ಮತ್ತೆ ಕುಂಟುತ್ತಾ ಸಾಗಿದ ಫ್ಲೈಓವರ್‌ ಕಾಮಗಾರಿ : ಮತ್ತೂಮ್ಮೆ ಹೊಸ ಗಡುವು ನಿರೀಕ್ಷೆ!


Team Udayavani, Apr 13, 2021, 2:37 AM IST

ಮತ್ತೆ ಕುಂಟುತ್ತಾ ಸಾಗಿದ ಫ್ಲೈಓವರ್‌ ಕಾಮಗಾರಿ : ಮತ್ತೂಮ್ಮೆ ಹೊಸ ಗಡುವು ನಿರೀಕ್ಷೆ!

ಕುಂದಾಪುರ: ದಶಕದಿಂದ ಕುಂಟುತ್ತಾ ಸಾಗಿದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್‌ ಕಾಮಗಾರಿ ಈ ಬಾರಿ ಕೊಟ್ಟ ದಿನಾಂಕದಂದೂ ಮುಗಿಯುವುದು ಅನುಮಾನ ಎನಿಸಿದೆ. 10 ದಿನಗಳ ಅವಧಿಯಲ್ಲಿ ಮುಗಿಸಲಾಗುವುದು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಎ. 1ರಂದು ನಡೆಯಬೇಕಿದ್ದ ಭಜನೆ, ಪ್ರತಿಭಟನೆಯನ್ನು ಕೈ ಬಿಡಲಾಗಿತ್ತು. ಆಗ ನೀಡಿದ್ದ ಕಾರಣ ಜಲ್ಲಿ ಕೊರತೆ. ಈಗ 10 ದಿನಗಳು ಕಳೆದಿದ್ದು, ಪುರಸಭೆ ಸಾಮಾನ್ಯ ಸಭೆಯಲ್ಲಿ ಎ. 15-20ರ ವೇಳೆಗೆ ಮುಕ್ತಾಯವಾಗಲಿದೆ ಎಂದು ಹೊಸ ದಿನಾಂಕ ನೀಡಲಾಗಿತ್ತು. ಮುಂದಿನ ಹೊಸ ದಿನಾಂಕಕ್ಕಾಗಿ ಕಾಯಲಾಗುತ್ತಿದೆ!

ಸಾಮಗ್ರಿ ಕೊರತೆ
ಫ್ಲೈಓವರ್‌ ಕಾಮಗಾರಿ ಪರಿಪೂರ್ಣವಾಗದೇ ಇದ್ದರೂ ಅಂತಿಮ ಹಂತದಲ್ಲಿದೆ. ವಿನಾಯಕ ಥಿಯೇಟರ್‌ ಬಳಿ ಡಾಮರು ಕಾಮ ಗಾರಿ ಆಗಿರಲಿಲ್ಲ. ಈಗ ಒಂದು ಬದಿಗೆ ಡಾಮರು ಹಾಕಲಾಗಿದೆ. ಬೀದಿ ದೀಪ ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ಬದಿಯಷ್ಟೇ ಆಗಿದ್ದು ಇನ್ನೊಂದು ಬದಿ ಆರಂಭವೇ ಆಗಿಲ್ಲ. ಒಂದು ಮಾಹಿತಿ ಪ್ರಕಾರ ಸುಮಾರು 50 ಲಕ್ಷ ರೂ.ಗಳ ಸಾಮಗ್ರಿ ಬೇಕಿದ್ದು ಅದರ ಕೊರತೆ ಉಂಟಾಗಿದೆ. ಸಾಮಗ್ರಿ ಪೂರೈಸುವವರು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕಾಮಗಾರಿ ವಿಳಂಬವಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಗುತ್ತಿಗೆದಾರ ಸಂಸ್ಥೆಯವರು ಸಮರ್ಪಕವಾಗಿ ಉತ್ತರಿಸುತ್ತಿಲ್ಲ.

ಸರ್ವೀಸ್‌ ರಸ್ತೆ ಅಗೆತ
ಫ್ಲೈಓವರ್‌ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ಸರ್ವೀಸ್‌ ರಸ್ತೆಯೇ ಹೆದ್ದಾರಿಯಾಗಿ ಬಳಸ ಲ್ಪಡುತ್ತಿದೆ. ಈ ಇಕ್ಕಟ್ಟಾದ ಸರ್ವಿಸ್‌ ರಸ್ತೆಯಲ್ಲಿ ಈಗ ಚರಂಡಿಗಾಗಿ ಅಗೆದು ಮತ್ತೂ ಕಿರಿ ದಾಗಿಸಲಾಗಿದೆ. ಅಷ್ಟಲ್ಲದೇ ಅರೆಬರೆ ಕಾಮಗಾರಿ ಮಾಡಿ
ಅಗೆದು ಬಿಟ್ಟ ಚರಂಡಿಯನ್ನು ತಿಂಗಳಾದರೂ ಮುಟ್ಟುತ್ತಿಲ್ಲ. ಶೆಲೋಮ್‌ ಹೊಟೇಲ್‌ನಿಂದ ಶ್ರೀದೇವಿ ನರ್ಸಿಂಗ್‌ ಹೋ ರಸ್ತೆಯ ತನಕ ಚರಂಡಿಗಾಗಿ 1 ತಿಂಗಳ ಹಿಂದೆ ಹೊಂಡ ತೆಗೆಯಲಾಗಿದೆ. ಇನ್ನೂ ಇದರಲ್ಲಿ ಕಾಂಕ್ರೀಟ್‌ ಹಾಕಿ ಚರಂಡಿ ಗೋಡೆ ಮಾಡದ ಕಾರಣ ರಾತ್ರಿ ವೇಳೆ ಜನರು ಹಾಗೂ ದ್ವಿಚಕ್ರ ವಾಹನಗಳಿಗೆ ಅಪಾಯ ಸಂಭವಿಸುತ್ತಿದೆ. ದಿವ್ಯ ದರ್ಶಿನಿ ಹೊಟೇಲ್‌ ಬಳಿ ಆಳ ಹೊಂಡ ಮಾಡಲಾಗಿದೆ.

ಕೇಬಲ್‌ ಲೈನ್‌ ಇದೆ, ಪುರಸಭೆಯ ನೀರಿನ ಪೈಪ್‌ಲೈನ್‌ ಇದೆ ಎಂಬ ನೆಪದಲ್ಲಿ ಕಾಮಗಾರಿ ಬಾಕಿ ಇಡ ಲಾಗಿದೆ. ಮತ್ತೂಂದಷ್ಟು ಕಡೆ ಕಾಮಗಾರಿ ಮಾಡಲಾಗಿದೆ. ನವಯುಗ ಸಂಸ್ಥೆಯವರು ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿದ ಪ್ರಕಾರ, ಫ್ಲೈಓವರ್‌ ಕಾಮಗಾರಿ ಪೂರ್ಣವಾದ ಬಳಿವೇ ಸರ್ವೀಸ್‌ ರಸ್ತೆಯ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಎಲ್ಲ ಬೇಡಿಕೆಗಳನ್ನೂ ಈಡೇರಿಸಲಾಗುತ್ತದೆ ಎಂದು. ಆದರೆ ಇತ್ತ ಫ್ಲೈಓವರ್‌ ಕೆಲಸವೂ ಆಗಿಲ್ಲ, ಸರ್ವೀಸ್‌ ರಸ್ತೆ ಕೆಲಸಗಳೂ ಆಗಿಲ್ಲ ಎಂಬಂತಾಗಿದೆ. ಫ್ಲೈ ಓವರ್‌ ಕೆಲಸ ಮುಗಿಯುವಾಗ ಮಳೆ ಬರಲಾರಂಭಿಸಿದರೆ ಇತರ ಕೆಲಸಗಳಿಗೆ ಮಳೆಗಾಲ ಮುಗಿಯಲು ಕಾಯಬೇಕು. ಆಮೇಲೆ ಆದರೆ ಆಯಿತು, ಇಲ್ಲದಿದ್ದರೆ ಹೋಯಿತು ಎಂಬಂತಾಗಲಿದೆ.

ಆಮೆ ವೇಗ

ಮಾರ್ಚ್‌ ತಿಂಗಳಲ್ಲಿ ವೇಗವಾಗಿ ನಡೆಯುತ್ತಿದ್ದ ಕಾಮಗಾರಿ ಈಗ ಆಮೆ ಗತಿ ಯಲ್ಲಿ ನಡೆಯುತ್ತಿದೆ. ಹೀಗೇ ಮುಂದುವರಿದರೆ ಮಳೆಗಾಲದಲ್ಲಾದರೂ ಪೂರ್ಣವಾಗುವುದು ಅನುಮಾನ ಎಂಬಂತಾಗಿದೆ. ಈಗಲೇ ಜನ ಮಾರ್ಚ್‌ ಕೊನೆಗೆ ಮುಕ್ತಾಯ ಎಂಬ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಈ ವರ್ಷವೂ ಹಿಂದಿನ ವರ್ಷಗಳಂತೆ ಎಪ್ರಿಲ್‌ ಫ‌ೂಲ್‌ ಮಾಡಿದೆ ಎಂದು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿದ್ದರು. ಅದನ್ನು ಗುತ್ತಿಗೆದಾರ ಸಂಸ್ಥೆಯೂ ನಿಜ ಮಾಡಿದೆ. ಈಗ ಯುಗಾದಿಗೂ ಸಿಹಿ ಬದಲು ಕಹಿಯನ್ನೇ ನೀಡುತ್ತಿದೆ.

ಅರೆಬರೆ ಕಾಮಗಾರಿ
ಚರಂಡಿಗಾಗಿ ರಸ್ತೆ ಅಗೆದಲ್ಲಿ ಮನೆಗಳಿಗೆ ಹೋಗಲು ಅನನುಕೂಲವಾಗುತ್ತಿದೆ. ವೃದ್ಧರು, ಮಕ್ಕಳು ಇರುವ ಮನೆಯ ಆವರಣಗೋಡೆ ಮುಂದೆ ಐದಾರು ಅಡಿ ಆಳದ ಗುಂಡಿ ತೆಗೆದಿಟ್ಟು ಸೂಕ್ತ ಓಡಾಟಕ್ಕೆ ಕಷ್ಟವಾಗುವಂತೆ ಮಾಡಿದ್ದಾರೆ. ಮಾ.16ರಂದು ಗುಂಡಿ ತೆಗೆದಿದ್ದು ಇನ್ನೂ ಅದರ ಕಾಮಗಾರಿ ಕುರಿತು ಗಮನ ಹರಿಸಿಲ್ಲ. ಕಾಮಗಾರಿ ಮಾಡಿದಲ್ಲೂ ಅರೆಬರೆಯಾಗಿದೆ. ಒಟ್ಟಿನಲ್ಲಿ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ.
-ಧೀರಜ್‌ ರಾವ್‌, ಕುಂದಾಪುರ, ಸ್ಥಳೀಯರು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.