ಭಗವದ್ಗೀತೆ ಭಾವಾರ್ಥ ಮಾತೃಭಾಷೆಯಲ್ಲಿ ಬೆಸೆಯಲಿ: ಡಾ| ವೀರೇಂದ್ರ ಹೆಗ್ಗಡೆ


Team Udayavani, Jun 22, 2021, 7:08 AM IST

The Bhagavad-Gita

ಮುಂಬಯಿ: ವಿಶ್ವಾದ್ಯಂತ ಬಹಳಷ್ಟು ಜನ ಹಿಂದೂಗಳಿದ್ದರೂ ಧರ್ಮದ ಸಾರಾಂಶ ತಿಳಿಯಪಡಿಸಲು ಹಿಂದೂ ಧರ್ಮದ ಪ್ರಾತಿನಿಧ್ಯವಾಗಿರುವ ಗ್ರಂಥವಿದ್ದರೆ ಅದು ಭಗವದ್ಗೀತೆ. ಹಿಂದೂಗಳಿಗೆ ವೇದಗಳು, ಸ್ಮೃತಿಗಳು, ಪುರಾಣಗಳಿವೆ. ಆದರೆ ಅದು ಅರ್ಥವಾಗಿ ಮತ್ತು ವಿಸ್ತಾರವಾಗಿ ವಿವರಿಸಲು ಅಸಾಧ್ಯ. ಚುಟುಕು, ಸರ್ವರೂ ತಿಳಿಯುವ ಮತ್ತು ನೇರವಾಗಿ ಹಿಂದೂ ಧರ್ಮದ ಸಾರಾಂಶ ಅರ್ಥೈಸಲು ಸಾಧ್ಯವಿರುವ ಪವಿತ್ರ ಗ್ರಂಥವೇ ಭಗವದ್ಗೀತೆಯಾಗಿದೆ. ಪ್ರಶ್ನೋತ್ತರ ರೂಪದಲ್ಲಿರುವ ಪವಿತ್ರ ಭಗವದ್ಗೀತೆಯು ನಮ್ಮ ಜೀವನದ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುವ ಸಾಮರ್ಥ್ಯವುಳ್ಳದ್ದು. ಅದನ್ನು ಮಾತೃಭಾಷೆ ತುಳುವಿನಲ್ಲಿ ಬೆಸೆದರೆ ಮತ್ತಷ್ಟು ಸುಲಭವಾಗುವುದು. ಆದ್ದರಿಂದ ಭಗವದ್ಗೀತೆ ಭಾವಾರ್ಥ ಮಾತೃಭಾಷೆಯಲ್ಲೂ ಬೆಸೆಯಲಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

ಐಲೇಸಾ ದಿ ವಾಯ್ಸ ಆಫ್‌ ಓಶಿಯನ್‌ ಮತ್ತು ಇಸ್ಕಾನ್‌ ಬೆಂಗಳೂರು ಸೌತ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ಆನ್‌ಲೈನ್‌ನಲ್ಲಿ ಝೂಮ್‌ ಮೂಲಕ ಕಳೆದ 6 ದಿನಗಳಿಂದ ನಡೆಸಲ್ಪಟ್ಟ ತುಳುವಿನಲ್ಲಿ ಭಗವದ್ಗೀತೆಯ ಸಾರ ತುಳುವ ಜಾಲ್ಡ್‌ ಕೃಷ್ಣ ಪಾರ್ದನ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಶುಭಾಶಂಸನೆಗೈದು ಅನುಗ್ರಹಿಸಿದರು.

ಎಲ್ಲ ರೀತಿಯ ಸಹಕಾರ ಇದೆ

ಸ್ವಾಗತ ಶ್ಲೋಕದೊಂದಿಗೆ ಕಾರ್ಯ ಕ್ರಮ ಪ್ರಾರಂಭಗೊಂಡಿತು. ಒಡಿಯೂರು ಮಠಾಧೀಶ ಶ್ರೀ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನಗೈದು, ತುಲುವ ಜಾಲ್ಡ್‌ ಕೃಷ್ಣ ಪಾರ್ದನ ಈ ಶೀರ್ಷಿಕೆ ತುಳುವಿಗೆ ತುಂಬಾ ಸಾಮೀಪ್ಯವಾಗಿದೆ ಎಂದು ಟೀಮ್‌ ಐಲೇಸಾದ ಹೊಸ ಯೋಚನೆ-ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಭಗವದ್ಗೀತೆ ತುಳುವಿನಲ್ಲಿ ಆಗುವುದಾರೆ ಐಲೇಸಾಗೆ ಎಲ್ಲ ರೀತಿಯ ಸಹಕಾರ ಇದೆ ಎಂದರು.

ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟuಲದಾಸ ಸ್ವಾಮೀಜಿ, ಇಸ್ಕಾನ್‌ ಪುಣೆ ಇದರ ಸರ್ವ ಲಕ್ಷಣದಾಸ ಹಾಗೂ ಶ್ರೀ ಪ್ರಸಾದೇಶ್ವರ ಕೃಷ್ಣದಾಸ ಸ್ವಾಮೀಜಿ ಪ್ರವಚನ ನೀಡಿ ಹರಸಿದರು.

ರವಿ ಶೆಟ್ಟಿ ಮೂಡಂಬೈಲ್‌ ಕತಾರ್‌ 6 ದಿನಗಳ ಕಾರ್ಯಕ್ರಮದ ಬಗ್ಗೆ, ಪೂರ್ತಿ ಭಗವದ್ಗೀತೆಯ ಬಗ್ಗೆ ಉದಾಹರಣೆ ಸಹಿತ ವಿವರಿಸಿ ಐಲೇಸಾದ ಸೇವೆಯನ್ನು ಶ್ಲಾಘಿಸಿದರು.

ಐಲೇಸಾದ ಶಿಸ್ತಿನ ಬಗ್ಗೆ ಮತ್ತು ಇಂತಹ ಸಮಯದಲ್ಲಿ ಭಕ್ತಿ ಲಹರಿಯಂತಹ ಕಾರ್ಯಕ್ರಮ ಅಗತ್ಯ ಎಂದು ಖ್ಯಾತ ಸಮಾಜ ಸೇವಕ, ವಾಗ್ಮಿ ಸುರೇಶ್‌ ಶೆಟ್ಟಿ ಗುರ್ಮೆ ಅವರು ತಿಳಿಸಿದರು.

ರಮೇಶ್‌ ಕಿದಿಯೂರು, ವಲ್ಲಿ ಮಾರ್ಟೆಲ್‌, ಕುವೈಟ್‌ನ ರಾಘು ಪೂಜಾರಿ ಮಾರ್ನಾಡ್‌, ಅನಂತ್‌ ಬೆಂಗಳೂರು, ಮನೋಹರ್‌ ತೋನ್ಸೆ ಅಬುಧಾಬಿ, ಸುರೇಶ್‌ ಪೂಂಜ ಆಸ್ಟ್ರೇಲಿಯಾ, ನರಹರಿ ಚೈತನ್ಯದಾಸ, ಹಿರಿಯ ಪತ್ರಕರ್ತ ಕೆ.ಎಲ್‌. ಕುಂಡತ್ತಾಯ, ಡಾ| ವೈ. ಎನ್‌. ಶೆಟ್ಟಿ, ಡಾ| ಸಾಯಿ ಗೀತಾ ಶುಭ ಹಾರೈಸಿದರು.

ಇಸ್ಕಾನ್‌ ಬೆಂಗಳೂರು ಸೌತ್‌ ಅಧ್ಯಕ್ಷ ಎಚ್‌. ಜಿ. ನರಹರಿ ಚೈತನ್ಯದಾಸ, ಛಾಯಾಪತಿ ಕಂಚಿಬೈಲ್‌, ಸುಧಾಕರ್‌ ಶೆಟ್ಟಿ, ದೀಪ್ತಿ ಪ್ರಶಾಂತ್‌ ಭಕ್ತಿಗೀತೆ ಹಾಡಿದರು. ಕಾರ್ಯಕ್ರಮದ ಉದ್ಘಾಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಸಮಾಪನಾ ನುಡಿಗಳನ್ನಾಡಿ ಕಾರ್ಯ ಕ್ರಮಕ್ಕೆ ಕಾರಣಿಭೂತರಾದ ಎಲ್ಲರಿಗೂ  ಶುಭ ಹಾರೈಸಿದರು.

ಮಧ್ಯಾಂತರದಲ್ಲಿ ಇಸ್ಕಾನ್‌ ಕಾರ್ಯಕರ್ತರು ಕೃಷ್ಣ ಶಯನ ಪೂಜೆ ನಡೆಸಿದರು. ಐಲೇಸಾ ಇದರ ರಮೇಶ್ಚಂದ್ರ ಬೆಂಗಳೂರು, ಪ್ರೇಮಲತಾ ದಿವಾಕರ್‌, ಡಾ| ಸುಶೀಲಾ ವಿ. ಕೊಲ್ಲಿಪಾಲ್‌ ಭಜನೆ ನೆರವೇರಿಸಿದರು.

ರಮೇಶ್ಚಂದ್ರ ಬೆಂಗಳೂರು, ಗೋಪಾಲ್‌ ಪಟ್ಟೆ, ಸುರೇಂದ್ರ ಮಾರ್ನಾಡ್‌, ಮಾ| ಸುವಿದ್‌ ಮಾರ್ನಾಡ್‌, ಶಿವು ಸಾಲಿಯಾನ್‌, ನರೇಂದ್ರ ಕಬ್ಬಿನಾಲೆ, ವಿಶ್ವನಾಥ್‌ ಪಳ್ಳಿ, ಗೀತಾ ರಾಘವೇಂದ್ರ, ಡಾ| ಸುಶೀಲಾ, ಸುಧಾಕರ್‌ ಶೆಟ್ಟಿ, ವಿವೇಕಾನಂದ ಮಂಡೆಕೆರೆ ಇವರ ತಂಡ ಮತ್ತು ಇಸ್ಕಾನ್‌ ಕಾರ್ಯಕರ್ತರ ಶ್ರಮದೊಂದಿಗೆ ಮೂಡಿಬಂದ ಆರು ದಿನಗಳ ವೈಶಿಷ್ಟಮಯ ಕಾರ್ಯಕ್ರಮವನ್ನು ಶಾಂತಾರಾಮ ಶೆಟ್ಟಿ ನಿರ್ವಹಿಸಿದರು.

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.