ಕೋವಿಶೀಲ್ಡ್: ಕೆಲವರಲ್ಲಷ್ಟೇ ರಕ್ತಸ್ರಾವ, ರಕ್ತ ಹೆಪ್ಪುಗಟ್ಟುವಿಕೆ ಕಾಣಿಸಿಕೊಂಡಿದೆ : ಕೇಂದ್ರ


Team Udayavani, May 17, 2021, 7:03 PM IST

AEFI committee’s report reveals bleeding, clotting cases from AstraZeneca Covid-19 vaccine minuscule in India

ನವ ದೆಹಲಿ : ದೇಶದಲ್ಲಿ ಕೋವಿಡ್ ಎರಡನೇ ಅಲೆ ಭಾರಿ ಆತಂಕವನ್ನು ಸೃಷ್ಟಿ ಮಾಡಿದ್ದು ಒಂದೆಡೆಯಾದರೇ, ಇನ್ನೊಂದೆಡೆ ಲಸಿಕೆಯ ಬಗ್ಗೆ ಭಯ. ಲಸಿಕೆಯನ್ನು ಸ್ವೀಕರಿಸಿದರೇ ಅಡ್ಡ ಪರಿಣಾಮಗಳು ಉಂಟಾಗುತ್ತದೆಯಾ..? ರಕ್ತ ಹೆಪ್ಪುಗಟ್ಟುತ್ತದಯೇ ಎಂಬಿತ್ಯಾದಿ ಪ್ರಶ್ನೆಗಳು ಇನ್ನೂ ಸಾರ್ವಜನಿಕರಲ್ಲಿವೆ.

ಈ ಊಹಾಪೋಹಗಳ ನಡುವೆ ಕೋವಿಡ್ ಸೋಂಕಿನ ವಿರುದ್ಧ ನೀಡಲಾದ ಕೋವಿಶೀಲ್ಡ್ ಲಸಿಕೆಯ ಪ್ರತಿ ಹತ್ತು ಲಕ್ಷ ಡೋಸ್‌ ಪೈಕಿ 0.61 ಡೋಸ್ ನಲ್ಲಿ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವದ ಸಮಸ್ಯೆಗಳು ಭಾರತದಲ್ಲಿ ಕಂಡುಬದಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು(ಸೋಮವಾರ, ಮೇ.17) ತಿಳಿಸಿದೆ.

ರೋಗನಿರೋಧಕ (ಎ ಇ ಎಫ್‌ ಐ – Adverse event following immunization) ಸಮಿತಿಯ ನಂತರ ರಾಷ್ಟ್ರೀಯ ಪ್ರತಿಕೂಲ ಸಮಸ್ಯೆಗಳು ಸಲ್ಲಿಸಿದ ವರದಿಯನ್ನು ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವಾಲಯ ಈ ವಿಷಯವನ್ನು ತಿಳಿಸಿದೆ.

ಇದನ್ನೂ ಓದಿ : ಬಬಲೇಶ್ವರ ಕ್ಷೇತ್ರದ ಕಾರಜೋಳ, ತಿಕೋಟಾ ಪಟ್ಟಣದಲ್ಲಿ ಕೋವಿಡ್ ಕೇರ್ ಕೇಂದ್ರ: ಎಂ.ಬಿ.ಪಾಟೀಲ

ಎ ಇ ಎಫ್‌ ಐ ಸಮಿತಿಯು 498 ಗಂಭೀರ ಮತ್ತು ತೀವ್ರವಾದ ಘಟನೆಗಳ ಆಳವಾದ ಪ್ರಕರಣದ ಪರಿಶೀಲನೆಯನ್ನು ಪೂರ್ಣಗೊಳಿಸಿದ್ದು, ಆ ಪೈಕಿ 26 ಪ್ರಕರಣಗಳು ಸಂಭಾವ್ಯ ಥ್ರಂಬೋಎಂಬೊಲಿಕ್ (ರಕ್ತನಾಳದಲ್ಲಿ ಹೆಪ್ಪುಗಟ್ಟುವಿಕೆ) ಎಂದು ವರದಿಯಾಗಿದೆ.

ಕೋವಿಶೀಲ್ಡ್ ಲಸಿಕೆ ಪಡೆದವರಲ್ಲಿ 10 ಲಕ್ಷ ಡೋಸ್ ಗಳಲ್ಲಿ 0.61 ಪ್ರಕರಣಗಳು ಈ ರೀತಿ ವರದಿ ಆಗಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕೃತ ಪ್ರಕಟಣೆಯಲ್ಲಿ ಹೇಳಿದೆ.

ಕೋವಿಶೀಲ್ಡ್ ಹೆಸರಿನಲ್ಲಿ ಉತ್ಪಾದನೆಯಾಗುವ ಅಸ್ಟ್ರಾಜೆನೆಕಾ-ಆಕ್ಸ್‌ ಫರ್ಡ್ ಲಸಿಕೆ ಬಗ್ಗೆ ಮಾರ್ಚ್ 11, 2021 ರಂದು ಲಸಿಕೆ ಅಭಿಯಾನದ ನಂತರದ ‘ಎಂಬಾಲಿಕ್ ಮತ್ತು ಥ್ರಂಬೋಟಿಕ್ ಪ್ರಕರಣಗಳ’ ಕುರಿತು ಕೆಲವು ದೇಶಗಳಲ್ಲಿ ಎಚ್ಚರಿಕೆಗಳನ್ನು ನೀಡಲಾಗಿತ್ತು.

ಜಾಗತಿಕ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕೂಲ ಸಮಸ್ಯೆಗಳ ಆಳವಾದ ವಿಶ್ಲೇಷಣೆ ನಡೆಸಲು ಕೇಂದ್ರವು ನಿರ್ಧರಿಸಿತ್ತು.

ಭಾರತದಲ್ಲಿ ಕೋವಿಡ್ 19 ಲಸಿಕೆ ಅಭಿಯಾನದ ನಂತರ ರಕ್ತಸ್ರಾವ ಹಾಗೂ ಹೆಪ್ಪುಗಟ್ಟುವಿಕೆ ಪ್ರಕರಣಗಳು ಕಡಿಮೆ ಮತ್ತು ದೇಶದಲ್ಲಿ ಈ ಪರಿಸ್ಥಿತಿಗಳ ರೋಗನಿರ್ಣಯದ ನಿರೀಕ್ಷೆಗೆ ಅನುಗುಣವಾಗಿರುತ್ತವೆ ಎಂದು ರಾಷ್ಟ್ರೀಯ ಎಇಎಫ್ಐ  ಸಮಿತಿಯು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಇನ್ನು, ರಾಷ್ಟ್ರೀಯ ಎಇಎಫ್‌ಐ ಸಮಿತಿ 2021 ರ ಏಪ್ರಿಲ್ 3 ರ  ವೇಳೆಗೆ  ಕೋವಿಶೀಲ್ಡ್ 68,650,819 ಹಾಗೂ ಕೊವಾಕ್ಸಿನ್ 6,784,562 ಲಸಿಕೆಯ ಡೋಸ್ ನೀಡಲಾಗಿತ್ತು. ಅಂದಾಜು ಕನಿಷ್ಠ 7.5 ಕೋಟಿ (75,435,381) ಲಸಿಕೆ ಡೋಸ್ ನೀಡಲಾಗಿತ್ತು.

ಕೋವಿಡ್  19 ಲಸಿಕೆ ಆಬಿಯಾನವನ್ನು ಜನವರಿ 16, 2021 ರಂದು ದೇಶದಾದ್ಯಂತ  ಪ್ರಾರಂಭಿಸಿದಾಗಿನಿಂದ, ದೇಶದ 753 ಜಿಲ್ಲೆಗಳಲ್ಲಿ 684 ರಿಂದ ಕೋ-ವಿನ್ ಮೂಲಕ ಕನಿಷ್ಠ 23,000 ಪ್ರತಿಕೂಲ ಸಮಸ್ಯೆಗಳು ವರದಿಯಾಗಿವೆ. ಇವುಗಳಲ್ಲಿ ವರದಿಯ ಪ್ರಕಾರ ಕೇವಲ 700 ಪ್ರಕರಣಗಳು ಪ್ರತಿ ಹತ್ತು ಲಕ್ಷ ಡೋಸ್‌ ಗೆ 9.3 ಪ್ರಕರಣಗಳ ದರದಲ್ಲಿ ಗಂಭೀರ ಮತ್ತು ತೀವ್ರ ಸ್ವರೂಪದಲ್ಲಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಕೋವಿಡ್ ಹೆಚ್ಚಳ: ಮೇ 31ರವರೆಗೆ ಕೋವಿಡ್ 19 ಕರ್ಫ್ಯೂ ವಿಸ್ತರಣೆ: ಆಂಧ್ರಪ್ರದೇಶ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.