ಮ್ಯಾಜಿಕ್ ಮಾಂತ್ರಿಕ ಪುತ್ರ ಮತ್ತು ಹಾಸ್ಯನಟ ತಂದೆಯ ಪರಿಶ್ರಮ: ತಾರಸಿಯಲ್ಲರಳಿದ ತರಕಾರಿ ತೋಟ

ತಾರಸಿ -ಮನೆಯಂಗಳ ತುಂಬ ಹಚ್ಚ ಹಸುರಿನ ಸಾವಯವ ತರಕಾರಿ

Team Udayavani, Apr 10, 2021, 9:59 AM IST

1

ಕಟಪಾಡಿ: ಆರೋಗ್ಯಕರವಾದ ತರಕಾರಿಯನ್ನು ನಾವೇ ಬೆಳೆದುಕೊಂಡು ನೆಮ್ಮದಿಯಿಂದ ಊಟ ಮಾಡಬೇಕೆಂಬ ಕನಸು ನನಸು ಮಾಡಿಕೊಳ್ಳಲು ತಾರಸಿ ತೋಟವನ್ನು ಬೆಳೆದ ಪೋರ, ಮ್ಯಾಜಿಕ್ ಮಾಂತ್ರಿಕ ಪ್ರಥಮ್ ಕಾಮತ್ ಮತ್ತು ಈತನ ತಂದೆ ಹಾಸ್ಯನಟ ನಾಗೇಶ್ ಕಾಮತ್ ಕಟಪಾಡಿ ಇದೀಗ ಹೆಮ್ಮೆಯ ಮುಗುಳ್ನಗು ಬೀರುತ್ತಿದ್ದಾರೆ

ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಇದ್ದು ಬೇಸತ್ತ ಕಲಾವಿದ ತಂದೆ ಮತ್ತು ಶಾಲೆಯಿಲ್ಲದೆ  ಬೇಸತ್ತು ಏನಾದರೂ ಸಾಧನೆ ಮಾಡಬೇಕೆಂದು ಹಠಕ್ಕೆ ಬಿದ್ದಿದ್ದ ಚಿತ್ರಕಾರ ಪುತ್ರ ಕೂಡಿಕೊಂಡು  ತಮ್ಮಲ್ಲಿರುವ ತೋಟದಲ್ಲಿ ತರಕಾರಿ ಗಿಡಗಳನ್ನು ನೆಟ್ಟರು. ಆದರೆ ನೆರಳು ಜಾಸ್ತಿ ಇದ್ದ ಕಾರಣ ಯಾವುದೇ ಫಲ ಕೊಡಲಿಲ್ಲ . ಪ್ರಥಮ್‍ನ ಪ್ರಥಮ ಪ್ರಯತ್ನ ನಿರಾಶದಾಯಕವಾಗಿತ್ತು.

ಅನಂತರ ಛಲಬಿಡದೆ ಒಂದಷ್ಟು ಆಸಕ್ತಿ, ಇನ್ನೊಂಚೂರು ಶ್ರದ್ಧೆ ಮತ್ತು ಸ್ವಲ್ಪ ಸಮಯವನ್ನು ನೀಡಿ ಕಾಂಕ್ರಿಟ್ ಕಾಡಿನ ನಡುವೆಯೂ ತಮ್ಮ ಮನೆಯ ಸುಮಾರು 1000 ಚ.ಮೀ. ತಾರಸಿಯಲ್ಲಿ  ಹಳೆ ಪ್ಲಾಸ್ಟಿಕ್ ಚೀಲ, ಸಿಮೆಂಟ್ ಚೀಲಗಳಲ್ಲಿ ಕೆಂಪು ಮಣ್ಣು, ಸಾವಯವ ಗೊಬ್ಬರ ತುಂಬಿಸಿ , ಬೆಂಡೆ, ಗುಳ್ಳ, ಕುಂಬಳಕಾಯಿ, ಹರಿವೆ ಸೊಪ್ಪು, ಬಸಳೆ, ಟೊಮೆಟೊ, ಮೆಣಸಿನಕಾಯಿ, ಕಲ್ಲಂಗಡಿ, ಒಂದೆಲಗ, ಪುದಿನ,  ಮನೆಗೆ ಬೇಕಾಗುವ ಇನ್ನಿತರ ತರಕಾರಿಗಳನ್ನು ಅತಿ ಕಡಿಮೆ ಖರ್ಚಿನಲ್ಲಿ ಬೆಳೆಸುತ್ತಿದ್ದಾರೆ.

ಸ್ವತಃ ಪೈಪ್ ಕಾಂಪೋಸ್ಟ್ ಮೂಲಕ ಸಾವಯವ ಗೊಬ್ಬರ ಬಳಕೆಯೊಂದಿಗೆ ಪ್ರತಿದಿನ ಬೆಳಿಗ್ಗೆ ಒಂದು ಅರ್ಧ ಗಂಟೆ ಗಿಡದ ನಿರ್ವಹಣೆಯ ಕೆಲಸ ಹಾಗೆಯೇ ಸಂಜೆ ಗಿಡಕ್ಕೆ ಒಂದು ಗಂಟೆ ನೀರು ಉಣಿಸುವ ಕಾರ್ಯವನ್ನು ತಾಯಿ ಸುಜಾತಾ ಕಾಮತ್ ಮಾರ್ಗದರ್ಶನ ಪಡೆದುಕೊಂಡು ನಿರ್ವಹಿಸುತ್ತಿದ್ದಾರೆ.

ಮನೆಯ ತಾರಸಿಯು ಹಾಳಾಗದಂತೆ  ಹಂಚುಗಳನ್ನು ಅಡಿಪಾಯವಾಗಿಸಿ ಅದರ ಮೇಲೆ ಮಣ್ಣು, ಗೊಬ್ಬರ ತುಂಬಿದ ಗೋಣಿ ಚೀಲವನ್ನು ಇರಿಸಿ ಕಳೆದ  ಡಿಸೆಂಬರ್- ಜನವರಿಯಲ್ಲಿ ನೆಡಲಾದ ತರಕಾರಿ ಗಿಡಗಳು ಉತ್ತಮ ಇಳುವರಿಯನ್ನು ನೀಡುತ್ತಿದ್ದು,  ಮನೆಗೆ ಬೇಕಾದಷ್ಟು ತರಕಾರಿ ಬಳಸಿ ಹತ್ತಿರದವರೆಗೂ ಕೊಡುವಷ್ಟು ತರಕಾರಿ ಬೆಳೆಯುತ್ತಿದ್ದಾರೆ

ಮಾರ್ಗದರ್ಶನ, ಮಾಹಿತಿಗಾಗಿ  ನಾಗೇಶ್ ಕಾಮತ್‍ರನ್ನು ಸಂಪರ್ಕಿಸಿ: 9886432197

 

ಉದಯವಾಣಿಯ ಕೃಷಿ, ಪೈಪ್ ಕಾಂಪೋಸ್ಟ್ ಮಾಹಿತಿಗಳನ್ನು ನಿರಂತರವಾಗಿ ಫಾಲೋ ಅಪ್ ಮಾಡಿದ್ದರಿಂದ ತಾರಸಿ ಕೃಷಿಯಲ್ಲಿ ಯಶಸ್ಸು ಕಂಡಿದ್ದೇವೆ.  ಮನೆಯಲ್ಲೇ ಬೆಳೆದ ತಾಜಾ, ಸಾವಯವ ತರಕಾರಿ ಬಳಕೆಯಿಂದ ಆರೋಗ್ಯಕ್ಕೂ ಉತ್ತಮ. ಹೆಚ್ಚುವರಿ ಫಸಲನ್ನು ಮಾರಾಟ ಮಾಡದೇ ನೆರೆ ಹೊರೆಯವರೊಂದಿಗೆ ಹಂಚಿಕೊಂಡು ಬಳಸಲಾಗುತ್ತದೆ. ಎಳವೆಯಲ್ಲಿಯೇ ಪುತ್ರನ ಕೃಷಿ ಪ್ರೇಮ ಮನಸ್ಸಿಗೆ ತೃಪ್ತಿಯನ್ನು ತಂದಿದೆ.

 ನಾಗೇಶ್ ಕಾಮತ್, ಹಾಸ್ಯನಟ, ಕಟಪಾಡಿ

ತರಕಾರಿ ತೋಟ ಮಾಡಬೇಕೆಂಬ ಹಂಬಲ, ಉದಯವಾಣಿ ಕೃಷಿ ಮಾಹಿತಿಯ ಮಾರ್ಗದರ್ಶನ, ತಂದೆ, ತಾಯಿಯ ಬೆಂಬಲದಿಂದ ಮನೆಯ ತಾರಸಿಯಲ್ಲಿ ತರಕಾರಿ ತೋಟ ಸಿದ್ಧಗೊಳಿಸಿದ್ದು, ಉತ್ತಮ ಇಳುವರಿ ಕಾಣುತ್ತಿದ್ದೇನೆ. ಟ್ಯಾಂಕ್‍ನಿಂದ ಓವರ್ ಫೆÇ್ಲೀ ಆದ ನೀರು ಕೂಡಾ ವೇಸ್ಟ್ ಆಗಬಾರದೆಂಬ ಉದ್ದೇಶದಿಂದ ಅಲ್ಲೂ ಗಿಡಗಳನ್ನು ಬೆಳೆಸಲಾಗುತ್ತಿದೆ. ಮನೆಯಂಗಳದಲ್ಲೂ ತರಕಾರಿ ತೋಟವನ್ನು ಬೆಳೆಯುತ್ತಿದ್ದೇನೆ .

ಪ್ರಥಮ್ ಕಾಮತ್, ಜಾದೂಗಾರ, ಚಿತ್ರ ಕಲಾವಿದ, ಕಟಪಾಡಿ

 

ಚಿತ್ರ, ವರದಿ: ವಿಜಯ ಆಚಾರ್ಯ, ಉಚ್ಚಿಲ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.