾ, ಪಠಾಣ್ಕೋಟ್ಗಳಲ್ಲಿ ಸಿಕ್ಕಿದ್ದ ಜಿಲೆಟಿನ್ ಕಡ್ಡಿಗಳ ಬಗ್ಗೆ ಎನ್ಐಎ ಯಾವ ಸತ್ಯ ಬಹಿರಂಗಗೊಳಿಸಿದೆ, ಯಾರನ್ನು ಬಂಧಿಸಿದೆ ಎಂಬು ದನ್ನು ಅದು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
MUST WATCH
ಹೊಸ ಸೇರ್ಪಡೆ
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
Mangaluru ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿನ್ನು ಮೌನ! ಇಲ್ಲಿದೆ ಕಾರಣ
ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಮಹಿಳಾ ಕಾಂಗ್ರೆಸ್ ಘಟಕ ಆಗ್ರಹ
ಉತ್ತರದವರು ಸಿಎಂ ಆಗಲು ಬಿಜೆಪಿ ಗೆಲ್ಲಿಸಿ; ಬಸನಗೌಡ ಪಾಟೀಲ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ