ಬಿರುಬಿಸಿಲಿನ ಮಧ್ಯೆ ಪೊಲೀಸರ ಲಾಠಿ ಬಿಸಿ

ಬೆಳ್ಳಂಬೆಳಗ್ಗೆ ವಾಹನ ಸಮೇತ ರಸ್ತೆಗಿಳಿದವರಿಗೆ ಬಿತ್ತು ದಂಡ | ಮೊದಲ ದಿನ 584 ಕೇಸ್‌-569 ವಾಹನ ಜಪ್ತಿ

Team Udayavani, May 11, 2021, 9:54 AM IST

ujftyjtyt

ಬಾಗಲಕೋಟೆ: ಪ್ರತಿ ದಿನವೂ ಬೆಂಬಿಡದೇ ಕಾಡುತ್ತಿರುವ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದು, ಮೊದಲ ದಿನವಾದ ಸೋಮವಾರ ಬೆಳ್ಳಂಬೆಳಗ್ಗೆ ವಾಹನ ಸಮೇತ ರಸ್ತೆಗಿಳಿದವರಿಗೆ ಪೊಲೀಸರ ಬಿಸಿ ಕಾದಿತ್ತು.

ನಗರದ ಬಸವೇಶ್ವರ ವೃತ್ತ, ವಲ್ಲಭಬಾಯಿ ವೃತ್ತದಲ್ಲಿ ಕಿರಾಣಿ ಅಂಗಡಿ, ಒತ್ತು ಗಾಡಿಗಳಲ್ಲಿ ತರಕಾರಿ ಮಾರಾಟ ಶುರುವಾಗಿತ್ತು. ಬಹುತೇಕರು, ಹತ್ತು ಗಂಟೆಯ ವರೆಗೆ ಮಾರುಕಟ್ಟೆ ಆರಂಭ ಇರುತ್ತದೆ ಎಂಬ ಕಲ್ಪನೆಯಲ್ಲಿಯೇ ಬೈಕ್‌, ಕಾರು ಸಮೇತ ಬಂದಿದ್ದರು. ಈ ವೇಳೆ ವಾಹನ, ಬೈಕ್‌ ತಡೆದ ಪೊಲೀಸರು ಕೆಲವರಿಗೆ ಲಾಠಿ ಬಿಸಿ ತೋರಿಸಿದರೆ, ಇನ್ನೂ ಕೆಲವರ ವಾಹನ, ಬೈಕ್‌ ಜಪ್ತಿ ಮಾಡಿ, ದಂಡ ವಿಧಿಸಿದರು.

ಹಳ್ಳಿ ಹಾಲು ಮಾರುವವರಿಗೆ ನಿರ್ಬಂಧ: ನಿತ್ಯವೂ ಬಾಗಲಕೋಟೆ ಹಾಗೂ ಬಾದಾಮಿ ತಾಲೂಕಿನ ಹಲವು ಹಳ್ಳಿಗಳ ಜನರು ಬೈಕ್‌ಗೆ ನಾಲ್ಕಾರು ಕ್ಯಾನ್‌ ಕಟ್ಟಿಕೊಂಡು, ನಗರಕ್ಕೆ ಬಂದು ಹಾಲು ಮಾರಾಟ ಮಾಡುವುದು ವಾಡಿಕೆ. ಗದ್ದನಕೇರಿ, ಛಬ್ಬಿ, ದೇವನಾಳ, ಕಗಲಗೊಂಬ, ಸಂಶಿ, ಹೊನ್ನಾಕಟ್ಟಿ, ಬೇವಿನಮಟ್ಟಿ, ಸಂಗಮ ಕ್ರಾಸ್‌ ಹೀಗೆ ಹಲವೆಡೆಯಿಂದ ಹಾಲು ಮಾರುವವರು ನಗರಕ್ಕೆ ಬರುತ್ತಾರೆ. ಆದರೆ, ಲಾಕಡೌನ್‌ ಆರಂಭಗೊಂಡ ಸೋಮವಾರ, ವಿದ್ಯಾಗಿರಿ ಸಹಿತ ಹಲವೆಡೆ ಹಳ್ಳಿಯಿಂದ ಬೈಕ್‌ ಮೇಲೆ ಬಂದಿದ್ದ ಮಾರಾಟಗಾರರನ್ನು ತಡೆಯಲಾಯಿತು. ನೀವು ಹಾಲು ಮನೆ ಮನೆಗೆ ಹೋಗಿ ಕೊಡಲು ನಮ್ಮ ತೊಂದರೆ ಇಲ್ಲ. ಆದರೆ, ವಾಹನ-ಬೈಕ್‌ ಮೇಲೆ ಹೋಗುವಂತಿಲ್ಲ. ನೀವು ನಡೆದುಕೊಂಡೇ ಹೋಗಬೇಕು ಎಂದು ಸೂಚನೆ ನೀಡಿದರು. ಹೀಗಾಗಿ ಹಾಲು ಮಾರುವವರು, ಬೈಕ್‌ ಸಮೇತ ಹಳ್ಳಿಯತ್ತ ಹೊರಟರು.

ಮೊದಲ ದಿನ 584 ಕೇಸ್‌-569 ವಾಹನ ಜಪ್ತಿ: ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ, ರಸ್ತೆಗಿಳಿದ ವಾಹನ, ಬೈಕ್‌ ಹಾಗೂ ನಾಲ್ಕು ಚಕ್ರ ಮೇಲ್ಪಟ್ಟ ವಾಹನಗಳನ್ನು ಪೊಲೀಸರು ಸೀಜ್‌ ಮಾಡಿದರು. ಜಿಲ್ಲೆಯ 21 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ರಬಕವಿ-ಬನಹಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಂದರೆ 50 ಬೈಕ್‌ ಸೀಜ್‌ ಮಾಡಲಾಗಿದೆ. ಜಮಖಂಡಿನಗರ ಠಾಣೆ-67 ಕೇಸ್‌-60 ಬೈಕ್‌, 7 ಕಾರು ಸೀಜ್‌ ಮಾಡಿದ್ದು, ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ 15 ಪ್ರಕರಣ ದಾಖಲಿಸಿ, 13 ಬೈಕ್‌, 2 ಕಾರು ವಶಕ್ಕೆ ಪಡೆಯಲಾಗಿದೆ. ಸಾವಳಗಿ ಠಾಣೆಯಡಿ 42 ಕೇಸ್‌ ಹಾಕಿದ್ದು 41 ಬೈಕ್‌, 1 ಕಾರು, ಬನಹಟ್ಟಿ ಠಾಣೆಯಡಿ 50 ಕೇಸ್‌ ದಾಖಲಿಸಿ, 50ಬೈಕ್‌ ವಶಪಡಿಸಿಕೊಳ್ಳಲಾಗಿದೆ. ತೇರದಾಳ ಠಾಣೆಯಡಿ 34 ಕೇಸ್‌ ಹಾಕಿದ್ದು, 34 ಬೈಕ್‌ ವಶಕ್ಕೆ ಪಡೆಯಲಾಗಿದೆ. ಮುಧೋಳ ಠಾಣೆಯಡಿ 42 ಬೈಕ್‌ ವಶಕ್ಕೆ ಪಡೆದು 42 ಕೇಸ್‌ ಹಾಕಿದ್ದು, ಮಹಾಲಿಂಗಪುರ ಠಾಣೆಯಡಿ 22 ಬೈಕ್‌ ವಶಕ್ಕೆ ಪಡೆದು, 22 ಕೇಸ್‌ ದಾಖಲಿಸಲಾಗಿದೆ. ಲೋಕಾಪುರ ಠಾಣೆಯಡಿ 22 ಕೇಸ್‌-22 ಬೈಕ್‌, ಬೀಳಗಿ 17 ಬೈಕ್‌, ಕಲಾದಗಿ-20 ಬೈಕ್‌, ಬಾದಾಮಿ-45 ಬೈಕ್‌, 2 ಇತರೆ ವಾಹನ, ಕೆರೂರ-15, ಗುಳೇದಗುಡ್ಡ-19 ಬೈಕ್‌, ಹುನಗುಂದ-14 ಬೈಕ್‌, 1 ಕಾರು-15 ಕೇಸ್‌ ದಾಖಲು ಮಾಡಲಾಗಿದೆ. ಇಳಕಲ್ಲ ನಗರ ಠಾಣೆಯಡಿ 35 ಬೈಕ್‌, ಗ್ರಾಮೀಣ ಠಾಣೆಯಡಿ 18 ಬೈಕ್‌, ಅಮೀನಗಡ-20 ಬೈಕ್‌, ಬಾಗಲಕೋಟೆ ನಗರ-8, ಗ್ರಾಮೀಣ-24, ನವನಗರ-34 ಬೈಕ್‌ ಹಾಗೂ ಬಾಗಲಕೋಟೆ ಸಂಚಾರಿ ಠಾಣೆ-20 ಬೈಕ್‌ ಸೇರಿ ಒಟ್ಟು 584 ಪ್ರಕರಣ ದಾಖಲಿಸಿ, 569 ಬೈಕ್‌, 4 ಇತರೆ ವಾಹನ ವಶಕ್ಕೆ ಪಡೆಯಲಾಗಿದೆ.

ಕಟ್ಟುನಿಟ್ಟಿನ ಸೂಚನೆ: ಸರ್ಕಾರದ ಆದೇಶದ ಪ್ರಕಾರ, ಯಾವುದೇ ಕಾರಣಕ್ಕೂ ಜನರು ವಾಹನ ಸಮೇತ ರಸ್ತೆಗಿಳಿಯುವಂತಿಲ್ಲ. ತುರ್ತು ಸಂದರ್ಭ, ವೈದ್ಯಕೀಯ ಸಿಬ್ಬಂದಿಗೆ ಮಾತ್ರ ವಿನಾಯ್ತು ಇದ್ದು, ಯಾರೇ ರಸ್ತೆಗಿಳಿದರೂ ವಾಹನ ಸೀಜ್‌ ಮಾಡಲಾಗುವುದು. ಕೊರೊನಾ ನಿಯಂತ್ರಣಕ್ಕೆ ಜಿಲ್ಲೆಯ ಜನರು ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಹುಟ್ಟೂರಿಗೆ ಬಂದ ಯುವತಿ

Lok Sabha Election: ಮತ ಚಲಾಯಿಸಲು ಜರ್ಮನಿಯಿಂದ ಬನಹಟ್ಟಿಗೆ ಬಂದ ಯುವತಿ

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ

Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ‌ ಸಾವು

Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ‌ ಸಾವು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Ram temple is of no use: SP leader Yadav controversy

Lucknow; ಕೆಲಸಕ್ಕೆ ಬಾರದ ರಾಮ ಮಂದಿರ: ಎಸ್ಪಿ ನಾಯಕ ಯಾದವ್‌ ವಿವಾದ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

Patanjali case; Supreme directive to self-declare before advertisement

Patanjali case; ಜಾಹೀರಾತಿಗೆ ಮುನ್ನ ಸ್ವ ಘೋಷಣೆ ಮಾಡಲು ಸುಪ್ರೀಂ ಸೂಚನೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.