ಯಾವುದು ಒಳ್ಳೆಯದು …ತೆಂಗಿನ ಎಣ್ಣೆಯನ್ನು ಚತುರವಾಗಿ ಉಪಯೋಗಿಸಿ 

ಹೆಚ್ಚಿನ ವಿಷಯ ಅಥವಾ ನಿಮಗೆ ಎಷ್ಟು ಸೂಕ್ತ ಎಂದು ನಿಮ್ಮ ವೈದ್ಯರಲ್ಲಿ ಮಾತನಾಡಿ ನಿರ್ಧರಿಸುವುದು ಸೂಕ್ತ.

Team Udayavani, Jul 14, 2021, 3:51 PM IST

ಯಾವುದು ಒಳ್ಳೆಯದು …ತೆಂಗಿನ ಎಣ್ಣೆಯನ್ನು ಚತುರವಾಗಿ ಉಪಯೋಗಿಸಿ 

ತೆಂಗಿನ ಎಣ್ಣೆ ಬಹಳ ಮಾತುಕತೆಯಲ್ಲಿ ಇರುವ ಒಂದು ಪದಾರ್ಥ . ಇತ್ತೀಚಿಗೆ ಬಹಳ ಚರ್ಚೆಗೋಳಗಾಗುವ ವಿಷಯವೇನೆಂದರೆ ತೆಂಗಿನ ಎಣ್ಣೆಯೋ, ಒಲೀವ್ ಎಣ್ಣೆ ಅಥವಾ ಇನ್ನಾವುದಾದರೂ ಎಣ್ಣೆಗಳಲ್ಲಿ ಯಾವುದು ಒಳ್ಳೆಯದು ಎಂದು. ಆದರೆ ಯಾವತ್ತೂ ಅದಕ್ಕೆ ಒಂದು ಸೂಕ್ತ ಪರಿಹಾರ ದೊರಕದು. ಏಕೆಂದರೆ, ಪ್ರತಿಯೊಂದು ಉತ್ಪನ್ನಗಳಿಗೆ ಅದರದೇ ಆದ ಸುಗುಣ ಹಾಗೂ ದುರ್ಗುಣಗಳು ಇರುತ್ತದೆ.

ಆಹಾರ ವಸ್ತುಗಳನ್ನು ಮತ್ತು ಪದ್ಧತಿಗಳನ್ನು ಭೌಗೋಳಿಕವಾಗಿ ವಿಂಗಡಿಸಲ್ಪಡುತ್ತದೆ. ಉದಾಹರಣೆಗೆ, ಉತ್ತರ ಭಾರತದಲ್ಲಿ, ಗೋಧಿ ಯಥೇಚ್ಚವಾಗಿ ಉಪಯೋಗಿಸಲ್ಪಡುತ್ತದೆ ಹಾಗೂ ದಕ್ಷಿಣ ಭಾರತದಲ್ಲಿ, ಅಕ್ಕಿ. ಇನ್ನು ದಕ್ಷಿಣ ಕನ್ನಡದಲ್ಲಿ, ಕುಚ್ಚಿಲು ಅಕ್ಕಿ ಬಳಸಿದರೆ, ಘಟ್ಟದ ಭಾಗದಲ್ಲಿ, ರಾಗಿ ಹಾಗೂ ಉತ್ತರ ಕರ್ನಾಟಕದಲ್ಲಿ ಜೋಳ. ಹೀಗೆ ಆಹಾರ ಆಯಾ ಪ್ರದೇಶಗಳಲ್ಲಿ ಯಾವುದು ಹೆಚ್ಚಾಗಿ ಬೆಳೆಯುವುದೋ ಅದೇ ಅಲ್ಲಿನ ಪ್ರಧಾನ ಆಹಾರ. ಹಾಗೆಯೇ, ಕೇರಳ ಹಾಗೂ ದಕ್ಷಿಣ ಕನ್ನಡದಲ್ಲಿ, ತೆಂಗಿನ ಎಣ್ಣೆ ಯಥೇಚ್ಚವಾಗಿ ಬಳಸಲ್ಪಡುತ್ತದೆ.

ತೆಂಗಿನ ಎಣ್ಣೆ ಏಕೆ ಬಳಸಬೇಕು?
*ಅದರಲ್ಲಿ medium chain fatty acids ಇರುವುದರಿಂದ, ಅದು ನಮ್ಮ ಯಕ್ರುತನಲ್ಲಿ ಸುಲಭವಾಗಿ ಚಯಾಪಚಯವಾಗಿ, ನಮ್ಮ ದೇಹದಲ್ಲಿ ಉಪಯೋಗಿಸಲ್ಪಡುವುದು.
*ಇದು ನಮ್ಮ ರಕ್ತದಲ್ಲಿ ಒಳ್ಳೆ ಕೊಲೆಸ್ಟೆರೋಲ್ ಹೆಚ್ಚಿಸಿ ಕೆಟ್ಟ ಕೊಲೆಸ್ಟೆರೋಲ್ ಅನ್ನು ತಗ್ಗಿಸುತ್ತದೆ. ಇದರಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುವುದು.
*ಲಾರಿಕ್ ಆಸಿಡ್ (lauric acid) ಎಂಬ ಅಂಶವು ಜೀವಿರೋಧಿ (antibacterial) ಗುಣ ಹೊಂದಿರುವುದು. ಇದರಿಂದಾಗಿಯೇ, ನಮ್ಮಲ್ಲಿ, ಗಾಯಗಳಿಗೆ, ಅಥವಾ ಚರ್ಮ ರೋಗಗಳಲ್ಲಿ, ತೆಂಗಿನ ಎಣ್ಣೆ ಹಚ್ಚುವ ಅಭ್ಯಾಸ ಇರುವುದು.
*ಬೆಳಿಗ್ಗೆ, ಒಂದು ಚಮಚ ತೆಂಗಿನ ಎಣ್ಣೆ ಬಾಯಲ್ಲಿ ಇಟ್ಟು ಬಾಯಿ ಮುಕುಳಿಸುವುದರಿಂದ ಹಲ್ಲು ಮತ್ತು ವಸಡಿನ ತೊಂದರೆ ಭಾದಿಸದು.
*ವಾರಕ್ಕೊಮ್ಮೆ ಈ ಎಣ್ಣೆ ಹಚ್ಚಿ, ಒಂದರ್ಧ ತಾಸಿನ ನಂತರ ಬಿಸಿ ನೀರಲ್ಲಿ ಸ್ನಾನ ಮಾಡುವುದರಿಂದ, ಚರ್ಮ ಕಾಂತಿಯುತವಾಗುವುದು ಮತ್ತು ಅಗತ್ಯ ತೇವಾಂಶವನ್ನು ಕಾಪಾಡುವುದು.
*ವಾರದಲ್ಲಿ 2 ಬಾರಿಯಂತೆ, ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪು ಆಗುವುದು, ನೆತ್ತಿಯ ಆರೋಗ್ಯ ವೃದ್ಧಿಸುವುದು.

ಯಾರು ಉಪಯೋಗಿಸಬಾರದು?
*ಯಾರು dyslipidemia ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆಯೋ, ಅವರು ಒಂದು ದಿನಕ್ಕೆ 5 – 8 ml ಗಿಂತ ಹೆಚ್ಚು ಬಳಸಬಾರದು.

*ತೂಕ ತಗ್ಗಿಸಲು ಬಯಸುತ್ತಿರುವವರಿಗೆ ಇದು ಅಷ್ಟು ಸೂಕ್ತವಲ್ಲ.

ತೆಂಗಿನ ಎಣ್ಣೆಯಲ್ಲಿ ಏನಿದೆ?

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ತೆಂಗಿನ ಎಣ್ಣೆ ಉಪಯೋಗಿಸಿ ಮಾಡಿದ ಅಡುಗೆ ರುಚಿಕರವಾಗಿರುತ್ತದೆ. ಹಾಗೆಯೇ ಅದು ನಮ್ಮ ದೇಹಕ್ಕೆ ಅಗತ್ಯವಿದ್ದ ಪೋಷಕಾಂಶಗಳನ್ನು ಹೊಂದಿರುತ್ತದೆ . ಹಾಗೆಂದು ಅದು ತುಪ್ಪ, ಮೊಸರು, ಇತ್ಯಾದಿ ಆಹಾರ ಪದಾರ್ಥಗಳಿಗೆ ಪರ್ಯಾಯವಲ್ಲ. ಇದು ನಮ್ಮ ದೈನಂದಿನ ಆಹಾರದಲ್ಲಿ ಒಂದು. ಹೆಚ್ಚಿನ ವಿಷಯ ಅಥವಾ ನಿಮಗೆ ಎಷ್ಟು ಸೂಕ್ತ ಎಂದು ನಿಮ್ಮ ವೈದ್ಯರಲ್ಲಿ ಮಾತನಾಡಿ ನಿರ್ಧರಿಸುವುದು ಸೂಕ್ತ.

ಡಾ. ಭಾವನಾ. ಎಂ,
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯೆ,
[email protected]

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.