ಲಸಿಕೆ ಪಡೆದರೇ ಬ್ಯಾಂಕ್ ಗಳಿಂದ ಈ ಯೋಜನೆಯ ಲಾಭ ಸಿಗಲಿದೆ ..! ಮಾಹಿತಿ ಇಲ್ಲಿದೆ
Team Udayavani, Jun 9, 2021, 5:06 PM IST
ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಬಿಕ್ಕಟ್ಟು ಇರುವ ಕಾರಣದಿಂದ ದೇಶದಾದ್ಯಂತ ಜನರಿಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸೇರಿ ಸೆಲೆಬ್ರಿಟಿಗಳು ಲಸಿಕೆಯನ್ನು ತೆಗೆದುಕೊಳ್ಳಿ ಎಂದು ಉತ್ತೇಜನ ನೀಡುತ್ತಿದ್ದಾರೆ. ಈಗ ಸಾಲಿಗೆ ಬ್ಯಾಂಕ್ ಗಳು ಕೂಡ ಸೇರಿವೆ.
ಕೊವಿಡ್ 19 ಲಸಿಕೆ ತೆಗದುಕೊಳ್ಳುವುದನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್ ಗಳು ವಿಶೇಷ ಗ್ರಾಹಗಕ ಸ್ನೇಹಿ ಯೋಜನೆಯನ್ನು ಘೋಷಿಸಿವೆ.
ಇದನ್ನೂ ಓದಿ : ಯೆಸ್ ಬ್ಯಾಂಕ್ ಗೆ 466 ಕೋಟಿ ರೂ.ವಂಚನೆ:ಗೌತಮ್ ಥಾಪರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ
ಬ್ಯಾಂಕಿನಲ್ಲಿ ಖಾತೆ ಹೋಂದಿದವರು ಯಾರು ಲಸಿಕೆಯನ್ನು ಪಡೆದಿರುತ್ತಾರೋ ಅವರಿಗೆ ಹೆಚ್ಚಿನ ಬಡ್ಡಿಯನ್ನು ಘೋಷಣೆ ಮಾಡಿ ಘೋಷಣೆ ಮಾಡಿವೆ.
ಇನ್ನು, ಯಾರು ತಮ್ಮ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರಗಳನ್ನು ತೋರಿಸುತ್ತಾರೋ ಅಂಥವರಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಸೀಮಿತ ಅವಧಿಗೆ ಈ ಆಫರ್ ಇರಲಿದೆ ಎಂದು ಬ್ಯಾಂಕ್ ಗಳು ತಿಳಿಸಿವೆ.
ಜೂನ್ 21 ರಿಂದ ಎಲ್ಲ ರಾಜ್ಯಗಳಲ್ಲೂ ವಯಸ್ಕರಿಗೆ ಕೇಂದ್ರ ಸರ್ಕಾರದಿಂದ ಕೊವಿಡ್- 19 ಲಸಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದು, ಈ ಸಂದರ್ಭದಲ್ಲಿ ಕೆಲವು ಬ್ಯಾಂಕ್ ಗಳು ಈ ಯೋಜನೆಯನ್ನು ಹೊರಡಿಸಿವೆ.
ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನಾದರೂ ಪಡೆದಿದ್ದಲ್ಲಿ, ಅಂಥವರು 999 ದಿನಗಳ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದಲ್ಲಿ ಕೋಲ್ಕತ್ತಾ ಮೂಲದ ಯುಕೋ ಬ್ಯಾಂಕ್ನಿಂದ 30 ಬೇಸಿಸ್ ಪಾಯಿಂಟ್ಸ್ (ಬಿಪಿಎಸ್) ಹೆಚ್ಚು ಬಡ್ಡಿಯನ್ನು ಆಫರ್ ಮಾಡಲಾಗುತ್ತಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಾಮೂಲಿಗಿಂತ 25 ಬೇಸಿಸ್ ಪಾಯಿಂಟ್, ಹಿರಿಯ ನಾಗರಿಕರಿಗೆ ಶೇಕಡಾ 0.50ರಷ್ಟು ಹೆಚ್ಚುವರಿಯಾಗಿ ಬಡ್ಡಿ ನೀಡಲಾಗುತ್ತದೆ. ಈ ಯೋಜನೆಗೆ “ಇಮ್ಯುನ್ ಇಂಡಿಯಾ ಡೆಪಾಸಿಟ್ ಸ್ಕೀಮ್” ಎಂದು ಹೆಸರಿಸಲಾಗಿದೆ. ಮೆಚ್ಯೂರಿಟಿ ಅವಧಿ 1,111 ದಿನದ್ದಾಗಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ : ಗೋವಾ : ವಿಸಾ ಮುಕ್ತಾಯಗೊಂಡಿದ್ರೂ ರಾಜ್ಯದಲ್ಲೇ ಉಳಿದ ವಿದೇಶಿಗರಿಗೆ ಆರ್ಥಿಕ ಸಂಕಷ್ಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ