ಭಾರತ-ಪಾಕ್ ಮಾತುಕತೆಗೆ ಆರ್ ಎಸ್ ಎಸ್ ಸಿದ್ಧಾಂತದಿಂದ ಅಡ್ಡಿ: ಇಮ್ರಾನ್ ಖಾನ್
ರಕ್ತಸಿಕ್ತ ಸಂದರ್ಭದಲ್ಲಿ ಜನ್ಮತಳೆದಿದೆ ಎಂದು ಇಂದ್ರೇಶ್ ಕುಮಾರ್ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.
Team Udayavani, Jul 17, 2021, 1:32 PM IST
ಇಸ್ಲಾಮಾಬಾದ್: ಗಡಿಯಾಚೆಗಿನ ಭಯೋತ್ಪಾದನೆಗೆ ತಮ್ಮ ಬೆಂಬಲದ ಕುರಿತ ಕಳವಳಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಮಾತುಕತೆ ಸ್ಥಗಿತಗೊಂಡಿರುವುದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್)ದ ಸಿದ್ಧಾಂತವೇ ಕಾರಣವಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ದೂಷಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮದ್ಯ ಸೇವಿಸಿ ನಿದ್ದೆಗೆ ಶರಣಾದ ಸಹಾಯಕ ಸ್ಟೇಷನ್ ಮಾಸ್ಟರ್! ರೈಲು ಸಂಚಾರ ಅಸ್ತವ್ಯಸ್ತ
ಒಂದು ವೇಳೆ ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಸಾಧ್ಯವಾಗಬಹುದೇ ಎಂಬ ಪ್ರಶ್ನೆಗೆ ಪ್ರಧಾನಿ ಖಾನ್ ಎಎನ್ ಐ ಜತೆ ಮಾತನಾಡುತ್ತ, ನಾವು ನಾಗರಿಕ ನೆರೆಹೊರೆಯವರಂತೆ ಬದುಕಲು ಬಹಳ ದೀರ್ಘ ಕಾಲದಿಂದ ಕಾಯುತ್ತಿದ್ದೇವೆ ಎಂದು ನಾನು ಭಾರತಕ್ಕೆ ಹೇಳಬಲ್ಲೆ, ಆದರೆ ನಾವು ಏನು ಮಾಡಬಹುದು? ನಮ್ಮ ಮಾತುಕತೆಗೆ ಆರ್ ಎಸ್ ಎಸ್ ಸಿದ್ಧಾಂತ ತಡೆಯೊಡ್ಡುತ್ತಿದೆ ಎಂದು ಆರೋಪಿಸಿರುವುದಾಗಿ ವರದಿ ವಿವರಿಸಿದೆ.
ಏತನ್ಮಧ್ಯೆ ಆರ್ ಎಸ್ ಎಸ್ ಮುಖಂಡ ಇಂದ್ರೇಶ್ ಕುಮಾರ್, ಇಮ್ರಾನ್ ಖಾನ್ ಹೇಳಿಕೆಗೆ ತಿರುಗೇಟು ನೀಡಿದ್ದು, ಪಾಕಿಸ್ತಾನ ನಾಯಕತ್ವದ ವಿಷಕಾರಿ ಸಿದ್ಧಾಂತದಿಂದಾಗಿ 1947ರಲ್ಲಿ ದೇಶ ವಿಭಜನೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ನೆರೆಯ ದೇಶದ ನಾಯಕತ್ವ ವಿಷಕಾರಿ ಸ್ವಭಾವ ಹೊಂದಿದೆ ಮತ್ತು ಈ ದೇಶ ಕೂಡಾ ವಿಷಕಾರಿ ಮತ್ತು ರಕ್ತಸಿಕ್ತ ಸಂದರ್ಭದಲ್ಲಿ ಜನ್ಮತಳೆದಿದೆ ಎಂದು ಇಂದ್ರೇಶ್ ಕುಮಾರ್ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ