ಕೆ.ಬಿ.ಶಾಣಪ್ಪ ನಿಧನಕ್ಕೆ ಕಾಂಗ್ರೆಸ್ ಶ್ರದ್ದಾಂಜಲಿ
Team Udayavani, May 11, 2021, 10:01 AM IST
ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ. ಶಾಣಪ್ಪರವರ ನಿಧನಕ್ಕೆ ಸೋಮವಾರ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆ.ಬಿ. ಶಾಣಪ್ಪರವರ ಅಗಲಿಕೆಯಿಂದ ಜಿಲ್ಲೆಯ ಒಬ್ಬ ಹಿರಿಯ, ಅನುಭವಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಹೇಳಿದರು. ಹಿರಿಯ ನಾಯಕನ ನಿಧನವು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದಿಂದ ದುಃಖದ ಮಡಲಲ್ಲಿರುವ ಕುಟುಂಬ ವರ್ಗ ಮತ್ತು ಅಭಿಮಾನಿ ಬಳಗದವರಿಗೆ ಭಗವಂತ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಅವರು ಸಂತಾಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮುಖಂಡರಾದ ಲಿಂಗರಾಜ ತಾರಫೈಲ್, ಈರಣ್ಣ ಝಳಕಿ, ಭಿಮು ಹಿರಾಪುರ, ಮಹೇಶ್ವರಿ ವಾಲಿ, ಚಂದ್ರಿಕಾ ಪರಮೇಶ್ವರ, ಸಿದ್ದಾರ್ಥ ಕೋರವಾರ ಸೇರಿ ಅನೇಕರು ಇದ್ದರು.