ಧೋನಿ ಭೇಟಿಗೆ ಹರ್ಯಾಣದಿಂದ ರಾಂಚಿಗೆ ನಡೆದೇ ಬಂದ ಅಭಿಮಾನಿ !


Team Udayavani, Aug 16, 2021, 8:00 AM IST

ಧೋನಿ ಭೇಟಿಗೆ ಹರ್ಯಾಣದಿಂದ ರಾಂಚಿಗೆ ನಡೆದೇ ಬಂದ ಅಭಿಮಾನಿ !

ರಾಂಚಿ : ಮಹೇಂದ್ರ ಸಿಂಗ್‌ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿ ಆ. 15ಕ್ಕೆ ಭರ್ತಿ ಒಂದು ವರ್ಷ ತುಂಬಿದರೂ ಅವರು ಈಗಲೂ ಕ್ರಿಕೆಟಿನ ಸೂಪರ್‌ ಸ್ಟಾರ್‌ ಆಗಿದ್ದಾರೆ. ಅವರ ಅಭಿಮಾನಿಗಳ ಸಂಖ್ಯೆಗೇನೂ ಕೊರತೆ ಇಲ್ಲ.

ಇಂಥವರಲ್ಲೊಬ್ಬರು ಹರ್ಯಾಣದ ಅಜಯ್‌ ಗಿಲ್‌. 18 ವರ್ಷದ ಗಿಲ್‌, ಧೋನಿ ಯನ್ನು ಭೇಟಿ ಮಾಡಲು ಕಾಲ್ನಡಿಗೆಯಲ್ಲೇ ಹರ್ಯಾಣದಿಂದ ಬಂದಿದ್ದಾರೆ! ಜು. 29ರಂದು ಇವರ ನಡಿಗೆ ಆರಂಭಗೊಂಡಿತ್ತು. ಸತತ 16 ದಿನಗಳ ಕಾಲ ನಡೆದು ರಾಂಚಿ ತಲುಪಿದ್ದಾರೆ.

10 ನಿಮಿಷ ಕಳೆದರೆ ಸಾಕು…
“ನಾನು ಧೋನಿಜೀಯನ್ನು ಭೇಟಿ ಮಾಡಿದ ಬಳಿಕವೇ ಮನೆಗೆ ವಾಪಸಾಗುವುದು. ಅಲ್ಲಿಯ ತನಕ ಇಲ್ಲಿಯೇ ಉಳಿಯುತ್ತೇನೆ. ಧೋನಿ ನನ್ನೊಂದಿಗೆ ಕನಿಷ್ಠ 10 ನಿಮಿಷ ಕಳೆದರೆ ಸಾಕು, ನನ್ನಷ್ಟು ಲಕ್ಕಿ ಬೇರೆ ಯಾರಿಲ್ಲ…’ ಎಂದಿದ್ದಾರೆ ಅಜಯ್‌ ಗಿಲ್‌.
ದುರದೃಷ್ಟವೆಂದರೆ, ಅಜಯ್‌ ಗಿಲ್‌ ರಾಂಚಿ ತಲುಪುತ್ತಿದ್ದಂತೆಯೇ ಅತ್ತ ಚೆನ್ನೈಯಿಂದ ಧೋನಿ ದುಬಾೖಗೆ ವಿಮಾನ ಏರಿದ್ದಾರೆ. ಹೀಗಾಗಿ ಇವರ ಭೇಟಿ ಸಾಧ್ಯವಾಗಲಿಲ್ಲ.

ತಲೆಯಲ್ಲೂ ಧೋನಿ, ಮಹಿ…
ಹರ್ಯಾಣದ ಹಳ್ಳಿಯೊಂದರಲ್ಲಿ ಸಲೂನ್‌ ನಡೆಸುತ್ತಿರುವ ಗಿಲ್‌, ತಮ್ಮ ತಲೆ ಕೂದಲಿಗೆ ವಿವಿಧ ಬಣ್ಣ ಹಚ್ಚಿಕೊಂಡು ಅದರಲ್ಲಿ ಧೋನಿ, ಮಹಿ ಎಂದೆಲ್ಲ ಆರ್ಟ್‌ವರ್ಕ್‌ ಮಾಡಿಸಿಕೊಂಡಿದ್ದಾರೆ. ತನ್ನ ಉದ್ದೇಶ ತಿಳಿದ ಸೋನೆಪತ್‌ನ ಸಲೂನ್‌ನವರೊಬ್ಬರು ಪುಕ್ಕಟೆಯಾಗಿ ಈ ವಿನ್ಯಾಸ ಮಾಡಿದ್ದಾಗಿ ಗಿಲ್‌ ಹೇಳಿದರು.

ಇದನ್ನೂ ಓದಿ :ಜರ್ಮನಿಯ ಫುಟ್ ಬಾಲ್ ಲೆಜೆಂಡ್‌ ಗರ್ಡ್‌ ಮುಲ್ಲರ್‌ ನಿಧನ

ದಿಲ್ಲಿಗೆ ಮರಳಲು ವ್ಯವಸ್ಥೆ
ಧೋನಿ ಬರುವುದು ಎಷ್ಟೇ ವಿಳಂಬವಾಗಲಿ, ಅಲ್ಲಿಯ ತನಕ ಇಲ್ಲಿಯೇ ಉಳಿಯುತ್ತೇನೆ ಎಂದು ಪಟ್ಟು ಹಿಡಿದ ಅಜಯ್‌ ಗಿಲ್‌ಗೆ ಸ್ಥಳೀಯರು ಮನ ಒಲಿಸಿದ್ದಾರೆ. ಧೋನಿ ಬಂದ ಬಳಿಕ ಬನ್ನಿ ಎಂದು ಹೇಳಿ, ಅವರಿಗೆ ದಿಲ್ಲಿಗೆ ಮರಳಲು ವಿಮಾನದ ಟಿಕೆಟ್‌ ಕೊಡಿಸಿದ್ದಾರೆ.
ಹೀಗೆ… ಅಜಯ್‌ ಗಿಲ್‌ನ ಕಾಲ್ನಡಿಗೆಯ ಸಾಹಸಮಯ ಪಯಣ ನಿರಾಸೆಯಲ್ಲಿ ಅಂತ್ಯಗೊಂಡಿದೆ.

ಶೀಘ್ರದಲ್ಲೇ ಭೇಟಿ
ಆದರೆ ಅತೀ ಶೀಘ್ರದಲ್ಲೇ ತನ್ನ ಮತ್ತು ಧೋನಿಯ ಭೇಟಿ ಆಗುವುದರಲ್ಲಿ ಅನು ಮಾನವೇ ಇಲ್ಲ ಎಂಬುದು ಗಿಲ್‌ ವಿಶ್ವಾಸ. ಆಗ ತಾನು ಹೇಗೆ ರಾಂಚಿಗೆ ಆಗಮಿಸಲಿದ್ದೇನೆ ಎಂಬುದನ್ನು ಮಾತ್ರ ಈ ಅಭಿಮಾನಿ ತಿಳಿಸಿಲ್ಲ!

ಟಾಪ್ ನ್ಯೂಸ್

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

1-qweewq

IPL ಇಂದು ಲೀಗ್‌ ಪಂದ್ಯಗಳಿಗೆ ತೆರೆ: KKR vs RR ಟೇಬಲ್‌ ಟಾಪರ್‌ಗಳ ಸೆಣಸಾಟ

MUST WATCH

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

ಹೊಸ ಸೇರ್ಪಡೆ

1-wqqewqeq

Hubli; ಜನರಲ್ಲಿ ಪೊಲೀಸರ ಬಗ್ಗೆ ನಂಬಿಕೆ ಹೋಗಿದೆ: ಎಡಿಜಿಪಿ ಹಿತೇಂದ್ರ

1-qweeqw

Kundapura; ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿಯೂ ವಿಧಿವಶ!

1-aaa

Kaup: ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.