Kasaragod ಲಕ್ಷಾಂತರ ರೂ. ವಂಚನೆ ಪ್ರಕರಣ; ಆರೋಪಿಗಳ ಬಂಧನ
Team Udayavani, May 7, 2024, 12:49 AM IST
ಕಾಸರಗೋಡು: ಆನ್ಲೈನ್ ಮೂಲಕ 31,92,785 ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಮಲಪ್ಪುರಂ ತಾನೂರು ಪುದಿಯ ಕಡಪ್ಪುರದ ಅಂಜುಡಿಯ ಮುಕ್ಕಾಡಿಲ್ ಹೌಸ್ನ ರಿಸಾನ್ ಮುಬಾಶೀರ್ (23), ತಾನೂರು ಪುರಂಞಿ ಪುರಕ್ಕಲ್ನ ಪಿ.ಪಿ. ಅರ್ಸನ್ ಮೋನ್ (24), ಪರ್ಯಾಪುರಂ ಮೋಯಿಕ್ಕಲ್ ಅಟೋಂಬುರ ಫಾರೂಕ್ಪಳ್ಳಿ ಎಂ. ಅಸೀಸ್ (31) ಮತ್ತು ಕೋರ್ಮನ್ ಕಡಪ್ಪುರಂ ಚೆಕ್ಕಿಡಂಡೆ ಪುರಯಿಲ್ ಸಿ.ಪಿ. ತಾಜುದ್ದೀನ್ ಯಾನೆ ಸಾಜು (40) ಬಂಧಿತರು.