ಕ್ಷೇತ್ರ ಮರುವಿಂಗಡಣೆಗೆ ಭುಗಿಲೆದ್ದ ಆಕ್ರೋಶ

ಚಿಂಚನಸೂರ ಮಾತ್ರ ತಾಲೂಕಿನ ನರೋಣಾ ವಲಯಕ್ಕೆ ಉಳಿದುಕೊಂಡ ಸಂತಸವಿದೆ

Team Udayavani, Mar 29, 2021, 6:27 PM IST

ಕ್ಷೇತ್ರ ಮರುವಿಂಗಡಣೆಗೆ ಭುಗಿಲೆದ್ದ ಆಕ್ರೋಶ

ಆಳಂದ: ಜಿಲ್ಲೆಯ ರಾಜಕೀಯ ವಲಯದಲ್ಲಿ ಗಮನಿಸಿದರೆ ಎಲ್ಲದರಲ್ಲೂ ತಾಲೂಕು ಮುಂಚೂಣಿಯಲ್ಲಿದೆ. ಆದರೆ ದಿನ ಕಳೆದಂತೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಚುನಾವಣೆಯಲ್ಲಿ ಜಾತಿ, ಧರ್ಮ, ಹಣಬಲ ತೋಳ್ಬಲದ ಲೆಕ್ಕಾಚಾರದಿಂದಾಗಿ ಅಭಿವೃದ್ಧಿಯಲ್ಲಿ ಏರಿಳಿತವೂ ಕಂಡಿದೆ. ಈಗ ಹೊಸದಾಗಿ ಕ್ಷೇತ್ರಗಳ ಮರು ವಿಂಗಡಣೆಯಿಂದ ಜನರ ಆಕ್ರೋಶ ಭುಗಿಲೆದ್ದಿದೆ.

ಮಾಜಿ ಶಾಸಕ ಬಿ.ಆರ್‌. ಪಾಟೀಲ ಅವರ ಸರಸಂಬಾ ಗ್ರಾಮಕ್ಕಿದ್ದ ಜಿಪಂ ಕ್ಷೇತ್ರ ಹಿರೋಳಿಗೆ ವರ್ಗವಾಗುತ್ತಿದ್ದರೆ, ಮತ್ತೂಂದೆಡೆ ಪ್ರಸಿದ್ಧ ನವಕಲ್ಯಾಣ ಮಠ ಹೊಂದಿದ್ದ ಜಿಡಗಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಸ್ಥಳೀಯರು ಮುಂದಾಗಿದ್ದಾರೆ. ಇಷ್ಟಾಗಿಯೂ ಸರ್ಕಾರದಿಂದ ಅಧಿಕೃತವಾಗಿ ಕ್ಷೇತ್ರಗಳ ವಿಂಗಡಣೆ ಪಟ್ಟಿ ಹೊರಬೀಳಬೇಕಿದೆ. ಸದ್ಯ ಮೇಲ್ನೋಟಕ್ಕೆ ಅನಧಿಕೃತ ಪಟ್ಟಿ ಆಧಾರದ ಮೇಲೆ ಜನರ ಆಕ್ರೋಶವೂ ಇದೆ.

ಈ ಮೊದಲು ಏಳು ಜಿಪಂ ಸ್ಥಾನ ಖಜೂರಿ, ನಿಂಬರಗಾ, ಮಾದನಹಿಪ್ಪರಗಾ, ತಡಕಲ್‌ ಹಾಗೂ ಸದ್ಯ ಕ್ಷೇತ್ರಗಳ ಮರು ವಿಂಗಡಣೆಯಿಂದ ಚಿಂಚನಸೂರ ಬದಲು ನರೋಣಾ, ಸರಸಂಬಾ ಬದಲು ಹಿರೋಳಿ, ಜಿಡಗಾ ಬದಲು ಭೂಸನೂರ, ಹೊಸದಾಗಿ ರಚನೆಯಾದ ಮಾಡಿಯಾಳ ಜಿಪಂ ಕ್ಷೇತ್ರ ಸೇರಿ ಎಂಟು ಕ್ಷೇತ್ರಗಳಾಗಿವೆ. ಒಟ್ಟು 30 ತಾಪಂ ಕ್ಷೇತ್ರಗಳ ಪೈಕಿ ವಿಭಜಿತ ಕಮಲಾಪುರ ತಾಲೂಕಿಗೆ ಮೂರು ತಾಪಂ ಕ್ಷೇತ್ರಗಳ ವರ್ಗಾಯಿಸಿದ ಮೇಲೆ ಉಳಿದ 27 ತಾಪಂ ಕ್ಷೇತ್ರಗಳಲ್ಲಿ ಗ್ರಾಮಗಳ ಮರುವಿಂಗಣೆ ಕಾರ್ಯದಿಂದಾಗಿ 27 ತಾಪಂ ಕ್ಷೇತ್ರ ಸದ್ಯಕ್ಕೆ 22 ಸ್ಥಾನಕ್ಕೆ ನಿಂತುಕೊಂಡಿದೆ.

ಜಿಪಂ ಕ್ಷೇತ್ರಗಳ ಬದಲಾವಣೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 12 ಸಾವಿರ ಜನಸಂಖ್ಯೆ ಗ್ರಾಪಂ ಕೇಂದ್ರ ಸ್ಥಾನ ಹೊಂದಿರುವ ಚಿಂಚನಸೂರ ತಾಲೂಕಿನ ಗಡಿಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿ ತಾಪಂ ಕ್ಷೇತ್ರ ಹೊಂದಿದೆ. ಸಪ್ತ ಖಾತೆ ಹೊಂದಿದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಮೂಲತಃ ಚಿಂಚನಸೂರ ಗ್ರಾಮದವರು. ಅಲ್ಲದೇ, ತಾಲೂಕು ಕೇಂದ್ರದಿಂದ ಆಳಂದ ಪಟ್ಟಣದಿಂದ 35 ಕಿ.ಮೀ. ಜಿಲ್ಲಾ ಕೇಂದ್ರ ಕಲಬುರಗಿಯಿಂದ 20 ಕಿ.ಮೀ ಚಿಂಚನಸೂರ ಅಂತರದಲ್ಲಿದೆ. ಈ ಗ್ರಾಮವೂ ನೆರೆಯ ಬೀದರ ಜಿಲ್ಲೆಯ ಬಸವ ಕಲ್ಯಾಣ ಹಾಗೂ ಕಲಬುರಗಿಗೆ ನೇರ ಮತ್ತು ಆಂತರಿಕ ಸಮೀಪದ ರಸ್ತೆ ಸಂಪರ್ಕವೂ ಕಲ್ಪಿಸಿದ ಖ್ಯಾತಿ ಹೊಂದಿದೆ.

ಧಾರ್ಮಿಕವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲೇ ತೀವ್ರ ಗಮನ ಸೆಳೆದ ಚಿಂಚನಸೂರ ಮಹಾಪೂರ ತಾಯಿ ಜಾತ್ರೆ ಪ್ರತಿವರ್ಷ ಜೋರಾಗಿ ನಡೆಯುತ್ತದೆ. ಆದರೆ ರಾಜಕೀಯವಾಗಿ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ ಕ್ಷೇತವೂ ಆಗಿದೆ. ಹಠಾತ್‌ ಆಗಿ ಚಿಂಚನಸೂರ ಜಿಪಂ ಕ್ಷೇತ್ರ ಬೇರೆಡೆ ವರ್ಗಾವಣೆಗೊಂಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಹೊಸದಾಗಿ ಕಮಲಾಪುರ ತಾಲೂಕು ರಚನೆಯಾದ ಮೇಲೆ ಆಳಂದ ತಾಲೂಕಿನ ನರೋಣಾ ಹೋಬಳಿ ವಲಯದ 11 ಗ್ರಾಪಂಗಳಲ್ಲಿ 6 ಉಳಿದು ಇನ್ನುಳಿದ ಶ್ರೀಚಂದ, ವಿ.ಕೆ.ಸಲಗರ, ಲಾಡಮುಗಳಿ, ಮುದ್ದಡಗಾ, ಅಂಬಲಗಾ ಈ ಐದು ಗ್ರಾಪಂಗಳು ಮತ್ತು ವಿ.ಕೆ. ಸಲಗರ, ಮಡಕಿ, ಅಂಬಲಗಾ ಈ ಮೂರು ತಾಲೂಕು ಪಂಚಾಯಿತಿ ಕ್ಷೇತ್ರ ಹಂಚಿಹೋಗಿವೆ. ಅಲ್ಲದೆ, ಒಟ್ಟು ನಾಲ್ಕು ತಾಂಡಾಳಾದ ವಿ.ಕೆ. ಸಲಗರ ತಾಂಡಾ, ಲಾಡಮುಗಳಿ ತಾಂಡಾ, ಮಡಕಿ ತಾಂಡಾ, ಅಂಬಲಗಾ ತಾಂಡಾ ಹಾಗೂ 20 ಗ್ರಾಮಗಳಾದ ಶ್ರೀಚಂದ್‌, ಹೊಡಲ, ಜವಳ ಬಿ, ಕೊಟ್ಟರಗಿ, ಮಳ್ಳಪ್ಪನವಾಡಿ, ಅಫಚಂದ, ಮುದ್ದಡಗಾ, ಮಡಕಿ, ಮುರಡಿ, ವಿ.ಕೆ.
ಸಲಗರ, ಲಾಡಮುಗಳಿ, ಲೆಂಗಟಿ, ಅಂಬಲಗಾ, ಕುದಮುಡ, ಕಲಕುಟಗಿ ಗ್ರಾಮಗಳು ಹಂಚಿಹೋಗಿವೆ. ಆದರೆ ದಾಖಲಾರ್ಹ ಎನ್ನುವಂತೆ ಜಿಪಂ ಕ್ಷೇತ್ರ ಹೊಂದಿದ್ದ ಚಿಂಚನಸೂರ ಮಾತ್ರ ತಾಲೂಕಿನ ನರೋಣಾ ವಲಯಕ್ಕೆ ಉಳಿದುಕೊಂಡ ಸಂತಸವಿದೆ. ಆದರೆ ಈ ಗ್ರಾಮದ ಜಿಪಂ ಕ್ಷೇತ್ರ ರದ್ದಾಗಿರುವುದು ಸ್ಥಳೀಯರಿಗೆ ಬೇಸರ ತರಿಸಿದೆ. ಕ್ಷೇತ್ರವನ್ನು ಉಳಿಸಿಕೊಡಬೇಕು ಎಂದು ಸರ್ಕಾರಕ್ಕೆ ರೈತ ಮುಖಂಡ ಪಾಂಡುರಂಗ ಮಾವೀನಕರ್‌ ಮತ್ತು ಸುಧಾಮ ಧನ್ನಿ ಆಗ್ರಹಿಸಿದ್ದಾರೆ.

ಕೇಂದ್ರ ಸ್ಥಾನ ಚಿಂಚನಸೂರ ಗ್ರಾಮವೊಂದೇ ಆಳಂದ ತಾಲೂಕಿಗೆ ಒಳಪಟ್ಟಿದೆ. ಚಿಂಚನಸೂರ ಜಿಪಂ ಕ್ಷೇತ್ರಕ್ಕೆ ಬೆಳಮಗಿ, ಕಮಲಾನಗರ, ಬೋಧನ, ಕೆರೆ ಅಂಬಲಗಾ ಗ್ರಾಪಂಗಳು ಒಳಪಟ್ಟಿದ್ದವು. ಸದ್ಯ ಚಿಂಚನಸೂರಗೆ ನಾಲ್ಕು ಗ್ರಾಪಂಗಳಾದ ಕಮಲಾನಗರ, ಬೋಧನ, ಕೆರೆ ಅಂಬಲಗಾ, ಚಿಂಚನಸೂರ ಈ ನಾಲ್ಕು ಗ್ರಾಪಂಗೆ ಚಿಂಚನಸೂರ ಜಿಪಂ ಕ್ಷೇತ್ರ ನೀಡುವುದು ಸೂಕ್ತವಾಗಿದೆ ಎಂದು ಮುಖಂಡರು ಅಧಿಕಾರಿಗಳ ಮುಂದೆ ಲಿಖೀತವಾಗಿ ವಾದಿಸಿದ್ದಾರೆ.

ವಿಶೇಷವಾಗಿ ಚಿಂಚನಸೂರ ಜಿಲ್ಲಾ ಪರಿಷತ್‌ ಕ್ಷೇತ್ರ ರಚನೆಯಾದ ಮೇಲೆ ಮೊದಲು ಚುನಾಯಿತರಾಗಿದ್ದ ದಿ| ಮಾರುತಿ ಮಾನ್ಪಡೆ, ಜಿಪಂ ರಚನೆಯಾದ ಮೇಲೆ ನಂತರ ರೈತ ಸಂಘದ ಜಿಲ್ಲಾ ಮುಖಂಡ ಕಾಮ್ರೆಡ್‌ ಮೇಘರಾಜ ಕಠಾರೆ, ಕಾಂಗ್ರೆಸ್‌ನಿಂದ ಶೋಭಾ ದಿಗಂಬರ ಬೆಳಮಗಿ, ಕಾಂಗ್ರೆಸ್‌ನಿಂದ ಹರ್ಷಾನಂದ ಎಸ್‌. ಗುತ್ತೇದಾರ, ಬಿಜೆಪಿಯಿಂದ ಮಾಯಾದೇವಿ ಪರಶುರಾಮ ಅಗ್ಗಿ, ಕಾಂಗ್ರೆಸ್‌ನಿಂದ ಶ್ರೀಮತಿ ಸಂಜುಕುಮಾರ ಹಾಗೂ ಸದ್ಯ ಶರಣಗೌಡ ಪಾಟೀಲ ವಿ.ಕೆ. ಸಲಗರ ಸರಣಿ ಅ ಧಿಕಾರಕ್ಕೆ ತಂದ ಕ್ಷೇತ್ರವನ್ನು ಹಠಾತಾಗಿ ರದ್ದುಗೊಳಿಸಿದ್ದು ಸರಿಯಲ್ಲ. ಕಳೆದ 30 ವರ್ಷಗಳಿಂದ ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಕ್ಷೇತ್ರವಾಗಿದ್ದ ಚಿಂಚನಸೂರ ಅಭಿವೃದ್ಧಿ ಪಡಿಸಲು ಜಿಪಂ ಕ್ಷೇತ್ರವನ್ನು ಮುಂದುರೆಸುವುದು ಮುಖ್ಯವಾಗಿದೆ ಎನ್ನುತ್ತಾರೆ ಮುಖಂಡರು.

ಟಾಪ್ ನ್ಯೂಸ್

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

ಜಾನುವಾರುಗಳಿಗೆ ಮೇವು; ಹಸುರು ಹುಲ್ಲಿನ ಬದಲು ತರಕಾರಿ ಸಿಪ್ಪೆ ಬಳಕೆ

Dina Bhavishya

ಅನಿರೀಕ್ಷಿತ ಯಶಸ್ಸು..ಅನಿರೀಕ್ಷಿತ ಪ್ರಗತಿ… ಅನಿರೀಕ್ಷಿತ ಧನಪ್ರಾಪ್ತಿ

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

ಯಳಬೇರು: ಮರವೇರಿದ ಮೊಬೈಲ್‌!ಮರದ ಎತ್ತರದಲ್ಲಿ ನೆಟ್‌ವರ್ಕ್‌ ಸಂಪರ್ಕ; ಅಲ್ಲಿಂದ ಹಾಟ್‌ಸ್ಪಾಟ್‌

12-madikeri

Madikeri: ಅತ್ಯಾಚಾರಿಗೆ ಕಠಿಣ ಸಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್‌ ಏಕಾಂಗಿ ಫೈಟ್‌‌

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

DK Sivakumar: ಪ್ರಜ್ವಲ್‌ ರೇವಣ್ಣ ಕೈ ಹಿಡಿದು ಪ್ರಚಾರ ಮಾಡಿದ ಮೋದಿ ಕ್ಷಮೆ ಕೇಳಲಿ; ಡಿಕೆಶಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

1-wqe-wewq

Cryptocurrency ವೆಬ್‌ಸೈಟ್ ಹ್ಯಾಕ್: ಕೊನೆಗೂ ಆರೋಪಿ ಶ್ರೀಕಿ ಬಂಧನ

1——wqwqe

IPL ರಾಜಸ್ಥಾನ ವಿರುದ್ಧ ಗೆದ್ದ ಡೆಲ್ಲಿ ಪ್ಲೇಆಫ್ ಭರವಸೆ ಜೀವಂತ: ಆರ್ ಸಿಬಿಗೆ ಸವಾಲು

15-

Udupi: ಸಾಲ ಪ್ರಕರಣ: ಆರೋಪಿಗಳು ದೋಷಮುಕ್ತ

1-wqewqe

Students; ವಿವಸ್ತ್ರಗೊಳಿಸಿ, ಖಾಸಗಿ ಅಂಗಕ್ಕೆ ಘಾಸಿ!; ಹಿರಿಯ ವಿದ್ಯಾರ್ಥಿಗಳಿಂದ ಚಿತ್ರಹಿಂಸೆ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.