“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

ಕಾರ್ತಿಕ್‌ ಸುಮ್ಮನಾಗಿಸಲು ಭವಾನಿ-ಪ್ರಜ್ವಲ್‌ ಒಪ್ಪಂದ

Team Udayavani, May 8, 2024, 6:37 AM IST

“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್‌ ನಾಯಕ ಮಂಜೇಗೌಡ ಆರೋಪ

ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಬಿಜೆಪಿ ನಾಯಕ ದೇವರಾಜೇಗೌಡರ ಬಾಯಿ ಮುಚ್ಚಿಸಲು ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ 15 ಕೋಟಿ ರೂ. ಒಪ್ಪಂದ ನಡೆಸಿದ್ದರು. ಪೆನ್‌ಡ್ರೈವ್‌ ಹೊಂದಿದ್ದ ಕಾರ್ತಿಕ್‌ ಅವರನ್ನು ಸುಮ್ಮನಾಗಿಸಲು ದೇವರಾಜೇಗೌಡ ಇಷ್ಟು ಹಣಕ್ಕೆ ಬೇಡಿಕೆ ಯಿರಿಸಿದ್ದರು ಎಂದು ಹಾಸನದ ಕಾಂಗ್ರೆಸ್‌ ಮುಖಂಡ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಪಿ. ಮಂಜೇಗೌಡ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ದೇವರಾಜೇಗೌಡ ಮತ್ತು ರೇವಣ್ಣ ಕುಟುಂಬದ ನಡುವೆ ಜಿದ್ದಾಜಿದ್ದಿ ಇದೆ.

ಹೀಗಾಗಿ ಕಾರ್ತಿಕ್‌ ತನ್ನ ಮೇಲೆ ಆಸ್ತಿ ವಿಚಾರವಾಗಿ ಹಲ್ಲೆ ನಡೆಸಿದ್ದ ರೇವಣ್ಣ ವಿರುದ್ಧ ಕ್ರಮಕ್ಕಾಗಿ ದೇವರಾಜೇಗೌಡರನ್ನು ಭೇಟಿಯಾಗಿ ಪ್ರಜ್ವಲ್‌ ರೇವಣ್ಣನ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಕೊಟ್ಟಿದ್ದ. ಈ ವಿಚಾರವನ್ನು ಕಾರ್ತಿಕ್‌ ಬಿಡುಗಡೆ ಮಾಡಿರುವ ವೀಡಿಯೋದಲ್ಲೇ ಹೇಳಿದ್ದಾನೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಂಜೇಗೌಡ ಹೇಳಿದರು.

ಕಾರ್ತಿಕ್‌ ಬಾಯಿ ಮುಚ್ಚಿಸಲು ಡೀಲ್‌
ಈ ಜಿದ್ದಾಜಿದ್ದಿ ನಡುವೆ ಭವಾನಿ ರೇವಣ್ಣ ಮತ್ತು ಪ್ರಜ್ವಲ್‌ ರೇವಣ್ಣ ದೇವರಾಜೇಗೌಡನನ್ನು ಭೇಟಿಯಾಗಿ ಅಶ್ಲೀಲ ವೀಡಿಯೋಗಳನ್ನು ಬಹಿರಂಗಪಡಿಸದಿರಲು 15 ಕೋಟಿ ರೂ.ಗೆ ಡೀಲ್‌ ಮಾಡಿ 10 ಕೋಟಿ ರೂ. ಮುಂಗಡವಾಗಿ ಕೊಟ್ಟಿದ್ದರು. ಆದರೆ ಕಾರ್ತಿಕ್‌ ಬಾಯಿ ಮುಚ್ಚಲಿಲ್ಲ. ಈ ವಿಚಾರವನ್ನು ನಾನು ಹೇಳುತ್ತಿಲ್ಲ, ಹಾಸನದ ಜನ ಹೇಳುತ್ತಿದ್ದಾರೆ ಎಂದು ಮಂಜೇಗೌಡ ಹೇಳಿದರು.

ದೇವರಾಜೇಗೌಡನಿಂದಲೇ ಪೆನ್‌ಡ್ರೈವ್‌ ಹಂಚಿಕೆ
ದೇವರಾಜೇಗೌಡ ರಾಜಕೀಯ ಮುಖಂಡರ ಬ್ಲ್ಯಾಕ್‌ವೆುàಲ್‌ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಈ ಪೆನ್‌ಡ್ರೈವ್‌ ಕಾರ್ತಿಕ್‌ ಮತ್ತು ದೇವರಾಜೇಗೌಡ ವಿನಾ ಬೇರೆ ಯಾರ ಬಳಿಯೂ ಇರಲಿಲ್ಲ. ಹೀಗಾಗಿ ಹಾಸನದಲ್ಲಿ ದೇವರಾಜೇಗೌಡನೇ ಪೆನ್‌ಡ್ರೈವ್‌ ಹಂಚಿದ್ದಾರೆ. ಆದರೆ ತನಿಖೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಡಿಸಿಎಂ ಡಿ.ಕೆ. ಶಿವಕುಮಾರ್‌ ಮೇಲೆ ಆರೋಪ ಹೊರಿಸಿದ್ದಾರೆ ಎಂದು ದೂರಿದರು.

ಸೋಮವಾರ ದೇವರಾಜೇಗೌಡ ಬಿಡುಗಡೆ ಮಾಡಿರುವ ಆಡಿಯೋ ಸುಳ್ಳು. ಯಾವುದೋ ಕಾರ್ಯನಿಮಿತ್ತ ಶಿವಕುಮಾರ್‌ ಅವರು ದೇವರಾಜೇಗೌಡನ ಜತೆ ಮಾತಾಡಿರಬಹುದು. ಆದರೆ ಅಶ್ಲೀಲ ವೀಡಿಯೋ ಕುರಿತು ಮಾತನಾಡಿಲ್ಲ. ಅದನ್ನೇ ಆತ ಈ ಪ್ರಕರಣದಲ್ಲಿ ಬಳಸಿಕೊಂಡಿದ್ದಾನೆ. ಈ ಬ್ಲ್ಯಾಕ್‌ವೆುàಲ್‌ ರಾಜಕೀಯ ನಿಲ್ಲಬೇಕಾದರೆ ಕಾರ್ತಿಕ್‌ ಗೌಡ ಮತ್ತು ದೇವರಾಜೇಗೌಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ದೇವರಾಜೇಗೌಡ ವಿರುದ್ಧ ದೂರು ಏಕಿಲ್ಲ?
ಅಶ್ಲೀಲ ವೀಡಿಯೋ ಹಂಚಿರುವ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಎಂಬಾತ ನವೀನ್‌ ಗೌಡ ಹಾಗೂ ಇತರರ ವಿರುದ್ಧ ಹಾಸನ ಠಾಣೆ ಯಲ್ಲಿ ದೂರು ನೀಡಿದ್ದಾರೆ. ಆದರೆ ದೇವರಾಜೇಗೌಡನ ವಿರುದ್ಧ ಯಾಕೆ ದೂರು ನೀಡಿಲ್ಲ? ಆತ ಈ ಕೃತ್ಯದಲ್ಲಿ ಭಾಗಿ ಯಾಗಿದ್ದಾನೆ ಎಂದು ಗೊತ್ತಿದ್ದರೂ ರೇವಣ್ಣ ಏಕೆ ಆತನ ವಿರುದ್ಧ ದೂರು ನೀಡಿಲ್ಲ? ಭವಾನಿ, ಪ್ರಜ್ವಲ್‌ ಅವನ ಜತೆ ಡೀಲ್‌ ಮಾಡಿಕೊಂಡಿರುವುದೇ ಕಾರಣ ಎಂದು ಮಂಜೇಗೌಡ ಆರೋಪ ಮಾಡಿದ್ದಾರೆ.

ಟಾಪ್ ನ್ಯೂಸ್

ಸಚಿವ ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

ನಾಗೇಂದ್ರ ರಕ್ಷಣೆ ಮಾಡಲು ಸಿದ್ದರಾಮಯ್ಯ ಸರಕಾರ ಯತ್ನಿಸುತ್ತಿದೆ: ಕೋಟ ಶ್ರೀನಿವಾಸ ಪೂಜಾರಿ

22 ಲಕ್ಷ ಎಕ್ರೆ ವಿಸ್ತಾರದ ಯೆಲ್ಲೋಸ್ಟೋನ್‌! : ಅಮೆರಿಕದ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವನ

22 ಲಕ್ಷ ಎಕ್ರೆ ವಿಸ್ತಾರದ ಯೆಲ್ಲೋಸ್ಟೋನ್‌! : ಅಮೆರಿಕದ ಅತೀ ದೊಡ್ಡ ರಾಷ್ಟ್ರೀಯ ಉದ್ಯಾನವನ

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

‘DDD’ ಡಿಸೆಂಬರ್‌: ʼಡೆವಿಲ್‌ʼ, ʼಕೆಡಿʼ ಒಟ್ಟಿಗೆ ಡಾಲಿ ʼಉತ್ತರಕಾಂಡʼ ರಿಲೀಸ್..?

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

11

ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್

Bellary; ಸಚಿವ ನಾಗೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ; ಬಳ್ಳಾರಿಯಲ್ಲಿ ಪ್ರತಿಭಟನೆ

Bellary; ಸಚಿವ ನಾಗೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ; ಬಳ್ಳಾರಿಯಲ್ಲಿ ಪ್ರತಿಭಟನೆ

MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು

MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

New laws: “ಜುಲೈ 1ರಿಂದ ಐಪಿಸಿ ಕಾಯ್ದೆ ಇರಲ್ಲ, ಬದಲಿಗೆ ಬಿಎನ್‌ಎಸ್‌ ಕಾಯ್ದೆ ಜಾರಿ’

Congress ಮೇಲ್ಮನೆ ಚುನಾವಣೆ; ಕಾಂಗ್ರೆಸ್‌ ಟಿಕೆಟ್‌ಗೆ ದಿಲ್ಲಿಯಲ್ಲಿ ಕಸರತ್ತು

Congress ಮೇಲ್ಮನೆ ಚುನಾವಣೆ; ಕಾಂಗ್ರೆಸ್‌ ಟಿಕೆಟ್‌ಗೆ ದಿಲ್ಲಿಯಲ್ಲಿ ಕಸರತ್ತು

CM, ಸಚಿವ ನಾಗೇಂದ್ರ ತಲೆದಂಡಕ್ಕೆ ವಿಪಕ್ಷ ಪಟ್ಟು !

CM, ಸಚಿವ ನಾಗೇಂದ್ರ ತಲೆದಂಡಕ್ಕೆ ವಿಪಕ್ಷ ಪಟ್ಟು !

ರಾಜೀನಾಮೆ ಮಾತೇ ಇಲ್ಲ: ಸಚಿವ ನಾಗೇಂದ್ರ

ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ: ರಾಜೀನಾಮೆ ಮಾತೇ ಇಲ್ಲ; ಸಚಿವ ನಾಗೇಂದ್ರ

HD Revanna ಜಾಮೀನು ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ

HD Revanna ಜಾಮೀನು ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

kodihalli

Magadi: ಹೇಮಾವತಿ ಕುಡಿಯುವ ನೀರು ಹೋರಾಟ; ಕೋಡಿಹಳ್ಳಿ ಚಂದ್ರಶೇಖರ್ ಸೇರಿ ರೈತರ ಬಂಧನ

ಮಲೇಶಿಯಾ: “ನಾವು ನಮ್ಮ ಮಂದಿಯಿಂದ” ಹೋಳಿ ಹಬ್ಬ ಆಚರಣೆ

ಮಲೇಶಿಯಾ: “ನಾವು ನಮ್ಮ ಮಂದಿಯಿಂದ” ಹೋಳಿ ಹಬ್ಬ ಆಚರಣೆ

Desi Swara: ಭಕ್ತರ ಹೃದಯದಲ್ಲಿ ಶಾಶ್ವತ ವಾಸಿ ವಿಷ್ಣು

Desi Swara: ಭಕ್ತರ ಹೃದಯದಲ್ಲಿ ಶಾಶ್ವತ ವಾಸಿ ವಿಷ್ಣು

11-

First Rain: ರಂಗು ರಂಗಿನ ಮೊದಲ ಮಳೆ

10-ramana-avathara

Movie Review: ಸಿನೆರಂಗ; ರಾಮನ ಅವತಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.