ಶ್ರೀನಿಧಿಗೌಡ ಪ್ರತಿಷ್ಠಾನದಿಂದ ಆಹಾರ ಕಿಟ್
Team Udayavani, Jun 12, 2021, 9:49 PM IST
ಮದ್ದೂರು: ಶ್ರೀನಿಧಿಗೌಡ ಪ್ರತಿಷ್ಠಾನದ ವತಿಯಿಂದಮದ್ದೂರು ತಾಲೂಕು ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಆಹಾರ ಕಿಟ್ ವಿತರಿಸಲಾಯಿತು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದ ವೇಳೆ ಪೊಲೀಸ್ ಸಿಬ್ಬಂದಿಗೆಆಹಾರದ ಕಿಟ್ ವಿತರಿಸಿ ಮಾತನಾಡಿದ ಮನ್ಮುಲ್ ನಿರ್ದೇಶಕ ಶ್ರೀನಿಧಿಗೌಡ, ಪ್ರತಿಷ್ಠಾನದಅಧ್ಯಕ್ಷ ಎಸ್.ಪಿ.ಸ್ವಾಮಿ ಕೊರೋನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಕಾರ್ಯ ಶ್ಲಾಘನೀಯವೆಂದರು.
ಪ್ರತಿಯೊಬ್ಬರೂ ಕೊರೊನಾ ನಿಯಮಾವಳಿಪಾಲಿಸುವ ಮೂಲಕ ತಾಲೂಕು ಆಡಳಿತ,ಆರೋಗ್ಯ ಹಾಗೂ ಪೊಲೀಸ್ ಇಲಾಖೆಯೊಂದಿಗೆಕೈಜೋಡಿಸಬೇಕೆಂದರು. ಮುಖಂಡರಾದಮನುಕುಮಾರ್, ಅಕ್ಷರಂ ವೆಂಕಟೇಶ್,ಚಾಮನಹಳ್ಳಿ ಸತೀಶ, ಸುಧಾ, ಅಭಿ ಇದ್ದರು.