ಇಂದಿನ ಗ್ರಹಬಲ: ಅವಿವಾಹಿತರ ವಿವಾಹ ಜೋಡಣೆ ಯೋಜನೆಗಳ ಅನುಷ್ಠಾನಕ್ಕೆ ಇದು ಸಕಾಲ.
Team Udayavani, Apr 12, 2021, 7:40 AM IST
12-04-2021
ಮೇಷ: ಹಂತಹಂತವಾಗಿ ನಿಮ್ಮ ಅಭಿವೃದ್ಧಿ, ಆತ್ಮವಿಶ್ವಾಸ, ಪ್ರಯತ್ನ ಒಲವು ಹೆಚ್ಚಲಿದೆ. ಆದರೆ ಅತೀ ವಿಶ್ವಾಸ ನಿಮ್ಮಲ್ಲಿ ಅಹಂಕಾರ ತೋರಿಸಲಿದೆ. ತಾಳ್ಮೆ ಸಂಯಮದಿಂದ ವರ್ತಿಸಿದಲ್ಲಿ ಗೊಂದಲ ನಿವಾರಿಸಬಹುದು.
ವೃಷಭ: ವ್ಯವಹಾರಿಕವಾಗಿ ಕೊಂಡು ಕೊಳ್ಳುವುದರಲ್ಲಿ ಲಾಭವನ್ನು ಪಡೆಯಲಿದ್ದೀರಿ. ಕುಟುಂಬದವರ ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಾಸ ತೋರಿಬರುವುದು. ವಿವಾಹ ಸಂಬಂಧಿ, ಉದ್ಯೋಗ ಸಂಬಂಧಿತ ವಿಚಾರದಲ್ಲಿ ಜಯ.
ಮಿಥುನ: ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಇಷ್ಟಾರ್ಥವು ಸಿದ್ಧಿಸಲಿದೆ. ಸಾಮಾಜಿಕವಾಗಿ ನಿಮ್ಮ ಪ್ರಭಾವ ಬೆಳೆಯಲಿದೆ. ಅದೃಷ್ಟ ಒಲವು ನಿಮ್ಮ ಪಾಲಿಗಿದ್ದು ನಿಮ್ಮ ಎಣಿಕೆಗಳೆಲ್ಲ ಈಡೇರಿ ಸಂತೋಷಗೊಳ್ಳುವಿರಿ.
ಕರ್ಕ: ಧೈರ್ಯದಿಂದ ಮುಂದೆ ಹೆಜ್ಜೆ ಇಟ್ಟು ಕಾರ್ಯ ಸಾಧಿಸಿರಿ. ಹೊಸ ವ್ಯವಹಾರದಲ್ಲಿ ನಿಮ್ಮನ್ನು ಹೊಂದಿಸಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾದೀತು. ಮನೆಯಲ್ಲಿ ಕುಟುಂಬದವರ ಒಳಜಗಳ ಮನಸ್ಸು ಕೆಡಿಸಲಿದೆ.
ಸಿಂಹ: ದೂರ ಪ್ರಯಾಣದ ಸಾಧ್ಯತೆ ಕಂಡು ಬರುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಉತ್ತಮ ಅವಕಾಶಗಳು ಕಂಡು ಬರುವುದು. ಒಳಜಗಳ, ಹಿತಶತ್ರು ಬಾಧೆ, ಭಿನ್ನಾಭಿಪ್ರಾಯಗಳಿಂದ ಕುಟುಂಬ ಜೀವನ ಗೊಂದಲಮಯವಾದೀತು.
ಕನ್ಯಾ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉತ್ತಮ ಅವಕಾಶಗಳು ಕಂಡು ಬರುವುದು. ಉದ್ವೇಗ ಪರಿಸ್ಥಿತಿಯಲ್ಲಿ ಸಿಲುಕಿ ತೊಳಲಾಡುವಿರಿ. ಬಹುಶಃ ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳೇ ಕಾರಣವಾಗಬಹುದು.
ತುಲಾ: ವ್ಯಾಪಾರಿ ವರ್ಗದವರಿಗೆ ಜೀವನವು ಮಂದಗತಿಯಲ್ಲಿ ಸಾಗಲಿದೆ. ವಿದ್ಯಾರ್ಥಿ ವರ್ಗಕ್ಕೆ ಹೆಚ್ಚಿನ ಪ್ರಯತ್ನ ಬಲದಿಂದ ಮುಂದುವರಿದಲ್ಲಿ ಉತ್ತಮವಿದೆ. ಅಪಘಾತಗಳ ಬಗ್ಗೆ ಅತೀ ಹೆಚ್ಚಿನ ಜಾಗ್ರತೆ ಮಾಡಿದರೆ ಉತ್ತಮ.
ವೃಶ್ಚಿಕ: ಉದ್ಯೋಗಿಗಳಿಗೆ ವರ್ಗಾವಣೆಯ ಯಾ ಸ್ಥಾನ ಬದಲಾವಣೆ ಯೋಗ ತೋರಿಬರುವುದು. ಕುಟುಂಬ ಸ್ಥಾನದಲ್ಲಿ ಅನಗತ್ಯ ವಿಚಾರದಲ್ಲಿ ಭಿನ್ನಾಭಿಪ್ರಾಯವು ಮೂಡಿಬಂದು ಕಲಹವಾದೀತು. ಜಾಗ್ರತೆ .
ಧನು: ಹಂತಹಂತವಾಗಿ ನಿಮ್ಮ ಆತ್ಮವಿಶ್ವಾಸದ, ಪ್ರಯತ್ನ ಬಲದಿಂದ ಜಾಗೃತಿಯು ಉಂಟಾಗುವುದು. ಉದ್ಯಮ, ವ್ಯಾಪಾರ, ವ್ಯವಹಾರ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಂಡು ಬರುವುದು. ಕೊಟ್ಟುಕೊಳ್ಳುವಿಕೆಯಲ್ಲಿ ಲಾಭವಿದೆ.
ಮಕರ: ಸಂತಸ, ಸಮಾಧಾನದ ಸುದ್ದಿಯನ್ನು ಆಲಿಸಲಿದ್ದೀರಿ. ವಿವಾಹ, ಹುಟ್ಟುಹಬ್ಬ ಇತ್ಯಾದಿಗಳಿಂದ ಉಲ್ಲಾಸಕರ ವಾತಾವರಣ ಕಂಡು ಬರಲಿದೆ. ದೂರ ಪ್ರಯಾಣದಿಂದ ಕಾರ್ಯಾನುಕೂಲವಿದೆ. ಪತ್ನಿ, ಮಕ್ಕಳಿಂದ ಸಂತಸವಿದೆ.
ಕುಂಭ: ವೈಯಕ್ತಿಕ ತಪ್ಪುಗಳಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುವಿರಿ. ಮಿತ್ರ ವರ್ಗದವರಿಂದ ಸಹಕಾರ ಸಿಕ್ಕಿ ನೆಮ್ಮದಿಯಾಗಲಿದೆ. ಅವಿವಾಹಿತರ ವಿವಾಹ ಜೋಡಣೆ ಯೋಜನೆಗಳ ಅನುಷ್ಠಾನಕ್ಕೆ ಇದು ಸಕಾಲ.
ಮೀನ: ನಿರುದ್ಯೋಗಿಗಳಿಗೆ ಅನಿರೀಕ್ಷಿತ ಅವಕಾಶಗಳು ದೊರಕಲಿದೆ. ಅಲ್ಲದೆ ವಿದೇಶ ಯಾನದ ಯೋಗವೂ ಕೂಡಿ ಬಂದೀತು. ಈ ಸಮಯದಲ್ಲಿ ಹೇಗೆ ಉಪಯೋಗಿಸಿಕೊಳ್ಳುವಿರಿ ಎಂಬುದರ ಮೇಲೆ ನಿಮ್ಮ ಯಶಸ್ಸು ಅಡಗಿರುತ್ತದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ
Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?