ಕೃಷ್ಣ ನದಿ ಪಾತ್ರದಲ್ಲಿ ಹಸುವನ್ನು ಬಲಿ ಪಡೆದ ಮೊಸಳೆ
Team Udayavani, Jun 17, 2021, 9:47 AM IST
ರಾಯಚೂರು: ತಾಲೂಕಿನ ಡಿ.ರಾಂಪುರದಲ್ಲಿ ಮೊಸಳೆಯೊಂದು ಹಸುವನ್ನು ಬಲಿ ಪಡೆದ ಘಟನೆ ಬುಧವಾರ ಸಂಜೆ ನಡೆದಿದೆ.
ಗ್ರಾಮದ ಬೇಡರ ಆಂಜನೇಯ ಎನ್ನುವವರ ಹಸು ಮೊಸಳೆ ಬಲಿಯಾಗಿದೆ. ನದಿ ಪಾತ್ರದ ಕಡೆ ಹಸು ನೀರು ಕುಡಿಯಲು ಹೋದಾಗ ಮೊಸಳೆ ದಾಳಿ ಮಾಡಿದೆ.
ಇದನ್ನೂ ಓದಿ:ಹಳೆಯ ವೈಷಮ್ಯ ಶಂಕೆ: ಕಲಬುರಗಿ ಮುಖ್ಯರಸ್ತೆಯಲ್ಲಿ ಯುವಕನ ಭೀಕರ ಹತ್ಯೆ
ಮಳೆಗಾಲ ಆರಂಭವಾದ ಕಾರಣ ಕೃಷ್ಣ ನದಿಗೆ ನೀರು ಹರಿಬಿಡಲಾಗುತ್ತಿದೆ. ಇದರಿಂದ ಮೊಸಳೆಗಳು ನದಿಪಾತ್ರದ ಕಡೆ ಬರುತ್ತವೆ. ಕಳೆದ ವರ್ಷ ಮೊಸಳೆ ಬಾಲಕನನ್ನು ಬಲಿ ಪಡೆದಿತ್ತು.