ಇಸ್ರೇಲ್ ಕನಸು ತೋರಿಸಿ ಲಕ್ಷ ಲಕ್ಷ ವಂಚನೆ
Team Udayavani, Mar 27, 2021, 3:16 PM IST
ಹುಬ್ಬಳ್ಳಿ: ನಗರದ ಮಹಿಳೆಯೊಬ್ಬರಿಗೆ ತಮಿಳುನಾಡು ಮೂಲದವ ಹಾಗೂ ಸ್ಥಳೀಯ ಮಹಿಳೆ ಸೇರಿ ಇಸ್ರೇಲ್ನಲ್ಲಿ ನರ್ಸ್ ಕೆಲಸ ಕೊಡಿಸುವುದಾಗಿ ನಂಬಿಸಿ, ಖೊಟ್ಟಿ ದಾಖಲೆ ಸೃಷ್ಟಿಸಿ 5.73 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ತಮಿಳುನಾಡು ಥೇನಿ ಜಿಲ್ಲೆ ಕಂಬಮ್ನ ಸ್ಟಿಫನ್ ಉಥಯಕುಮಾರ ಹಾಗೂ ಇಲ್ಲಿನ ಕಾರವಾರ ರಸ್ತೆ ಮಂಗಳ ಓಣಿಯ ರೂಟ್ ಎ.ಡಿ. ವಂಚಿಸಿದ್ದಾರೆ ಎಂದು ಬಾಸೆಲ್ ಮಿಷನ್ ಹೊಸ ಓಣಿಯ ಸುಪ್ರಿಯಾ ಎಂಬುವರು ಉಪನಗರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ನರ್ಸ್ ಕೆಲಸ ಮಾಡಿಕೊಂಡಿದ್ದ ನನಗೆ 2019ರಲ್ಲಿ ರೂಟ್ ಅವರು ಸ್ಟಿಫನ್ನನ್ನು ಪರಿಚಯ ಮಾಡಿಕೊಟ್ಟು, ಇಸ್ರೇಲ್ನಲ್ಲಿ ನರ್ಸ್ ಕೆಲಸವಿದೆ ವಿಚಾರಿಸಿ ಎಂದಿದ್ದರು. ಅದರಂತೆ ಕೇಳಿದಾಗಖರ್ಚು ಬರುತ್ತದೆ ಎಂದು ಹಂತ ಹಂತವಾಗಿ ಸ್ಟಿಫನ್ ತನ್ನ ಖಾತೆಗೆ5.73 ಲಕ್ಷ ರೂ. ವರ್ಗಾಯಿಸಿಕೊಂಡು, ನಕಲಿ ದಾಖಲೆ ಸೃಷ್ಟಿಸಿ ಮೊಬೈಲ್ ಫೋನ್ಗೆ ಇ-ಮೇಲ್ ಮತ್ತು ವಾಟ್ಸ್ಆ್ಯಪ್ ಮೂಲಕ ಕಳುಹಿಸಿದ್ದಾರೆ. ಜೊತೆಗೆ ಮೂಲ ಪಾಸ್ಪೋರ್ಟ್ ಇಟ್ಟುಕೊಂಡು ವಂಚಿಸಿದ್ದಾರೆ ಎಂದು ಸುಪ್ರಿಯಾ ದೂರು ಕೊಟ್ಟಿದ್ದಾರೆ. ಉಪನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
………………………………………………………………………………………………………………………………………………………
1.61 ಲಕ್ಷ ರೂ. ಮೌಲ್ಯದ 23 ಕುರಿಗಳ ಕಳವು :
ಹುಬ್ಬಳ್ಳಿ; ಕರಡಿಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿ ಸಾಕಾಣಿಕೆ ಮಾಡುತ್ತಿದ್ದ ಶೆಡ್ನಲ್ಲಿ ಅಂದಾಜು 1.61 ಲಕ್ಷ ರೂ.ಮೌಲ್ಯದ 23 ಕುರಿಗಳು ಕಳ್ಳತನವಾಗಿವೆ. ಚನ್ನಬಸಪ್ಪ ಬಿ. ಬೆನಕನ್ನವರ ಎಂಬುವರು ತಮ್ಮ ಜಮೀನಿನಲ್ಲಿ ಕುರಿ ಸಾಕಾಣಿಕೆ ಮಾಡುತ್ತಿದ್ದರು.ಕಳ್ಳರು ಮಾ. 20ರಂದು ತಡರಾತ್ರಿ ಶೆಡ್ಡಿನ ತಂತಿ ಜಾಳಿಗೆ ಕತ್ತರಿಸಿ,ಶೆಡ್ದೊಳಗಿನ ಕೌಂಟರ್ದಲ್ಲಿದ್ದ 23 ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ