ಲಾಕ್ಡೌನ್ ಸಂದರ್ಭ ಹೆಚ್ಚಾಗುತ್ತಿರುವ ಕೌಟುಂಬಿಕ ವಿವಾದಗಳು
ಪುಣೆಯಲ್ಲಿ ಒಂದೂವರೆ ವರ್ಷದಲ್ಲಿ 1,535 ಪುರುಷರಿಂದ ಪೊಲೀಸರಿಗೆ ದೂರು
Team Udayavani, Jun 10, 2021, 10:31 PM IST
ಪುಣೆ: ಕೋವಿಡ್ ಸೋಂಕಿನಿಂದ ಅನೇಕ ಮಂದಿ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಈ ಮಧ್ಯೆ ಮನೆಯಲ್ಲಿ ಕೌಟುಂಬಿಕ ವಿವಾದಗಳು ಹೆಚ್ಚಾಗುತ್ತಿವೆ. ಕುಟುಂಬ ಜಗಳಗಳು ಪುರುಷರ ಮೇಲೂ ಪರಿಣಾಮ ಬೀರುತ್ತಿದ್ದು, ಪುಣೆಯಲ್ಲಿ ಕಳೆದ ಒಂದೂವರೆ ವರ್ಷಗಳಲ್ಲಿ 1,535 ಪುರುಷರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪುಣೆ ಪೊಲೀಸರ ಟ್ರಸ್ಟ್ ರೂಮ್ಗೆ ನೀಡಿದ ದೂರಿನಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಕೊರೊನಾ ಅವಧಿಯಿಂದ ಒಟ್ಟು 3,000 ದೂರುಗಳು ದಾಖಲಾಗಿವೆ. ಗಂಡನ ವಿರುದ್ಧ ಮಹಿಳೆಯರು ಸಲ್ಲಿಸಿರುವ ದೂರುಗಳ ಸಂಖ್ಯೆ 1,540ರಷ್ಟಿದೆ. ಇದರರ್ಥ ಪುರುಷರು ಮಹಿಳೆಯರಂತೆಯೇ ಕಿರುಕುಳವನ್ನು ಎದುರಿಸಬೇಕಾಗುತ್ತದೆ ಎಂದು ವರದಿಯೊಂದು ಹೇಳಿದೆ.
ಈ ದೂರುಗಳಲ್ಲಿ 2,394 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ದಂಪತಿಗಳ ನಡುವಿನ ವಿವಾದಗಳು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿವೆ. ಕೊರೊನಾ ಕಾಯಿಲೆ ಬಗ್ಗೆ ದಂಪತಿಗಳ ನಡುವೆ ವಿವಾದಗಳು ಹೆಚ್ಚುತ್ತಿವೆ. ಪುಣೆ ಪೊಲೀಸ್ ಟ್ರಸ್ಟ್ನಿಂದ ಕೌನ್ಸೆಲಿಂಗ್ ನೀಡಲಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ದಂಪತಿಗಳನ್ನು ಪೊಲೀಸ್ ಠಾಣೆಗಳಿಗೆ ಕರೆಯಲಾಗುತ್ತಿದೆ. ಪತಿ ಮತ್ತು ಪತ್ನಿ ನಡುವಿನ ಜಗಳಗಳು ಹೆಚ್ಚಾಗಿದ್ದರೂ ಸಣ್ಣ ವಿಷಯಗಳಲ್ಲೇ ಭಿನ್ನಾಭಿಪ್ರಾಯ ಹೊಂದಿದ್ದಾರೆ.
ವಾದದಿಂದಾಗಿ ಇಬ್ಬರು ಪರಸ್ಪರ ಕಿರುಕುಳ ನೀಡಿಕೊಂಡಿದ್ದಲ್ಲದೆ, ಕಳೆದ ಒಂದೂವರೆ ವರ್ಷದಲ್ಲಿ ಪತ್ನಿಯರ ವಿರುದ್ಧ ಪುರುಷರಿಂದ ದಾಖಲಾಗುವ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ 1,283 ಪುರುಷರು ಪುಣೆ ಪೊಲೀಸ್ ಟ್ರಸ್ಟ್ಗೆ ಕುಟುಂಬ ಜಗಳಗಳ ಬಗ್ಗೆ ದೂರು ನೀಡಿದ್ದರು. ಒಟ್ಟು 791 ದೂರುಗಳನ್ನು ಮಹಿಳೆಯರು ದಾಖಲಿಸಿದ್ದಾರೆ. ಈ ವರ್ಷದ ಮೇ ಅಂತ್ಯದವರೆಗೆ 252 ಪುರುಷರು ಮತ್ತು 749 ಮಹಿಳೆಯರು ದೂರು ದಾಖಲಿಸಿದ್ದಾರೆ.
ವಿವಾದ ಪರಿಹರಿಸಲು ಯತ್ನ :
ಟ್ರಸ್ಟ್ ಕೇಂದ್ರಕ್ಕೆ ಪುರುಷರಿಂದ ದಾಖಲಾಗುವ ದೂರುಗಳ ಸಂಖ್ಯೆ ಹೆಚ್ಚಿವೆ. ಸಣ್ಣ ವಿವಾದದಿಂದಾಗಿ ಪತ್ನಿ ಮನೆಗೆ ಬರುವುದಿಲ್ಲ ಅಥವಾ ಪತ್ನಿ ಕಿರುಕುಳ ನೀಡುತ್ತಿದ್ದಾಳೆ ಎಂಬ ದೂರುಗಳ ಸಂಖ್ಯೆ ಹೆಚ್ಚಾಗಿದೆ. ವೈವಾಹಿಕ ವಿವಾದಗಳು ಕುಟುಂಬದೊಳಗೆ ಬಗೆಹರಿಯುವುದಿಲ್ಲ. ಪೊಲೀಸರು ದಂಪತಿಗಳ ನಡುವಿನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ.– ಸುಜಾತಾ ಶನ್ಮೆಸಹಾಯಕ ಪೊಲೀಸ್ ಇನ್ಸ್ಪೆಕ್ಟರ್, ಟ್ರಸ್ಟ್ ರೂಮ್ ಪುಣೆ ಪೊಲೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ