ಕ್ರೆಡಿಟ್ ಕಾರ್ಡ್ ವಿತರಣೆಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ಆರ್ ಬಿ ಐ ಅನುಮತಿ..!?
Team Udayavani, Aug 19, 2021, 3:32 PM IST
ನವ ದೆಹಲಿ : ದೇಶದ ಅತ್ಯಂತ ದೊಡ್ಡ ನಾಗರಿಕ ಖಾಸಗಿ ವಲಯದ ಎಚ್ ಡಿಎಫ್ ಸಿ ಬ್ಯಾಂಕ್ಗೆ ಹೊಸ ಕ್ರೆಡಿಟ್ ಕಾರ್ಡ್ಗಳನ್ನು ವಿತರಣೆ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್ಬಿಐ) ಅನುಮತಿ ನೀಡಿದೆ.
ಎಚ್ ಡಿಎಫ್ಸಿ ಬ್ಯಾಂಕ್ನಿಂದ ಹೊಸ ಕ್ರೆಡಿಟ್ ಕಾರ್ಡ್ ಗಳನ್ನು ನೀಡದಂತೆ ಮತ್ತು ಡಿಜಿಟಲ್ 2.0 ಕಾರ್ಯಕ್ರಮದ ಅಡಿಯಲ್ಲಿ ತನ್ನ ಡಿಜಿಟಲ್ ವ್ಯವಹಾರ ಚಟುವಟಿಕೆಗಳು ಎಲ್ಲ ಆರಂಭಗಳನ್ನು ನಿಲ್ಲಿಸುವಂತೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಆರ್ ಬಿಐ ನಿರ್ದೇಶಿಸಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್ ನ ಮೂಲಗಳು , “ಹೊಸ ಕಾರ್ಡ್ ಗಳನ್ನು ನೀಡುವುದಕ್ಕಿದ್ದ ನಿರ್ಬಂಧಗಳನ್ನು ಅಂತಿಮಗೊಳಿಸಿ ಹಾಗೂ ಹೊಸ ಕ್ರೆಡಿಟ್ ಕಾರ್ಡ್ ಗಳ ಸೋರ್ಸಿಂಗ್ ನನ್ನು ತೆಗೆದುಕೊಳ್ಳಲು ಆರ್ ಬಿಐ ಈಗ ಬ್ಯಾಂಕ್ ಗೆ ಅನುಮತಿಸಿದೆ” ಎಂದು ತಿಳಿಸಿವೆ.
ಇದನ್ನೂ ಓದಿ : ಅಫ್ಘಾನಿಸ್ತಾನದ ಬಹುಕೋಟಿ ಸಂಪತ್ತು ತಾಲಿಬಾನ್ ಉಗ್ರರ ಕೈಗೆ ಸಿಗದು!
ಎಚ್ ಡಿಎಫ್ ಸಿ ಬ್ಯಾಂಕ್ ದೇಶದ ಅತಿದೊಡ್ಡ ಕ್ರೆಡಿಟ್ ಕಾರ್ಡ್ ನೀಡುವ ಸಂಸ್ಥೆಯಾಗಿದೆ ಮತ್ತು ನಿಷೇಧದ ನಂತರವೂ ಅದೇ ಸ್ಥಾನದಲ್ಲಿಯೇ ಉಳಿಕೊಂಡಿದೆ ಎನ್ನುವುದು ಬ್ಯಾಂಕ್ ನ ಹಿರಿಮೆ.
ಕಳೆದ ಜೂನ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ, ಬ್ಯಾಂಕ್ನ ಪೇಮೆಂಟ್ ವ್ಯವಹಾರದ ದೇಶದ ಮುಖ್ಯಸ್ಥ ಮತ್ತು ತಂತ್ರಜ್ಞಾನ ಪರಿವರ್ತನೆಯ ಉಸ್ತುವಾರಿ ಪರಾಗ್ ರಾವ್ ಪ್ರತಿಕ್ರಿಯಿಸಿ, ಕ್ರೆಡಿಟ್ ಕಾರ್ಡ್ ವ್ಯವಹಾರದ ನಿರ್ಬಂಧ ತೆಗೆದರೆ ಆಕ್ರಮಣಕಾರಿಯಾಗಿ ಮರಳಲು ಬ್ಯಾಂಕ್ ಯೋಜನೆಯನ್ನು ಸಿದ್ಧಪಡಿಸಿದೆ ಎಂದಿದ್ದರು.
ಇನ್ನು, ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ನಿಯಮಾವಳಿಗಳನ್ನು ಸಮಾಧಾನಕರವಾಗಿ ಅನುಸರಿಸುತ್ತಿದ್ದಲ್ಲಿ ಮಾತ್ರ ಪರಿಶೀಲನೆಯ ಬಳಿಕ ನಿರ್ಬಂಧಗಳನ್ನು ತೆರೆವುಗೊಳಿಸಲಾಗುವುದು ಎಂದು ಆರ್ ಬಿಐ ನಿರ್ಬಂಧಗಳನ್ನು ವಿಧಿಸುವಾಗಲೇ ತಿಳಿಸಿತ್ತು.
ನಿಷೇಧದ ನಂತರ ಎಚ್ಡಿಎಫ್ಸಿ ಬ್ಯಾಂಕ್ ತಕ್ಷಣದ, ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿಯ ಮೇಲೆ ಕೇಂದ್ರೀಕರಿಸುವ ಯೋಜನೆಯನ್ನು ಕೆಲವು ತಿಂಗಳ ಹಿಂದೆ ಆರ್ಬಿಐಗೆ ಸಲ್ಲಿಸಿತ್ತು.
ಇನ್ನು ಈ ಬಗ್ಗೆ 2020ರ ಡಿಸೆಂಬರ್ನಲ್ಲಿ ನಿಷೇಧ ಹೇರಿದ ನಂತರ ಎಚ್ಡಿಎಫ್ಸಿ ಬ್ಯಾಂಕ್ನ ಎಂ.ಡಿ. ಮತ್ತು ಸಿಇಒ ಶಶಿ ಜಗದೀಶನ್, “ಸುಧಾರಣಾಭಿವೃದ್ಧಿಗಾಗಿ ಗುರುತಿಸಲಾದ ಸಂಗತಿಗಳನ್ನು ಬಲಪಡಿಸುವ ಉದ್ದೇಶದಿಂದ ನಾವು ತಜ್ಞರು ಮತ್ತು ನಿಯಂತ್ರಕರೊಂದಿಗೆ ಕೆಲಸ ಮಾಡುತ್ತೇವೆ. ಆಂತರಿಕವಾಗಿ ನಮ್ಮನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಮತ್ತು ಬಲಶಾಲಿಯಾಗಿ ಹೊರಹೊಮ್ಮಲು ಇದೊಂದು ಅವಕಾಶ ಎಂದು ನಂಬುತ್ತೇವೆಂದು ಹೇಳಿದ್ದರು.
ಇದನ್ನೂ ಓದಿ : ಕಾಗಿನಲೆ ಸ್ವಾಮೀಜಿ ಆರ್ಶಿವಾದ ಪಡೆದ ಕೇಂದ್ರ ಸಚಿವ ನಾರಾಯಣಸ್ವಾಮಿ: ಎಸ್ ಟಿ ಮೀಸಲಾತಿ ಚರ್ಚೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು