ಮಳೆ ಎಂಬ ಪ್ರಕೃತಿಯ ಅತ್ಯುನ್ನತ ಕೊಡುಗೆ


Team Udayavani, Jun 5, 2021, 3:53 PM IST

ಮಳೆ ಎಂಬ ಪ್ರಕೃತಿಯ ಅತ್ಯುನ್ನತ ಕೊಡುಗೆ

ಮಳೆ ಎಂದರೆ ಸಂಭ್ರಮ. ಆತಂಕ, ಹಸುರು ಹಾಡಿನ ಚರಣ. ಮಳೆ ಬೀಳುವಾಗ ಗಾಳಿ ನವಿರಾಗಿ ಬೀಸಿದರೆ ಮಳೆ ನಿಂತು ಸುರಿಯುತ್ತದೆ. ಹೊಲ, ಗದ್ದೆಗಳು ನೆನೆಯುತ್ತವೆ. ಗಾಳಿ ಜೋರಾದರೆ ಹನಿಗಳು ಮೈಮೇಲೆ ಸೂಸುತ್ತವೆ. ಮಳೆ ಬೀಳುವಾಗ ಪ್ರಕೃತಿ ಹಸುರು ಹಾಸಿಗೆಯಿಂದ ಹಾಸಿದಂತೆ, ಮಳೆ ಬರುವ ಮುಂಚೆ, ಕಪ್ಪೆಗಳು ಮೇಘರಾಜನನ್ನು ಕರೆಯುತ್ತವೆ. ಇಬ್ಬನಿಯ ತಿಳಿ ಗಾಳಿಯಲ್ಲಿ ನಮ್ಮ ಮನಸ್ಸು ಬಾಚಿದಂತೆ, ಆಹಾ !! ಆಹಾ !! ಈ ಮಳೆಯ ಬಗ್ಗೆ ಎಷ್ಟು ವರ್ಣಿಸಿದರೂ ಸಾಲದು.

ಮೋಡ ಕವಿದಾಗ, ಗುಡುಗು ಕೇಳಿಸಿದಾಗ, ಮಿಂಚು ಸಿಡಿದಾಗ, ಒಮ್ಮೆಲೇ ಮನಸ್ಸು ತಳಮಳಗೊಳ್ಳುತ್ತದೆ. ವಿದ್ಯುತ್‌ ಕಣ್ಮರೆಯಾಗುತ್ತದೆ. ಕತ್ತಲು ಕವಿದು, ಮಳೆಯು ತನ್ನ ಗತಿಯಲ್ಲಿ ಸುರಿಯುತ್ತಿರುವಾಗ ನಮ್ಮೂರಿನಲ್ಲಿ ಗಾಳ ಹಿಡಿದುಕೊಂಡು ನದಿಗಳತ್ತ ಪ್ರಯಾಣ.

ಮಳೆಯಲ್ಲಿ ನೆನೆಯುದೆಂದರೆ ಪ್ರಕೃ ತಿಯ ಜತೆಗೆ ಒಂದಾಗುವ ಕ್ರಮ. ಮಳೆಯಲ್ಲಿ ನೆನೆಯುವುದೇ ಅದ್ಭುತ ಅನುಭವ. ನಾನಂತೂ ಮಳೆ ಸುರಿಯಲು ಆರಂಭಿಸಿದರೆ ನಮ್ಮ ಗದ್ದೆ ಬಯಲು ಪ್ರದೇಶದಲ್ಲಿ ಕುಣಿದು ಕುಪ್ಪಳಿಸಲು ಶುರುಮಾಡುತ್ತೇನೆ. ಮಳೆಯ ಹನಿಗಳಲ್ಲಿ, ಪ್ರಕೃತಿ ಜತೆ ಆನಂದಿಸುವುದು ಸ್ವರ್ಗ. ಸಿನೆಮಾದಲ್ಲಿ ಮಾತ್ರ ನೋಡಿ ಖುಷಿಪಡುತ್ತಿದ್ದೆವು. ಆದರೆ ನಿಜವಾದ ಸ್ವರ್ಗ ನಮ್ಮ ಸುತ್ತಮುತ್ತಲಿನ ಪ್ರಕೃತಿಯಲ್ಲಿಯೇ ಇದೆ.

ಮಳೆಗಾಲದ ಆರಂಭದಲ್ಲಿ ಶಾಲೆ ಕಾಲೇಜಿನ ಬಾಗಿಲು ತೆರೆಯುತ್ತವೆ. ವಿದ್ಯಾರ್ಥಿಗಳು ಮೆಲ್ಲನೆ ಬರುತ್ತಿರುವ ಮಳೆಯ ಜತೆ, ಯಾವುದೋ ಮೂಲೆಯಲ್ಲಿ ಬಿದ್ದಿರುವ ಕಳೆದ ವರ್ಷದ ಕೊಡೆ ಬಿಡಿಸಿ ಹೋಗುವ ಸಂದರ್ಭ. ಮಳೆ ಜೋರಾಗಿ ಸುರಿದರೆ ಶಾಲೆಗಳಿಗೆ ರಜೆ. ವಿದ್ಯಾರ್ಥಿಗಳ ಪಾಲಿಗೆ ಮಳೆಯೇ ದೇವರು. ಮಳೆ ಜೋರಾಗಿ ಸುರಿದರೆ ಬೆಳಗ್ಗೆ ಬಂದಿರುವ ನೆಂಟರು ಸಂಜೆ ಉಳಿಯುವುದಿಲ್ಲ ಎಂಬ ಗಾದೆಗಳು ಇವೆ.

ಬರಡಾದ ಭೂಮಿಯಲ್ಲಿ ರೈತನೋರ್ವ ತನ್ನ ಕೈಯನ್ನು ತಲೆಮೇಲೆ ಇಟ್ಟು ಮಳೆರಾಯನನ್ನು ಕರೆಯುವ ಕ್ಷಣ. ಒಂದೇ ಸಮನೆ ಬರುವ ಮಳೆಯ ಜತೆಗೆ, ರೈತ ತನ್ನ ಕಣ್ಣೀರಿನ ಮುಖದಲ್ಲಿ, ಇಡೀ ದೇಹವನ್ನೇ ನೀರಲ್ಲಿ ನೆನೆಸಿ ಗದ್ದೆಯಲ್ಲಿ ಭತ್ತ ಬಿತ್ತುವ ಸಮಯ. ಇಳಿ ಸಂಜೆಯ ತಿಳಿ ಮಳೆಯಲ್ಲಿ, ಮೈ ನಡುಗುವ ಚಳಿ. ಚಳಿಗೆ ಒಂದು ಬಿಸಿ ಬಿಸಿ ಕಣ್ಣ ಚಾ (Black Tea) ಈ ಮಳೆಯ ಸುಂದರ ಕ್ಷಣ ಅನುಭವಿಸುವುದೇ ಸ್ವರ್ಗ.

ಈ ಭೂಮಿಯ ಮೇಲೆ ಎಲ್ಲವೂ ಮಳೆಯ ಮೇಲೆ ನಿಂತಿದೆ. ತುಂಬಾ ಕಾಲ ವಿಲವಿಲ ಒದ್ದಾಡುತ್ತಿರುವ ನೆಲವು ಒಂದು ಹನಿ ಬಿದ್ದ ಹೊತ್ತಿಗೆ, ಇನ್ನೂ ನನಗೆ ಬರೀ ತಂಪು ಎಂದು ಕೂಗುತ್ತದೆ. ಹಸುರಿಲ್ಲದೇ ಪ್ರಕೃತಿಗೆ ಉಸಿರಿಲ್ಲ, ನೀರಿಲ್ಲ ಎಂಬ ಕೆಲವು ಚಿಂತೆಗಳು ರೈತನಿಗೆ ಇರಲ್ಲ. ಮಳೆ ಬಂದರೆ, ಕಾಲಚಕ್ರದ ತರ. ರೈತನ ದಿನ ನಿತ್ಯ ಕಾಯಕ ನೆಮ್ಮದಿಯ ವಾತಾವರಣದಲ್ಲಿ ಸಾಗುತ್ತದೆ. ಜೋರಾದ ಮಳೆಯ ಜತೆ, ಒಂದು ಎಲೆ ಅಡಿಕೆ, ಒಂದು ಚಾ ಇದ್ದರೆ ಸಾಕು ಅದೇ ಸ್ವರ್ಗ ಎನ್ನುತ್ತಿದ್ದರು ನಮ್ಮ ತಾತ…

ಆದರೆ ಇಂದಿನ ಪ್ರಕೃತಿಯಲ್ಲಿ ಮಳೆಯು ಊಹೆಗೂ ಸಿಗದ ರಹಸ್ಯವಾಗಿದೆ. ಮಾನವ ಪ್ರಕೃತಿಯನ್ನು ಘೋರವಾಗಿ ನಾಶಮಾಡುತ್ತಿರುವ ಕಾರಣ. ಮಳೆಯೇ ಇಲ್ಲದೆ ಬರಿದಾಗಿದೆ. ಪ್ರಕೃತಿಯ ಅಳಿವಿಗೆ ಮಾನವ ಕಾರಣನಾದರೆ, ಮಾನವನ ಅಳಿವಿಗೆ ಪ್ರಕೃತಿಯೇ ಕಾರಣವಾಗು ತ್ತದೆ. ಪ್ರಕೃತಿಯನ್ನು ಉಳಿಸಿ, ಸುಂದರವಾದ ಉಸಿರಾಟದ ಜತೆಗೆ, ನೆಮ್ಮದಿಯ ಜೀವನ ನಡೆಸಲು ಪ್ರಕೃತಿಯ ಪಾತ್ರ ವಿಭಿನ್ನವಾದದ್ದು….!!

 

ಶರತ್‌ MCL ಮುದೂರು

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.