ಸಸಿಹಿತ್ಲುವಿಗೆ 50 ಕೋಟಿ. ರೂ. ವಿಶೇಷ ಪ್ಯಾಕೇಜ್ ಘೋಷಿಸಿ : ಅಭಯಚಂದ್ರ
Team Udayavani, May 17, 2021, 8:39 PM IST
ಸಸಿಹಿತ್ಲು : ಅಂತಾರಾಷ್ಟ್ರೀಯವಾಗಿ ಬೆಳಕಿಗೆ ಬಂದಿರುವ ಸಸಿಹಿತ್ಲು ಮುಂಡ ಬೀಚ್ ಕಡಲಿಗೆ ಸೇರಿ ಸುಮಾರು 20 ಕೋ.ರೂ. ನಷ್ಟವಾಗಿದ್ದು ಕಡಲ ತೀರದಲ್ಲಿನ ಮನೆಗಳು ಸಹ ಅಪಾಯದ ಅಂಚಿನಲ್ಲಿದೆ, ಇದಕ್ಕಾಗಿ ರಾಜ್ಯ ಸರಕಾರವು 50 ಕೋ.ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು, ಕಾಂಗ್ರೆಸ್ ಪಕ್ಷವು ಜನರ ಸಂಕಷ್ಟಕ್ಕೆ ಮುಕ್ತವಾಗಿ ನೆರವು ನೀಡುತ್ತಿದ್ದು, ಇದರಲ್ಲಿ ರಾಜಕೀಯವಿಲ್ಲ ಬದಲಾಗಿ ಜನರ ಹಕ್ಕನ್ನು ಸರಕಾರದ ಮುಂದೆ ಮಂಡಿಸಲು ಪರೋಕ್ಷವಾಗಿ ನೆರವಾಗುತ್ತೇವೆ ಎಂದು ಮಾಜಿ ಸಚಿವ ಕ.ಅಭಯಚಂದ್ರ ಜೈನ್ ಹೇಳಿದರು.
ಸಸಿಹಿತ್ಲುವಿನ ಬೀಚ್ ಪ್ರದೇಶ ಹಾಗೂ ಕೊಳುವೈಲ್ನ ಕೃಷಿ ಪ್ರದೇಶಕ್ಕೆ ಹಾನಿಯಾಗಿರುವ ಪ್ರದೇಶಕ್ಕೆ ಸೋಮವಾರ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವಿಶೇಷ ನಿಯೋಗದ ಮೂಲಕ ಪರಿಶೀಲನೆ ನಡೆಸಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಕ್ಷೇತ್ರದ ಉಸ್ತುವಾರಿ ಮಿಥುನ್ ರೈ, ಕೆಪಿಸಿಸಿ ವಕ್ತಾರ ಎಚ್. ವಸಂತ ಬೆರ್ನಾಡ್, ಕೆಪಿಸಿಸಿ ಹಿಂದುಳಿದ ವಗ್ದ ರಾಜ್ಯ ಕಾರ್ಯದರ್ಶಿ ಪ್ರವೀಣ್ ಬೊಳ್ಳೂರು, ಮೂಲ್ಕಿ ಬ್ಲಾಕ್ ಅಧ್ಯಕ್ಷ ಧನಜಂಯ ಮಟ್ಟು, ಯುವ ಅಧ್ಯಕ್ಷ ಅಶೋಕ್ ಪೂಜಾರ್, ಮೂಲ್ಕಿ ನ.ಪಂ. ಸದಸ್ಯ ಯೋಗೀಶ್ ಕೋಟ್ಯಾನ್, ಪುತ್ತುಬಾವ, ಹಕೀಂ ಕಾರ್ನಾಡು, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಚಂದ್ರಕುಮಾರ್, ಧನ್ರಾಜ್ ಕೋಟ್ಯಾನ್, ಅಬ್ದುಲ್ ಅಜೀಜ್, ಅನಿಲ್ ಪೂಜಾರಿ, ಸತೀಶ್ ಕೋಟ್ಯಾನ್, ಪ್ರಮುಖರಾದ ಲೋಕೇಶ್ ಕೊಟ್ಯಾನ್, ನವೀನ್ ಕೋಟ್ಯಾನ್ ಸಸಿಹಿತ್ಲು ಹಾಗೂ ಕೊಳುವೈಲಿನ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ
MUST WATCH
ಹೊಸ ಸೇರ್ಪಡೆ
Madhya Pradesh; ರಾಹುಲ್ ಗಾಂಧಿ ಭೇಟಿ ನಡುವೆ, ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕ!
Kodaikanal – Ooty ಪ್ರವಾಸಕ್ಕೆ ಇ-ಪಾಸ್ ಕಡ್ಡಾಯ: ಹೈಕೋರ್ಟ್
Muslim ಉತ್ತರಾಧಿಕಾರಕ್ಕೆ ಜಾತ್ಯತೀತ ಕಾಯ್ದೆ ಜಾರಿ: ಸುಪ್ರೀಂಕೋರ್ಟ್ ಚರ್ಚೆ
“Siddaramaiah- H.D. Revanna ನಡುವೆ ಒಪ್ಪಂದಕ್ಕೆ ಎಫ್ಐಆರ್ ಹಾಕಲಿಲ್ಲವೇ?’
Fazal ur Rehman; ಭಾರತ ಸೂಪರ್ಪವರ್, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ