ದಿಲ್ಲಿಯಲ್ಲಿ ಉಷ್ಣದಲೆ : 40.1 ಡಿಗ್ರಿ ಸೆ. ಗರಿಷ್ಠ ತಾಪಮಾನ
Team Udayavani, Mar 30, 2021, 6:55 AM IST
ಹೊಸದಿಲ್ಲಿ : ಹೋಳಿ ಹಬ್ಬದ ದಿನವಾದ ರವಿವಾರ ರಾಜಧಾನಿ ತೀವ್ರ ಉಷ್ಣದ ಅಲೆಗೆ ಸಿಲುಕಿದ್ದು, 40.1 ಡಿಗ್ರಿ ಸೆ. ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ (ಐಎಂಡಿ)ತಿಳಿಸಿದೆ.
ಇದು ದಿಲ್ಲಿಯಲ್ಲಿ ಕಳೆದ 76 ವರ್ಷಗಳಲ್ಲಿ ದಾಖಲಾದ ಮಾರ್ಚ್ ತಿಂಗಳ ಅತೀ ಗರಿಷ್ಠ ತಾಪಮಾನ ಎಂದು ಐಎಂಡಿ ತಿಳಿಸಿದೆ. ರವಿವಾರ ದಾಖಲಾದ ತಾಪಮಾನವು ವಾಡಿಕೆಗಿಂತ 8 ಡಿಗ್ರಿ ಅಧಿಕ ಎಂದೂ ಅದು ಹೇಳಿದ್ದು, 1945ರ ಮಾ. 31ರಂದು 40.5 ಡಿಗ್ರಿ ಸೆ. ಉಷ್ಣತೆ ದಾಖಲಾಗಿತ್ತು ಎಂದಿದೆ.
ಇದೇ ವೇಳೆ ಪ. ರಾಜಸ್ಥಾನ, ಹಿಮಾಚಲ ಪ್ರದೇಶ, ಪೂರ್ವ ಗುಜರಾತ್, ಸೌರಾಷ್ಟ್ರ, ಕಛ… ಮತ್ತು ಮ.ಪ್ರದೇಶ, ವಿದರ್ಭಗಳ ಕೆಲವು ಭಾಗ ಗಳಲ್ಲಿ ಮಾ. 30ರಂದು ಉಷ್ಣ ಅಲೆ ಇರುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.
ಕರಾವಳಿಯಲ್ಲಿ ಮಳೆ
ಸೋಮವಾರ ದಕ್ಷಿಣ ಕನ್ನಡದ ಬಹುತೇಕ ಕಡೆಗಳಲ್ಲಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳ, ಮಾಳ ಮತ್ತಿತರ ಕಡೆ ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಗಾಳಿ, ಸಿಡಿಲು ಸಹಿತ ಸುರಿದ ಮಳೆ ತಂಪೆರೆದಿದೆ. ಬೆಳ್ತಂಗಡಿಯ ಮದ್ದಡ್ಕದಲ್ಲಿ ಭಾರೀ ಗಾಳಿಗೆ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಸಂಚಾರಕ್ಕೆ ತೊಡಕಾಯಿತು.
ಸಿಡಿಲು ಬಡಿದು ಯುವಕ ಸಾವು
ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಆಯನೂರಿನಲ್ಲಿ ರವಿವಾರ ಸಂಭವಿಸಿದೆ. ಶಿವಮೊಗ್ಗ ಅಣ್ಣಾನಗರದ ನಿವಾಸಿ ಆದಿಲ್ ಮೃತ ಯುವಕ. ಮಳೆಯಿಂದ ಶುಂಠಿ ರಕ್ಷಿಸಲೆಂದು ಟಾರ್ಪಲ್ ಮುಚ್ಚಲು ಕಣಕ್ಕೆ ತೆರಳಿದ್ದ ಆದಿಲ್ ಸಿಡಿಲಾಘಾತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು
Crime: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು
Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ