ಶಾಲಾರಂಭದ ಅನಿಶ್ಚಿತತೆ ನಡುವೆ ಶೇ.94 ದಾಖಲಾತಿ
Team Udayavani, Aug 18, 2021, 2:53 PM IST
ಹಾಸನ:ರಾಜ್ಯದಲ್ಲಿ ಆ.23ರಿಂದ 9 ಮತ್ತು 10ನೇ ತರಗತಿಗಳಆರಂಭಕ್ಕೆ ಸರ್ಕಾರ ನಿರ್ದರಿಸಿದೆ. ಆದರೆ, ಹಾಸನಜಿಲ್ಲೆಯಲ್ಲಿ ಮಾತ್ರ ಶಾಲೆಗಳು ಆರಂಭವಾಗದೆ ಅನಿಶ್ಚಿತತೆಮುಂದುವರಿದಿದೆ.ಕೊರೊನಾ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುÊ ಜಿಲ್ಲೆಗಳಲಿ ಮಾತ್ರ ಶಾಲೆ ಆರಂಭಕ್ಕೆ ಸರ್ಕಾರ ತೀರ್ಮಾನಿಸಿದೆ.
ಆದರೆ, ರಾಜ್ಯದ 5 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ದರಶೇ.2ಕ್ಕಿಂತ ಹೆಚ್ಚಿದ್ದು, ಶೇ.2.60 ಪಾಸಿಟಿವಿಟಿ ದರ ಇರುವ ಹಾಸನಜಿಲ್ಲೆಯೂ 5 ಜಿಲ್ಲೆಗಳ ಪಟ್ಟಿಯಲ್ಲಿ ಸೇರಿದೆ. ಹೀಗಾಗಿ ಹಾಸನಜಿಲ್ಲೆಯಲ್ಲಿ ಆಗಸ್ಟ್ನಲಿ É ಶಾಲೆಗಳು ಆರಂಭವಾಗುವಸೂಚನೆಗಳಿಲ್ಲ.
ವಿತರಣೆ ಆಗಿಲ್ಲ: ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆನಡೆದಿದ್ದು, ಇದುವರೆಗೂ ಶೇ.94 ಪ್ರವೇಶಾತಿ ನಡೆದಿದೆ. ದಂv ಶುಲ್ಕವಿಲ್ಲದೆ ಆ.31ರವರೆಗೂ ದಾಖಲಾತಿಗೆ ಅವಕಾಶವಿದೆ.ಸರ್ಕಾರಿ ಶಾಲೆಗಳ ಮಕ್ಕಳಿಗೆ ಈಗಾಗಲೇ ಪಠ್ಯಪುÓ ¤ಕಪೂರೈಕೆಯಾಗಿದ್ದು, ಆಯಾ ಶಾಲಾ ಮಟ್ಟದಲ್ಲಿ ಪುಸ್ತಕಗಳ ವಿತರಣೆನಡೆಯುತ್ತಿದೆ. ಆದರೆ, ಸಮವಸ್ತ್ರಗಳು ಇನ್ನೂ ಸರಬರಾಜಾಗಿಲ್ಲ.
ವ್ಯವ ಸ್ಥೆ: ಕೊರೊನಾ ಪಾಸಿಟಿವಿಟಿ ದರ ಕಡಿಮೆಯಾದರೂ ಯಾವಸಂದರ್ಭದಲ್ಲಾದರೂ ಶಾಲೆ ಪ್ರಾರಂಭಿಸಲು Ó ೂಚನೆಬರಬÖ ುದು ಎಂಬ ನಿರೀಕ್ಷೆಯಲ್ಲಿರುವ ಶಿಕ್ಷಣ ಇಲಾಖೆ ಆಧಿಕಾರಿಗಳು, ಶಾಲಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಈಗಾಗಲೇ ಶಾಲೆಗಳಿಗೆ ಶಿಕ್ಷಕರು ಹಾಜರಾಗುವುದು ಕಡ್ಡಾಯವಾಗಿರುವುದರಿಂದ ಶಾಲೆಗಳಲ್ಲಿ ಕೊಠಡಿಗಳ ಸ್ವತ್ಛತೆ ಸೇರಿ ತರಗತಿನಡೆಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಆತಂಕ: ಮೊದಲ ಹಂತದಲ್ಲಿ ಪ್ರೌಢಶಾಲೆ ಆರಂಭಿಸಲು ಸರ್ಕಾರಸೂಚನೆ ನೀಡಿದೆ. ಆದರೆ, ಪ್ರಾಥಮಿಕ ಶಾಲೆಗಳ ಆರಂಭಸದ್ಯಕ್ಕಿಲ್ಲ. ಒಂದೆಡೆ ಕೊರೊನಾ ಪ್ರಕರಣ ಕಡಿಮೆಯಾಗುತ್ತಿಲ್ಲ. ಈಪರಿಣಾಮ ಶಾಲೆಗಳು ಆರಂಭವಾಗುತ್ತಿಲ್ಲ. ಕಳೆದೊಂದುವರ್ಷದಿಂದಲೂ ಶಾಲೆ ಆರಂಭವಾಗದೆ ಮಕ್ಕಳುಮನೆಯಲ್ಲಿಯೇ ಕಾಲ ಕಳೆಯುತ್ತಿರುವುದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಪೋಷಕರು ಚಿಂತೆಗೀಡಾಗುತ್ತಿದ್ದಾರೆ.
ಕೊರೊನಾ ಲಸಿಕೆಗೆ ಹಾಹಾಕಾರವಿಲ್ಲ: ಜಿಲ್ಲೆಗೆ ಕಳೆದ ಒಂದುವಾರದಿಂದ ಸಾಕಷ್ಟು ಕೊರೊನಾ ಲಸಿಕೆ ಪೂರೈಕೆಯಾಗುತ್ತಿದೆ.ಪ್ರತಿದಿ® ಸರಾಸರಿ 20 ಸಾವಿರ ಲಸಿಕೆ ಪೂರೈಕೆಯಾಗುತ್ತಿದೆ ಎಂದುಜಿಲ್ಲಾ ಆರೋಗ್ಯ ಮತು ¤ ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ಕುಮಾರ್ ತಿಳಿಸಿದ್ದಾರೆ.
ಲಸಿಕೆ ಪೂರೈಕೆ:18 ವರ್ಷ ಮೇಲ್ಪಟ್ಟ ಬಹುತೇಕ ವಿದ್ಯಾರ್ಥಿಗಳಿಗೆಕೊರೊನಾ ಸೋಂಕಿಗೆ ಮೊದಲು ಡೋಸ್ ಲಸಿಕೆ ನೀಡಲಾಗಿದೆ.ಶಿಕ್ಷಣ ಸಂಸ್ಥೆಗಳಿಗೇ ಹೋಗಿ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆನೀಡಿದ್ದಾರೆ. ಪ್ರಾಧ್ಯಾಪಕರು, ಶಿಕ್ಷಕರಿಗೂ ಆದ್ಯತೆ ಮೇಲೆ ಲಸಿಕೆನೀಡಲಾಗಿದೆ. ಈಗ ಲಸಿಕೆ ಕೊರತೆ ಇಲ್ಲ. ಲಸಿಕೆ ಕೇಂದ್ರಗಳಿಗ ೆನಿಯಮತಿವಾಗಿ ಲಸಿಕೆ ಪೂರೈಕ ೆ ಮಾಡಲಾಗುತ್ತಿದೆ ಎಂದು ಡಾ.ಸತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು