ರಾಜ್ಯದಲ್ಲಿ ಸದ್ಯ ಮೇವಿನ ಕೊರತೆ ಇಲ್ಲ : ಸಚಿವ ಪ್ರಭು ಚವ್ಹಾಣ್
Team Udayavani, May 17, 2021, 7:19 PM IST
ಬೆಂಗಳೂರು : ರಾಜ್ಯದಲ್ಲಿ ಮೇವಿನ ಕೊರತೆ ಎದುರಾಗದಂತೆ ಪಶುಸಂಗೋಪನೆ ಇಲಾಖೆಯ ಎಲ್ಲ ಉಪನಿರ್ದೇಶಕರಿಗೆ ಸೂಚಿಸಲಾಗಿದ್ದು ಯಾವುದೇ ಜಿಲ್ಲೆಯಲ್ಲಿ ಮೇವಿನ ಅಭಾವ ಎದುರಾದರೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ರೈತರಿಗೆ ಮೇವಿನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ 114 ಲಕ್ಷ ದನ ಮತ್ತು ಎಮ್ಮೆಗಳು, 172 ಲಕ್ಷ ಕುರಿ ಮೇಕೆಗಳಿದ್ದು ಸುಮಾರು 167 ಲಕ್ಷ ಮೆಟ್ರಿಕ್ ಟನ್ ಮೇವು 31 ವಾರಗಳಿಗೆ ಆಗುವಷ್ಟು ಲಭ್ಯವಿದೆ. ದಿನ ಒಂದಕ್ಕೆ ಮೇವು ಅವಲಂಭಿತ ದೊಡ್ಡ ಹಾಗೂ ಸಣ್ಣ ಗಾತ್ರದ ಜಾನುವಾರುಗಳು ಸರಾಸರಿ 0.5 ಕೆ.ಜಿಯಿಂದ 6 ಕೆ.ಜಿ ಆಹಾರ ಬಳಕೆಯ ಸಾಮರ್ಥ್ಯಯಿದ್ದು ಒಂದು ವಾರಕ್ಕೆ ಸುಮಾರು 5.41 ಲಕ್ಷ ಮೆಟ್ರಿಕ್ ಟನ್ ಮೇವು ಬಳಕೆ ಆಗುತ್ತದೆ. ಅಲ್ಲದೇ ರೈತರಿಗೆ ಮತ್ತು ಜಾನುವಾರು ಸಾಕಣೆದಾರರಿಗೆ ರಾಜ್ಯದಲ್ಲೆ ಒಟ್ಟು 1,33,971 ಮೇವಿನ ಬೀಜದ ಮಿನಿ ಕಿಟ್ ಗಳನ್ನು ಸಹ 2020-21ನೇ ಸಾಲಿನಲ್ಲಿ ವಿತರಿಸಲಾಗಿದೆ.
ಇದನ್ನೂ ಓದಿ :ಕೋವಿಶೀಲ್ಡ್: ಕೆಲವರಲ್ಲಷ್ಟೇ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ : ಕೇಂದ್ರ
ಮೇವಿನ ದರ :
ರಾಜ್ಯದಲ್ಲಿ ಒಣ ಮೇವಿನ ದರ ಪ್ರತಿ ಟನ್ ಗೆ ರೂ. 5000 ರಿಂದ ರೂ. 6000 ಇದೆ. ಹಸಿ ಮೇವು ರೂ.4000. ಪಶು ಆಹಾರ ಸರಾಸರಿ ರೂ.21,000 ಪ್ರತಿ ಟನ್ ಹಾಗೂ ಖನಿಜ ಮಿಶ್ರಣ ರೂ.100 ರಿಂದ ರೂ.120 ಪ್ರತಿ ಕೆ.ಜೆ.ಗೆ ಲಭ್ಯವಿದೆ.
ಜಿಲ್ಲಾವಾರು ಮೇವಿನ ಲಭ್ಯತೆ :
ಬೆಂಗಳೂರು ನಗರ 25, ಬೆಂಗಳೂರು ಗ್ರಾ 21, ರಾಮನಗರ 24, ಕೋಲಾರ 33, ಚಿಕ್ಕಬಳ್ಳಾಪುರ 33, ತುಮಕೂರು 36, ಚಿತ್ರದುರ್ಗ 34, ದಾವಣಗೆರೆ 33, ಶಿವಮೊಗ್ಗ 16, ಮೈಸೂರು 18, ಚಾಮರಾಜನಗರ 23, ಮಂಡ್ಯ 33, ಕೊಡಗು 18, ದಕ್ಷಿಣ ಕನ್ನಡ 30, ಉಡಪಿ 22, ಚಿಕ್ಕಮಗಳೂರು 32, ಹಾಸನ 27, ಬೆಳಗಾವಿ 31, ವಿಜಯಪುರ 29, ಧಾರವಾಡ 43, ಗದಗ 29, ಹಾವೇರಿ 63, ಉತ್ತರಕನ್ನಡ 13, ಬಾಗಲಕೋಟೆ 36, ಕಲಬುರಗಿ 54, ಯಾದಗಿರಿ 27, ಬೀದರ್ 28, ರಾಯಚೂರು 36, ಬಳ್ಳಾರಿ 48 ಹಾಗೂ ಕೊಪ್ಪಳ 17. ಕನಿಷ್ಟ ಪ್ರಮಾಣದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಮಳೆ ಬಂದಿರುವುದರಿಂದ ಹಸಿ ಮೇವು ಸಹ ಲಭ್ಯವಿದೆ ಎಂದು ತಿಳಿದುಬಂದಿದೆ.
ಯಾವುದೇ ಜಿಲ್ಲೆಯಿಂದ ಮೇವಿನ ಕೊರತೆ ವರದಿಯಾಗಿಲ್ಲ ಆದರೂ ಸಹ ಪಶುಸಂಗೋಪನೆ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಜಾನುವಾರು ಸಾಕಣೆದಾರರಿಗೆ ಹಾಗೂ ರೈತರಿಗೆ ಮೇವಿನ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
MUST WATCH
ಹೊಸ ಸೇರ್ಪಡೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್