ಪಂಜಾಬ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಗೆಲುವಿನ ಹಳಿ ಏರಿದ ಕೆಕೆಆರ್‌


Team Udayavani, Apr 26, 2021, 11:27 PM IST

ಪಂಜಾಬ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿ ಗೆಲುವಿನ ಹಳಿ ಏರಿದ ಕೆಕೆಆರ್‌

ಅಹ್ಮದಾಬಾದ್‌ : ಸೋಮವಾರದಿಂದ ಮೊದಲ್ಗೊಂಡ ಐಪಿಎಲ್‌ನ ಅಹ್ಮದಾಬಾದ್‌ ಲೀಗ್‌ ಸ್ಪರ್ಧೆಯಲ್ಲಿ ಬ್ಯಾಟಿಂಗ್‌ ಪರದಾಟ ಕಂಡುಬಂದಿದೆ. ಸಣ್ಣ ಮೊತ್ತದ ಮುಖಾಮುಖೀಯಲ್ಲಿ ಕೆಕೆಆರ್‌ 5 ವಿಕೆಟ್‌ಗಳಿಂದ ಪಂಜಾಬ್‌ ಗೆ ಸೋಲುಣಿಸಿ 2ನೇ ಜಯ ದಾಖಲಿಸಿದೆ.

ಪಂಜಾಬ್‌ ಕಿಂಗ್ಸ್‌ 9 ವಿಕೆಟಿಗೆ ಕೇವಲ 123 ರನ್‌ ಗಳಿಸಿದರೆ, ಕೆಕೆಆರ್‌ 16.4 ಓವರ್‌ಗಳಲ್ಲಿ 5 ವಿಕೆಟಿಗೆ 126 ರನ್‌ ಮಾಡಿತು.
ನಿತೀಶ್‌ ರಾಣಾ, ಶುಭಮನ್‌ ಗಿಲ್‌ ಮತ್ತು ಸುನೀಲ್‌ ನಾರಾಯಣ್‌ ಅವರನ್ನು 3 ಓವರ್‌ಗಳಲ್ಲೇ ಕಳೆದುಕೊಂಡ ಕೆಕೆಆರ್‌ ಕೂಡ ತೀವ್ರ ಕುಸಿತಕ್ಕೆ ಸಿಲುಕುವ ಎಲ್ಲ ಸಾಧ್ಯತೆ ಇತ್ತು. ಆಗ ಕೇವಲ 17 ರನ್‌ ಆಗಿತ್ತು. ಆದರೆ ರಾಹುಲ್‌ ತ್ರಿಪಾಠಿ (41) ಮತ್ತು ನಾಯಕ ಇಯಾನ್‌ ಮಾರ್ಗನ್‌ (ಔಟಾಗದೆ 47) ಸೇರಿಕೊಂಡು ಬಹಳ ಎಚ್ಚರಿಕೆಯಿಂದ ಪರಿಸ್ಥಿತಿ ನಿಭಾಯಿಸತೊಡಗಿದರು. 4ನೇ ವಿಕೆಟಿಗೆ 66 ರನ್‌ ಒಟ್ಟುಗೂಡಿಸಿ ತಂಡಕ್ಕೆ ಮೇಲುಗೈ ಒದಗಿಸಿದರು.

ಇಂಗ್ಲೆಂಡ್‌ ಎದುರಿನ ಸರಣಿ ವೇಳೆ ಇಲ್ಲಿನ ಪಿಚ್‌ ವ್ಯಾಪಕ ಟೀಕೆಗೊಳಗಾಗಿತ್ತು. ರಾಹುಲ್‌-ಅಗರ್ವಾಲ್‌ ಪವರ್‌ ಪ್ಲೇ ವೇಳೆ ರನ್‌ ಚಡಪಡಿಕೆ ನಡೆಸಿದ್ದು ಇದರ ಮುಂದುವರಿದ ಭಾಗದಂತಿತ್ತು. 6 ಓವರ್‌ಗಳಲ್ಲಿ ಪಂಜಾಬ್‌ ಒಂದು ವಿಕೆಟಿಗೆ ಕೇವಲ 37 ರನ್‌ ಮಾಡಿತ್ತು. 20 ಎಸೆತಗಳಿಂದ 19 ರನ್‌ ಮಾಡಿದ ರಾಹುಲ್‌ ಮೊದಲಿಗರಾಗಿ ನಿರ್ಗಮಿಸಿದರು. ಈ ವಿಕೆಟ್‌ ಉರುಳಿಸಿದವರು ಪ್ಯಾಟ್‌ ಕಮಿನ್ಸ್‌. ದೊಡ್ಡ ಹೊಡೆತ ಬಾರಿಸಲು ಗರಿಷ್ಠ ಪ್ರಯತ್ನ ಮಾಡಿದ ರಾಹುಲ್‌ ಇನ್ನಿಂಗ್ಸ್‌ನಲ್ಲಿ 2 ಫೋರ್‌, ಒಂದು ಸಿಕ್ಸರ್‌ ಸೇರಿತ್ತು.

ಶಿವಂ ಮಾವಿ ಮುಂದಿನ ಓವರ್‌ನಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರನ್ನು “ಗೋಲ್ಡನ್‌ ಡಕ್‌’ ಸಂಕಟಕ್ಕೆ ತಳ್ಳಿದರು. ಡಿಆರ್‌ಎಸ್‌ ಮೂಲಕ ಈ ತೀರ್ಪು ಕೆಕೆಆರ್‌ ಪರವಾಗಿ ಬಂತು. ಅನಂತರದ ಓವರ್‌ನಲ್ಲಿ ವಿಕೆಟ್‌ ಬೇಟೆಯಾಡುವ ಸರದಿ ಪ್ರಸಿದ್ಧ್ ಕೃಷ್ಣ ಅವರದಾಯಿತು.

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಕೆ.ಎಲ್‌. ರಾಹುಲ್‌ ಸಿ ನಾರಾಯಣ್‌ ಬಿ ಕಮಿನ್ಸ್‌ 19
ಅಗರ್ವಾಲ್‌ ಸಿ ತ್ರಿಪಾಠಿ ಬಿ ನಾರಾಯಣ್‌ 31
ಕ್ರಿಸ್‌ ಗೇಲ್‌ ಸಿ ಕಾರ್ತಿಕ್‌ ಬಿ ಮಾವಿ 0
ದೀಪಕ್‌ ಹೂಡಾ ಸಿ ಮಾರ್ಗನ್‌ ಬಿ ಪ್ರಸಿದ್ಧ್ 1
ನಿಕೋಲಸ್‌ ಪೂರಣ್‌ ಬಿ ಚಕ್ರವರ್ತಿ 19
ಮೊಸಸ್‌ ಹೆನ್ರಿಕ್ಸ್‌ ಬಿ ನಾರಾಯಣ್‌ 2
ಶಾರೂಖ್‌ ಖಾನ್‌ ಸಿ ಮಾರ್ಗನ್‌ ಬಿ ಪ್ರಸಿದ್ಧ್ 13
ಕ್ರಿಸ್‌ ಜೋರ್ಡನ್‌ ಬಿ ಪ್ರಸಿದ್ಧ್ 30
ರವಿ ಬಿಷ್ಣೋಯಿ ಸಿ ಮಾರ್ಗನ್‌ ಬಿ ಕಮಿನ್ಸ್‌ 1
ಮೊಹಮ್ಮದ್‌ ಶಮಿ ಔಟಾಗದೆ 1
ಆರ್ಷದೀಪ್‌ ಸಿಂಗ್‌ ಔಟಾಗದೆ 1
ಇತರ 5
ಒಟ್ಟು(9 ವಿಕೆಟಿಗೆ) 123
ವಿಕೆಟ್‌ ಪತನ:1-36, 2-38, 3-42, 4-60, 5-75, 6-79, 7-95, 8-98, 9-121.
ಬೌಲಿಂಗ್‌; ಶಿವಂ ಮಾವಿ 4-0-13-1
ಪ್ಯಾಟ್‌ ಕಮಿನ್ಸ್‌ 3-0-31-2
ಸುನೀಲ್‌ ನಾರಾಯಣ್‌ 4-0-22-2
ಪ್ರಸಿದ್ಧ್ ಕೃಷ್ಣ 4-0-30-3
ಆ್ಯಂಡ್ರೆ ರೆಸಲ್‌ 1-0-2-0
ವರುಣ್‌ ಚಕ್ರವರ್ತಿ 4-0-24-1

ಕೋಲ್ಕತಾ ನೈಟ್‌ರೈಡರ್
ಶುಭಮನ್‌ ಗಿಲ್‌ ಎಲ್‌ಬಿಡಬ್ಲ್ಯು ಬಿ ಶಮಿ 9
ನಿತೀಶ್‌ ರಾಣಾ ಸಿ ಶಾರೂಖ್‌ ಬಿ ಹೆನ್ರಿಕ್ಸ್‌ 0
ರಾಹುಲ್‌ ತ್ರಿಪಾಠಿ ಸಿ ಶಾರೂಖ್‌ ಬಿ ಹೂಡಾ 41
ನಾರಾಯಣ್‌ ಸಿ ರವಿ ಬಿ ಆರ್ಷದೀಪ್‌ 0
ಇಯಾನ್‌ ಮಾರ್ಗನ್‌ ಔಟಾಗದೆ 47
ಆ್ಯಂಡ್ರೆ ರಸೆಲ್‌ ರನೌಟ್‌ 10
ದಿನೇಶ್‌ ಕಾರ್ತಿಕ್‌ ಔಟಾಗದೆ 12
ಇತರ 7
ಒಟ್ಟು(16.4 ಓವರ್‌ಗಳಲ್ಲಿ 5 ವಿಕೆಟಿಗೆ) 126
ವಿಕೆಟ್‌ ಪತನ:1-5, 2-9, 3-17, 4-83, 5-98
ಬೌಲಿಂಗ್‌; ಮೊಸೆಸ್‌ ಹೆನ್ರಿಕ್ಸ್‌ 1-0-5-1
ಮೊಹಮ್ಮದ್‌ ಶಮಿ 4-0-25-1
ಆರ್ಷದೀಪ್‌ ಸಿಂಗ್‌ 2.4-0-27-1
ರವಿ ಬಿಷ್ಣೋಯಿ 4-0-19-0
ಕ್ರಿಸ್‌ ಜೋರ್ಡನ್‌ 3-0-24-0
ದೀಪಕ್‌ ಹೂಡಾ 2-0-20-1

ಟಾಪ್ ನ್ಯೂಸ್

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.