ಅತ್ಯಾಚಾರಿ ಜತೆ ಮದುವೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಸಂತ್ರಸ್ತೆ ಮನವಿ
Team Udayavani, Aug 1, 2021, 11:13 AM IST
ತಿರುವನಂತಪುರ: ರೋಮನ್ ಕ್ಯಾಥೋಲಿಕ್ ಚರ್ಚ್ನ ಪಾದ್ರಿಯೊಬ್ಬರಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬರು, ತಮ್ಮನ್ನು ಬಲಾತ್ಕಾರ ಮಾಡಿದ್ದ ಪಾದ್ರಿಯೊಂದಿಗೆ ಮದುವೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಅವರ ಅರ್ಜಿ ಸ್ವೀಕರಿಸಿರುವ ನ್ಯಾಯಾಲಯ, ಸೋಮವಾರದಿಂದ ವಿಚಾರಣೆ ಆರಂಭಿಸುವುದಾಗಿ ತಿಳಿಸಿದೆ. 2016ರಲ್ಲಿ ಪಾದ್ರಿಯವರ ನಿವಾಸದಲ್ಲಿ ಆಗ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈ ಮಹಿಳೆಯ ಮೇಲೆ ಪಾದ್ರಿ ವಡಕ್ಕುಂಚೆರ್ರಿ ಅತ್ಯಾಚಾರ ಎಸಗಿದ್ದರು.
ಇದು ಹೊರಬಂದ ಅನಂತರ, ವಡಕ್ಕುಚೆರಿಯನ್ನು ಪಾದ್ರಿ ಸ್ಥಾನದಿಂದ ತೆಗೆದುಹಾಕಲಾಗಿತ್ತು.
ಇದನ್ನೂ ಓದಿ :ಜುಲೈ ಮುಗಿದಿದೆ,ಲಸಿಕೆಗಳ ಕೊರತೆ ಇನ್ನೂ ನೀಗಿಲ್ಲ : ಕೇಂದ್ರದ ವಿರುದ್ಧ ರಾಹುಲ್ ಟ್ವೀಟಾಸ್ತ್ರ