ಧಾರವಾಡ ಕೃಷಿ ವಿವಿ ಇನ್ನು ಸ್ಮಾರ್ಟ್‌!


Team Udayavani, Mar 22, 2021, 3:43 PM IST

ಧಾರವಾಡ ಕೃಷಿ ವಿವಿ ಇನ್ನು ಸ್ಮಾರ್ಟ್‌!

ಧಾರವಾಡ: ಮಣ್ಣಿನ ಗುಣಕ್ಕೆ ತಕ್ಕ ಬೀಜದ ಆಯ್ಕೆ,ಬೀಜದ ಗುಣಕ್ಕೆ ತಕ್ಕ ವಾತಾವರಣ ಸೃಷ್ಟಿ, ಬೆಳೆಗೆಬೇಕಾದ ರಸಗೊಬ್ಬರ, ಬೆಳೆ ಬೆಳೆಯುವ ಪ್ರತಿಯೊಂದುಕ್ಷಣವನ್ನೂ ದಾಖಲಿಸುವ ತಂತ್ರಜ್ಞಾನ,ಬೆಳೆ ರೋಗಗಳ ಬಗ್ಗೆ ಹದ್ದಿನ ಕಣ್ಣಿಡುವ ವ್ಯವಸ್ಥೆ…

ಹೀಗೆ ಕೃಷಿಯ ಪ್ರತಿಯೊಂದುಅಂಶವೂ ಹೈಟೆಕ್‌ ತಾಂತ್ರಿಕತೆಯ ತೊಟ್ಟಿಲಲ್ಲಿಯೇ ಸೃಷ್ಟಿಯಾದರೆ ಖಂಡಿತಾ ಸ್ಮಾರ್ಟ್‌ ಆಗಿರುತ್ತದೆ.ದೇಶದ ಅತ್ಯುನ್ನತ ಹತ್ತುವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವಧಾರವಾಡದ ಕೃಷಿ ವಿವಿ ಇದೀಗ ಇಡೀ ಕ್ಯಾಂಪಸ್‌ ಸ್ಮಾರ್ಟ್‌ ಮಾಡಲು ಹೊರಟಿದೆ.

ವಿದೇಶಿ ನೆಲದಲ್ಲಿ ಅತ್ಯಾಧುನಿಕವಾಗಿ ಬೆಳೆಯುತ್ತಲೇ ನಡೆದಿರುವ ಕೃಷಿ ತಂತ್ರಜ್ಞಾನಗಳಿಗೆ ಸರಿಸಮವಾಗಿತನ್ನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದಕ್ಕಾಗಿವಿನೂತನವಾದ, ಸ್ಮಾರ್ಟ್‌ ತಂತ್ರಾಧಾರಿತವಾಗಿನಡೆಯುವ ಯೋಜನೆಯೊಂದನ್ನು ಸಿದ್ಧಪಡಿಸಿರುವಧಾರವಾಡ ಕೃಷಿ ವಿವಿ ಸ್ಮಾರ್ಟ್‌ ಕ್ಯಾಂಪಸ್‌ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕಳೆದ ಹತ್ತು ವರ್ಷಗಳಲ್ಲಿ ತೀವ್ರಗತಿಯಲ್ಲಿದೇಶ-ವಿದೇಶಗಳಲ್ಲಿ ಬೆಳೆಯುತ್ತಿರುವ ಅತ್ಯಾಧುನಿಕ ಕೃಷಿ ಕಂಪನಿಗಳಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭಿಸುತ್ತಿವೆ. ಆದರೆಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳ ವೇಗಕ್ಕೆ ತಕ್ಕಂತೆಇಲ್ಲಿನ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ದೊಡ್ಡಸವಾಲಾಗುತ್ತಿದೆ. ಹೀಗಾಗಿ ಓದುವ ಹಂತದಲ್ಲಿಯೇಕೃಷಿ ವಿದ್ಯಾರ್ಥಿಗಳಿಗೆ ಮತ್ತು ಅವರು ಕೈಗೊಳ್ಳುವಸಂಶೋಧನೆಗಳಿಗೆ ಅನ್ವಯವಾಗುವಂತೆ ಹೈಟೆಕ್‌ತಂತ್ರಜ್ಞಾನ ಬಳಸುವುದಕ್ಕೆ ಸ್ಮಾರ್ಟ್‌ ಕ್ಯಾಂಪಸ್‌ ಸಹಾಯಕವಾಗಲಿದೆ.

ದೇಶದಲ್ಲೇ ಮೊದಲ ಪ್ರಯತ್ನ: ಈಗಾಗಲೇ ಧಾರವಾಡದ ಕೃಷಿ ವಿವಿ 22,210 ಕ್ವಿಂಟಲ್‌ನಷ್ಟು ಉತ್ತಮ ತಳಿ ಬೀಜಗಳನ್ನು ಉತ್ಪಾದಿಸಿ ಸೈ ಎನಿಸಿಕೊಂಡಿದೆ.ಕಳೆದ ಎರಡು ವರ್ಷದಲ್ಲಿ ತಳಿ ಅಭಿವೃದ್ಧಿ, ಅರಣ್ಯ ಬೆಳೆಸುವುದು, ಸಂಶೋಧನೆ ಕ್ಷೇತ್ರ ಹಾಗೂ ಕೃಷಿನವೋದ್ಯಮದಲ್ಲೂ ಅತ್ಯಂತ ಮುಂಚೂಣಿಯಲ್ಲಿ ನಿಂತಿದ್ದು, ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಬಾಚಿಕೊಂಡಿದೆ. ಇದೀಗ ಇದರ ಮುಂದುವರಿದ ಭಾಗ ಎನ್ನುವಂತೆ ಹೈಟೆಕ್‌ ಸ್ಮಾರ್ಟ್‌ ಕ್ಯಾಂಪಸ್‌ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡು ಸರ್ಕಾರಕ್ಕೆ 52 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ.

ಕೃಷಿಯಲ್ಲಿ ವಿಶ್ವದ ಇತರೆ ಹೈಟೆಕ್‌ವಿಶ್ವವಿದ್ಯಾಲಯಗಳು ಬಳಸಿಕೊಳ್ಳುತ್ತಿರುವ ಅತ್ಯಾಧುನಿಕತಂತ್ರಜ್ಞಾನ ಬಳಸಿಕೊಳ್ಳಲು ಇಲ್ಲಿಯೂ ಸಾಧ್ಯವಿದ್ದು,ಅದರ ಮಾದರಿ ಪ್ರಯೋಗ ಇಲ್ಲಿ ಮಾಡಬಹುದು ಎನ್ನುವುದನ್ನು ಕೃಷಿ ವಿವಿ ಪ್ರಸ್ತಾವನೆಯಲ್ಲಿ ವಿವರಣೆ ನೀಡಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ಅನುದಾನದಲ್ಲಿಸ್ಮಾರ್ಟ್‌ ಕ್ಯಾಂಪಸ್‌ಗೆ ಅನುಕೂಲ ಮಾಡಿಕೊಡುವಂತೆ ಕೋರಲಾಗಿದೆ.

ಏನಿದು ಸ್ಮಾರ್ಟ್‌ ಕ್ಯಾಂಪಸ್‌? :ಸ್ಮಾರ್ಟ್‌ ಕ್ಯಾಂಪಸ್‌ ಎಂದರೆ ಎಲ್ಲವೂ ಹೈಟೆಕ್‌ಆಗಿ ಪರಿವರ್ತನೆಯಾಗುವುದು. ಬೋಧನೆ,ಕಲಿಕೆ, ಸಂಶೋಧನೆ, ಆವಿಷ್ಕಾರಗಳು,ಪ್ರಯೋಗಶೀಲತೆಯ ಮಜಲುಗಳು.ವಿದ್ಯಾರ್ಥಿಗಳಿಗೆ ವಿಭಿನ್ನ ತರಬೇತಿ, ತರಬೇತಿನೀಡುವ ವಿಧಾನಗಳು, ಬಳಸುವಯಂತ್ರೋಪಕರಣಗಳು ಸಹ ಹೈಟೆಕ್‌ಸ್ವರೂಪದಲ್ಲಿರುತ್ತವೆ. ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಮತ್ತು ತಳಿ ಅಭಿವೃದ್ಧಿಯಂತಹಪ್ರಯೋಗಗಳು ಪ್ರಯೋಗಾಲಯದಲ್ಲೇ ನಡೆದುಹೋಗುತ್ತವೆ. ಇನ್ನಷ್ಟು ಹೈಟೆಕ್‌ ಉಪಕರಣಗಳುಬರಲಿದ್ದು, ನಿಖರ ಮಾಹಿತಿ ಮತ್ತು ಸಂಶೋಧನೆಗೆಪೂರಕವಾಗಲಿವೆ. ಇನ್ನು ವಿದ್ಯಾರ್ಥಿಗಳುಕೃಷಿ ವಿವಿ ಕ್ಯಾಂಪಸ್‌ಗೆ ಬಂದ ದಿನದಿಂದ ಇಲ್ಲಿ ಪದವಿ ಅಥವಾ ಸಂಶೋಧನೆ ಮುಗಿಸಿ ಹೊರಗೆ ಹೋಗುವ ದಿನದವರೆಗಿನ ಅವರ ಪ್ರತಿಯೊಂದು ಕಾರ್ಯ ಚಟುವಟಿಕೆಗಳು ದಾಖಲಾಗುತ್ತವೆ. ಅವರ ಎಲ್ಲಾ ವ್ಯವಹಾರಗಳು ಆನ್‌ಲೈನ್‌ ಮೂಲಕವೇ ನಡೆಯುತ್ತವೆ. ಅವರು ಬ್ಯಾಂಕಿಗೆಹೋಗಿ ಹಣ ಕಟ್ಟಬೇಕಿಲ್ಲ. ತಮ್ಮ ಮೊಬೈಲ್‌ಮೂಲಕವೇ ವಿವಿಯ ಎಲ್ಲ ವ್ಯವಹಾರಮಾಡಬಹುದು. ಇಂತಹ ಹತ್ತಾರು ವಿಚಾರಗಳು ಸ್ಮಾರ್ಟ್‌ ಕ್ಯಾಂಪಸ್‌ ಯೋಜನೆಯಡಿ ಬರಲಿವೆ.

ಕೋವಿಡ್ ದಿಂದ ಹಿನ್ನಡೆ  : ಕಳೆದೊಂದು ವರ್ಷದಿಂದ ಕೋವಿಡ್ ಲಾಕ್‌ಡೌನ್‌ನಿಂದ ಕೃಷಿ ವಿವಿಯ ಅನೇಕ ಚಟುವಟಿಕೆಗಳಿಗೆ ಕೊಂಚಹಿನ್ನಡೆಯುಂಟಾಗಿದೆ. ವಿಶ್ವಮಟ್ಟದ ಕೃಷಿ ಅಧ್ಯಯನ ನಡೆಸಲು 120 ವಿದ್ಯಾರ್ಥಿಗಳು ವಿದೇಶ ಪ್ರಯಾಣ ಕೈಗೊಳ್ಳಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣ ಅವರೆಲ್ಲಕಾಯುತ್ತಲೇ ಕುಳಿತಿದ್ದಾರೆ. ಅದರಂತೆಯೇ ಕೃಷಿ ವಿವಿಹತ್ತಾರು ಅಂತಾರಾಷ್ಟ್ರೀಯ ವಿವಿ ಜತೆ ಸಂಶೋಧನೆ, ತಂತ್ರಜ್ಞಾನ ಮತ್ತು ತಳಿಗಳ ಅಭಿವೃದ್ಧಿ ಸೇರಿದಂತೆ ಅನೇಕಒಡಂಬಡಿಕೆ ಮಾಡಿಕೊಂಡಿದ್ದು, ಆ ಯೋಜನೆಗಳ ಬೆಳವಣಿಗೆಗೂ ಕೊಂಚ ಹಿನ್ನಡೆಯಾಗಿದೆ.ಘಿ

ಧಾರವಾಡ ಕೃಷಿ ವಿವಿ ಈಗಾಗಲೇ ದೇಶದ ಅತ್ಯುನ್ನತ 10 ವಿವಿಗಳಪಟ್ಟಿಯಲ್ಲಿ ಸ್ಥಾನ ಪಡೆದಿದೆ.ಅಂತಾರಾಷ್ಟ್ರೀಯ ಮತ್ತು ಖಾಸಗಿಕೃಷಿ ಕಂಪನಿಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ಗಳಿದ್ದು,ಅದಕ್ಕೆ ವಿದ್ಯಾರ್ಥಿಗಳನ್ನುಸಜ್ಜುಗೊಳಿಸಬೇಕಿದೆ. ಹೀಗಾಗಿ ಸ್ಮಾರ್ಟ್‌ ಕ್ಯಾಂಪಸ್‌ ಗಾಗಿ ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಿದ್ದೇವೆ. ಯೋಜನೆಆರಂಭಗೊಂಡು ಎರಡು ವರ್ಷದಲ್ಲಿ ಕ್ಯಾಂಪಸ್‌ಸಂಪೂರ್ಣ ಸ್ಮಾರ್ಟ್‌ ಆಗಲಿದೆ. – ಡಾ| ಎಂ.ಬಿ. ಚೆಟ್ಟಿ, ಧಾರವಾಡ ಕೃಷಿ ವಿವಿ ಕುಲಪತಿ

 

-ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.