ನಗದುರಹಿತ ಚಿಕಿತ್ಸೆ ಪಡೆಯುವುದು ಹೇಗೆ? ಕೊರೊನಾ ಸೋಂಕಿತರ ಸಮಸ್ಯೆಗೆ ಕೆಲವೊಂದು ಸಲಹೆ


Team Udayavani, May 1, 2021, 7:10 AM IST

ನಗದುರಹಿತ ಚಿಕಿತ್ಸೆ ಪಡೆಯುವುದು ಹೇಗೆ? ಕೊರೊನಾ ಸೋಂಕಿತರ ಸಮಸ್ಯೆಗೆ ಕೆಲವೊಂದು ಸಲಹೆ

ಆರೋಗ್ಯ ವಿಮೆ ಹೊಂದಿರುವ ಕೊರೊನಾ ರೋಗಿಗಳಿಗೆ ನಗದು ರಹಿತ ಚಿಕಿತ್ಸೆಗೆ ಅವಕಾಶವಿದ್ದರೂ ಕೆಲವು ಆಸ್ಪತ್ರೆಗಳು ಆ ಸೌಲಭ್ಯ ಉಪಯೋಗಿಸಿ­ಕೊಳ್ಳಲು ಅವಕಾಶ ನೀಡುತ್ತಿಲ್ಲ. ಜತೆಗೆ, ಪ್ರತಿಯೊಂದು ಚಿಕಿತ್ಸೆಗೂ ದುಬಾರಿ ಶುಲ್ಕ ವಿಧಿಸುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಕೇಂದ್ರ ಹಣಕಾಸು ಇಲಾಖೆ, ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಕ್ಯಾಶ್‌ಲೆಸ್‌ ಸೇವೆ ನೀಡಬೇಕೆಂದು ಸೂಚಿಸಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಇಂಥ ಪರಿಸ್ಥಿತಿಗೆ ಸಿಲುಕಿದವರಿಗೆ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ನಿಮಗೂ ತೊಂದರೆಯಾದರೆ ಹೀಗೆ ಮಾಡಿ…
1. ಟಿಪಿಎ ಜತೆ ಮಾತನಾಡಿ
ಯಾವುದೇ ಆಸ್ಪತ್ರೆಯಲ್ಲಿ ಇಂಥ ಪರಿಸ್ಥಿತಿ ಎದುರಾದರೆ ವಿಮಾ ಕಂಪೆನಿಯ ಥರ್ಡ್‌ ಪಾರ್ಟಿ ಅಸಿಸ್ಟೆಂಟ್‌ (ಟಿಪಿಎ) ಜತೆ ಮಾತನಾಡಿ, ಸಂಬಂಧಿಸಿದ ನೆಟ್‌ವರ್ಕ್‌ ಆಸ್ಪತ್ರೆಯಲ್ಲಿ ಕ್ಯಾಶ್‌ಲೆಸ್‌ ವ್ಯವಸ್ಥೆ ಪಡೆಯಬಹುದು.

2. ಮರುಪಾವತಿಗೆ ಆದ್ಯತೆ
ರೋಗಿಯ ಪರಿಸ್ಥಿತಿ ಗಂಭೀರವಾಗಿದ್ದಲ್ಲಿ ಹಣ ಪಾವತಿಸಿ ಚಿಕಿತ್ಸೆ ಸಿಗುವಂತೆ ಮಾಡಬೇಕು. ಅನಂತರ ಹಣ ಮರುಪಾವತಿಗೆ ಮನವಿ ಸಲ್ಲಿಸಬಹುದು. ಐಆರ್‌ಡಿಎಐ ಕೂಡ ಇದನ್ನೇ ಹೇಳಿದೆ.

3.ಮರುಪಾವತಿ ಸಾಧ್ಯ
ನೆಟ್‌ವರ್ಕ್‌ ಆಸ್ಪತ್ರೆಯಲ್ಲಿ ಕ್ಯಾಶ್‌ಲೆಸ್‌ ಚಿಕಿತ್ಸೆ ಸಿಗದೇ ಇದ್ದಾಗ, ತುರ್ತು ಸಂದರ್ಭ­ಗಳಲ್ಲಿ ನೆಟ್‌ವರ್ಕ್‌ನಲ್ಲಿ ಇಲ್ಲದ ಆಸ್ಪತ್ರೆಗಳಲ್ಲಿ ರೋಗಿಯನ್ನು ದಾಖಲಿಸಬಹುದು. ಅನಂತರ, ಚಿಕಿತ್ಸೆಯ ಹಣದ ಮರುಪಾವತಿಗೆ ಅರ್ಜಿ ಸಲ್ಲಿಸಬಹುದು.

4.ವಿಮಾ ಕಂಪೆನಿಗಳಿಗೆ ಎಚ್ಚರಿಕೆ
ಕೊರೊನಾ ರೋಗಿಗಳಿಗೆ ಎಲ್ಲ ನೆಟ್‌ವರ್ಕ್‌ ಆಸ್ಪತ್ರೆಗಳಲ್ಲೂ ಕಿರಿಕಿರಿಯಿಲ್ಲದ ಚಿಕಿತ್ಸೆ ಸಿಗುವಂತಾಗಬೇಕು. ಇಲ್ಲವಾದರೆ ಕ್ರಮ ಜರಗಿಸ­ ಬೇಕಾದೀತು ಎಂದು ಈಗಾಗಲೇ ವಿಮಾ ಕಂಪೆನಿ ಗಳಿಗೆ ಐಆರ್‌ಡಿಎಐ ಎಚ್ಚರಿಸಿದೆ. ಆದಾಗ್ಯೂ ಕಿರಿಕಿರಿಯಾದರೆ ರೋಗಿಯ ಕಡೆಯ ವರು ಸ್ಥಳೀಯ ಆಡಳಿತಕ್ಕೆ ದೂರು ಸಲ್ಲಿಸಬಹುದು.

5.ಪ್ರಾಧಿಕಾರಕ್ಕೂ ಮೊರೆ
ಸ್ಥಳೀಯ ಮಟ್ಟದಲ್ಲಿಯೂ ರೋಗಿಗಳ ಸಮಸ್ಯೆ ಇತ್ಯರ್ಥ­ವಾಗ­ದಿದ್ದರೆ, ಪ್ರಾಧಿಕಾರಕ್ಕೂ ದೂರು ಸಲ್ಲಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ದೂರು ನೋಂದಣಿ ಹೇಗೆ?
[email protected] ಎಂಬ ಇ-ಮೇಲ್‌ ಐಡಿಗೆ ಅಥವಾ 155255 ಅಥವಾ 1800 4254 732 ಎಂಬ ಶುಲ್ಕ ರಹಿತ ಸಂಖ್ಯೆಗಳಿಗೆ ಕರೆ ಮಾಡಿ ದೂರನ್ನು ದಾಖಲಿಸಬಹುದು.
– ಇಲ್ಲವಾದಲ್ಲಿ, https://igms.irda.gov.in/ ಜಾಲತಾಣದಲ್ಲಿ ದೂರುದಾರರು ತಮ್ಮ ಅಧಿಕೃತ ಮಾಹಿತಿಗಳನ್ನು ನಮೂದಿಸುವ ಮೂಲಕ ತಮ್ಮನ್ನು ತಾವು ನೋಂದಾಯಿಸಿ, ಅನಂತರ ದೂರು ದಾಖಲಿಸಬಹುದು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.